twitter
    For Quick Alerts
    ALLOW NOTIFICATIONS  
    For Daily Alerts

    ಅಂಬಿ ಹೆಸರಿನಲ್ಲಿ ಮಹತ್ವದ ಕೆಲಸಕ್ಕೆ ಮುಂದಾದ ಜಾಕ್ ಮಂಜು

    |

    ಅಂಬರೀಶ್ ಅವರ ನಿಧನದಿಂದ ಇಡೀ ಸ್ಯಾಂಡಲ್ ವುಡ್ ಚಿಂತೆಗೆ ಒಳಗಾಗಿದೆ. ಇಂಡಸ್ಟ್ರಿಗೆ ಮುಂದೆ ಯಾರು ದಿಕ್ಕು ಎಂದು ತಲೆಕೆಡಿಸಿಕೊಂಡಿದೆ. ಅಂಬಿಯ ಅಂತಿಮಯಾತ್ರೆಯಿಂದ ಇನ್ನೂ ಸುಧಾರಿಸಿಕೊಳ್ಳದ ಸಿನಿಮಾ ಕಲಾವಿದರು ಅಂಬಿ ನೆನಪಿಗಾಗಿ, ಅಂಬರೀಶ್ ಅವರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡ್ಬೇಕು ಅಂತ ಚಿಂತೆ ಮಾಡ್ತಿದ್ದಾರೆ.

    ಅದರ ಮೊದಲ ಹೆಜ್ಜೆಯಾಗಿ ನಿರ್ಮಾಪಕ ವಿತರಕ ಜಾಕ್ ಮಂಜು ಒಂದೊಳ್ಳೆ ಕೆಲಸಕ್ಕೆ ಕೈಹಾಕಿದ್ದಾರೆ. ಮಂಡ್ಯದ ಗಂಡು ಅಂಬರೀಶ್ ಅವರ ಹೆಸರಿನಲ್ಲಿ ಮಂಡ್ಯದ ಜನರಿಗಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

    ಅಂಬರೀಶ್ ಅಭಿನಯಿಸಿದ್ದ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಸುದೀಪ್ ಜೊತೆ ಸೇರಿ ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡಿದ್ದರು. ಅಷ್ಟಕ್ಕೂ, ಜಾಕ್ ಮಾಡ್ತಿರೋ ಆ ಒಳ್ಳೆಯ ಕೆಲಸವೇನು.? ಮುಂದೆ ಓದಿ....

    ಅಂಬಿ ಸಿನಿಮಾ ರಿ-ರಿಲೀಸ್

    ಅಂಬಿ ಸಿನಿಮಾ ರಿ-ರಿಲೀಸ್

    'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಮತ್ತೆ ರಿ-ರಿಲೀಸ್ ಮಾಡ್ತಿದ್ದಾರೆ. ಬರುವ ಶುಕ್ರವಾರ ಅಂಬಿಯ ಕೊನೆಯ ಚಿತ್ರವನ್ನ ಮತ್ತೆ ಚಿತ್ರಮಂದಿರಕ್ಕೆ ತರಲಾಗುತ್ತಿದೆ. ಪ್ರಮುಖವಾಗಿ ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ಚಿತ್ರಮಂದಿರಗಳಲ್ಲಿ ಹೆಚ್ಚು ಮಂದಿ ನೋಡುವ ಅವಕಾಶ ಮಾಡಿಕೊಡಲಾಗುತ್ತಿದೆ. ಅದರ ಜೊತೆಗೆ ವಿದೇಶಗಳಲ್ಲಿ ಈ ಸಿನಿಮಾ ಬಿಡುಗಡೆಗೊಳಿಸಲು ಚಿಂತಿಸಲಾಗಿದೆ.

    ವಿಷ್ಣು ಸ್ನೇಹಕ್ಕಾಗಿ ಅಂಬಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬದಲಾಯ್ತಾ.?ವಿಷ್ಣು ಸ್ನೇಹಕ್ಕಾಗಿ ಅಂಬಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬದಲಾಯ್ತಾ.?

    ಬಂದ ಹಣ ಬಸ್ ದುರಂತದಲ್ಲಿ ಮೃತಪಟ್ಟವರಿಗೆ

    ಬಂದ ಹಣ ಬಸ್ ದುರಂತದಲ್ಲಿ ಮೃತಪಟ್ಟವರಿಗೆ

    'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಮರುಬಿಡುಗಡೆ ಮಾಡುವ ಹಣದಿಂದ ಬರುವ ಪೂರ್ತಿ ಹಣವನ್ನ ಮಂಡ್ಯದ ಜನರಿಗೆ ನೀಡುವುದಾಗಿ ಜಾಕ್ ಮಂಜು ತಿಳಿಸಿದ್ದಾರೆ. ಇತ್ತೀಚಿಗಷ್ಟೆ ಮಂಡ್ಯದ ಕರಗನಮರಡಿ ಗ್ರಾಮದ ನಾಲೆಯಲ್ಲಿ ಬಸ್ ಉರುಳಿ 30 ಜನ ಮೃತಪಟ್ಟಿದ್ದರು. ಈ ಮೃತ ಕುಟುಂಬಗಳಿಗೆ ಅಂಬಿ ಸಿನಿಮಾದಿಂದ ಬಂದ ಹಣವನ್ನ ನೀಡುವುದಾಗಿ ಮಂಜು ಹೇಳಿದ್ದಾರೆ.

    ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಬಸ್ ದುರಂತ ಕಂಡು ಮರುಗಿದ್ದ ಅಂಬಿ

    ಬಸ್ ದುರಂತ ಕಂಡು ಮರುಗಿದ್ದ ಅಂಬಿ

    ಪಾಂಡವಪುರದ ಕರಗನಮಡರಿ ಗ್ರಾಮದ ಬಳಿ ನಾಲೆಗೆ ಬಸ್ ಬಿದ್ದು ಮೂವತ್ತು ಜನ ಮೃತಪಟ್ಟ ಸುದ್ದಿ ಕೇಳಿದ್ದ ಅಂಬರೀಶ್ ಭಾರಿ ನೋವಿಗೆ ಒಳಗಾಗಿದ್ದರು. ಇದರಿಂದ ಹೆಚ್ಚು ಕೊರಗಿದ್ದರು. ನಮ್ಮ ಜನಕ್ಕೆ ಹೀಗಾಯಿತಲ್ಲಾ ಎಂದು ಕಣ್ಣೀರಿಟ್ಟಿದ್ದರು. ಸ್ವತಃ ಈ ಬಗ್ಗೆ ಮಾಧ್ಯಮಗಳಲ್ಲಿ ತಾವೇ ಖುದ್ದು ಫೋನ್ ಮಾಡಿ ಮಾತನಾಡಿದ್ದರು.

    ರಾಜ್-ವಿಷ್ಣು-ಅಂಬಿ ಸಾವನ್ನ ಸಂಭ್ರಮಿಸಿದ 'ದುಷ್ಟರ'ನ್ನ ಏನು ಮಾಡಬೇಕು.?ರಾಜ್-ವಿಷ್ಣು-ಅಂಬಿ ಸಾವನ್ನ ಸಂಭ್ರಮಿಸಿದ 'ದುಷ್ಟರ'ನ್ನ ಏನು ಮಾಡಬೇಕು.?

    ದುರಂತದ ದಿನವೇ ಅಂಬಿ ಸಾವು

    ದುರಂತದ ದಿನವೇ ಅಂಬಿ ಸಾವು

    ಬಸ್ ದುರಂತ ಕಂಡು ಮರುಗಿದ್ದ ಅಂಬಿ ಮಾನಸಿಕವಾಗಿ ನೊಂದಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ತುಂಬಾ ಭಾವುಕರಾಗಿ ಮಾತನಾಡಿದ್ದರು. ದುರದೃಷ್ಟವಶಾತ್ ಅಂದ್ರೆ. ಮಾತನಾಡಿದ ಕೆಲವೇ ಗಂಟೆಗಳಲ್ಲಿ ಅಂದ್ರೆ, ಅಂದು ರಾತ್ರಿಯೇ ಅಂಬರೀಶ್ ನಿಧನರಾಗಿದ್ದು ನಿಜಕ್ಕೂ ದುರ್ದೈವ.

    ಈ ಮೂರು ಧಾರಾವಾಹಿಗಳನ್ನ ತಪ್ಪದೇ ನೋಡುತ್ತಿದ್ದರಂತೆ ಅಂಬಿ ಈ ಮೂರು ಧಾರಾವಾಹಿಗಳನ್ನ ತಪ್ಪದೇ ನೋಡುತ್ತಿದ್ದರಂತೆ ಅಂಬಿ

    English summary
    Audiences will get to see the Jaleela’s act once again as Ambareesh’s last film, Ambi Ning Vayassaytho, which hit screens on September 27, gets an on-demand re-release.
    Tuesday, November 27, 2018, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X