Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲೈಂಗಿಕ ದೌರ್ಜನ್ಯದ ಬಗ್ಗೆ ರಾಗಿಣಿ, ಪ್ರಣೀತಾ ಮಾತು
ಚಿತ್ರರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಕನ್ನಡ ನಟಿಯರು ಕೂಡ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಇದೀಗ ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಣೀತಾ ಈ ಬಗ್ಗೆ ಮೌನ ಮುರಿದಿದ್ದಾರೆ.
ಬಾಲಿವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿದ್ದ ಮೀಟೂ ಅಭಿಯಾನ ಕನ್ನಡಕ್ಕೆ ಕೂಡ ಬಂದಿತ್ತು. ಈಗಾಗಲೇ ಈ ಬಗ್ಗೆ ನಟಿ ಸಂಗೀತ ಭಟ್, ಐಂದ್ರಿತಾ ರೇ, ಶೃತಿ ಹರಿಹರನ್ ಮಾತನಾಡಿದ್ದಾರೆ. ಈಗ ಈ ಅಭಿಯಾನದ ಬಗ್ಗೆ ರಾಗಿಣಿ ಹಾಗೂ ಪ್ರಣೀತಾ ಸಹ ಹೇಳಿಕೆ ನೀಡಿದ್ದಾರೆ.
ಒಂದೇ ಕುಟುಂಬದ ಇಬ್ಬರು ನಟರ 'ಕಾಮ ಪುರಾಣ' ಬಿಚ್ಚಿಟ್ಟ ಸಂಗೀತಾ ಭಟ್
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮೀಟೂ ಅಭಿಯಾನ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಅದಕ್ಕೆ ಈ ಇಬ್ಬರು ನಟಿಯರು ಧ್ವನಿಗೂಡಿಸಿದ್ದಾರೆ. ಮುಂದೆ ಓದಿ..

ಗಿಮಿಕ್ ಆಗಿ ತೆಗೆದುಕೊಳ್ಳಬಾರದು
''ನಾನು ಚಿತ್ರರಂಗಕ್ಕೆ ಬಂದು 10 ವರ್ಷವಾಯ್ತು. ನನಗೆ ಇದುವರೆಗೆ ಈ ರೀತಿಯ ತೊಂದರೆ ಆಗಿಲ್ಲ. ಇದನ್ನು ಪ್ರಚಾರದ ಗಿಮಿಕ್ ಆಗಿ ತೆಗೆದುಕೊಳ್ಳಬಾರದು. ಕೆಲವು ಘಟನೆಗಳನ್ನ ನೋಡಿದಾಗ ಇದನ್ನ ಪ್ರಚಾರಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿಯಲಾಗುತ್ತೆ. '' - ರಾಗಿಣಿ ದ್ವಿವೇದಿ, ನಟಿ
ತಮಿಳು ನಟ ಕೊಟ್ಟ ಕಾಟವನ್ನ ಬಿಚ್ಚಿಟ್ಟ ಸಂಗೀತಾ ಭಟ್

ಒಳ್ಳೆಯ ಉದ್ದೇಶಕ್ಕಾಗಿ ಅಭಿಯಾನ ಪ್ರಾರಂಭವಾಗಿದೆ
''ಒಳ್ಳೆಯ ಉದ್ದೇಶಕ್ಕಾಗಿ ಇದೊಂದು ಅಭಿಯಾನ ಪ್ರಾರಂಭವಾಗಿದೆ. ಈ ರೀತಿ ತೊಂದರೆಗೆ ಸಿಲುಕಿದವರು ಮುಂದೆ ಬಂದು ಮಾತನಾಡಿ. ಇದಕ್ಕೆ ನನ್ನ ಬೆಂಬಲವಿದೆ. ಶೋಷಣೆಗೆ ಒಳಗಾದವರು ಮುಂದೆ ಬಂದು ಹೇಳಿಕೆ ನೀಡುತ್ತಿರುವುದು ಸ್ವಾಗತಾರ್ಹ. ಸಮಾಜದಲ್ಲಿ ಇದರಿಂದ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ.'' - ರಾಗಿಣಿ ದ್ವಿವೇದಿ, ನಟಿ

ಒಂದು ವೇದಿಕೆ ಇರಲಿಲ್ಲ
''ಮೀಟೂ ಅಭಿಯಾನದ ಮೂಲಕ ಎಲ್ಲ ಹೆಣ್ಣು ಮಕ್ಕಳಿಗೆ ಒಂದು ಧ್ವನಿ ಸಿಕ್ಕಂತಾಗಿದೆ. ಇಷ್ಟು ದಿನ ಒಂದು ವೇದಿಕೆ ಇರಲಿಲ್ಲ. ಈಗ ಆ ರೀತಿಯ ಅನುಭವ ಆಗಿರುವವರು ಮುಂದೆ ಬಂದು ಹೇಳಿಕೊಳ್ಳಲು ಒಂದು ಶಕ್ತಿ ಸಿಕ್ಕಿದೆ.'' - ಪ್ರಣೀತಾ, ನಟಿ

ನನಗೆ ಲೈಂಗಿಕ ದೌರ್ಜನ್ಯದ ಅನುಭವಾಗಿಲ್ಲ
''ನನಗೆ ಎಲ್ಲಿಯೂ ಲೈಂಗಿಕ ದೌರ್ಜನ್ಯದಂತಹ ಅನುಭವಾಗಿಲ್ಲ. ಮೀಟೂ ಬಂದ ಮೇಲೆ ಎಲ್ಲರೂ ಧೈರ್ಯವಾಗಿ ತಮ್ಮ ಕರಾಳ ಅನುಭವವನ್ನು ಹೊರ ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.'' - ಪ್ರಣೀತಾ, ನಟಿ