Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅವನೇ ಶ್ರೀಮನ್ನಾರಾಯಣ' ಟೀಸರ್ ಕ್ವಾಲಿಟಿ ಕಂಡು ಜೈ ಎಂದ ಕನ್ನಡಿಗರು
ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ರಕ್ಷಿತ್ ಹೊಸ ಸಿನಿಮಾ 'ಅವನೇ ಶ್ರೀನ್ನಾರಾಯಣ' ಟೀಸರ್ ಬಿಡುಗಡೆಯಾಗಿದೆ. ಸಂಜೆ ಆರು ಗಂಟೆಗೆ ಬಿಡುಗಡೆಯಾಗಬೇಕಿದ್ದ ಟೀಸರ್ ತಾಂತ್ರಿಕ ತೊಂದರೆಯಿಂದ ಬಹಳ ತಡವಾಗಿ ರಿಲೀಸ್ ಆಯ್ತು.
ತಡ ರಾತ್ರಿ ಬಿಡುಗಡೆಯಾದರೂ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ಸಿಗಲು ಶುರುವಾಗಿದೆ. ಈ ಹಿಂದೆ ಚಿತ್ರದ ಒಂದು ಟೀಸರ್ ಬಂದಿದ್ದು, ಈಗ ಎರಡನೇ ಟೀಸರ್ ಕೂಡ ಸೂಪರ್ ಆಗಿದೆ. ಟೀಸರ್ ನ ಕ್ವಾಲಿಟಿ ಎಲ್ಲರ ಗಮನ ಸೆಳೆಯುವ ಅಂಶವಾಗಿದೆ.
ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ?
ಬಾಲಿವುಡ್ ಸಿನಿಮಾಗಳ ಮಟ್ಟಿಗೆ ಕನ್ನಡದ ಸಿನಿಮಾವನ್ನು ಮಾಡಬಹುದು ಎಂದು ಇಡೀ ತಂಡ ತೋರಿಸಿಕೊಟ್ಟಿದೆ. ಮೊದಲ ಬಾರಿಗೆ ಸಿಂಪಲ್ ಸ್ಟಾರ್ ಪೊಲೀಸ್ ಆಗಿದ್ದಾರೆ. ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೀಸರ್ ಮೂಲಕ ಆ ಪಾತ್ರವನ್ನು ಪರಿಚಯ ಮಾಡಿದ್ದಾರೆ.
''ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾದ ಬೇಕು.'' ಎನ್ನುವ ಡೈಲಾಗ್ ರೋಮಾಂಚಕವಾಗಿವೆ.
ಬಾಲಿವುಡ್ ಚಿತ್ರವನ್ನ ಹೋಲುತ್ತಿದೆ ಶ್ರೀಮನ್ನಾರಾಯಣನ ಪೋಸ್ಟರ್
ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ ಹೈಲೈಟ್ ಆಗಿದೆ. ಸಚಿನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಮತ್ತೆ ರಕ್ಷಿತ್ ಶೆಟ್ಟಿ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎರಡು ವರ್ಷದ ಬಳಿಕ ರಕ್ಷಿತ್ ಸಿನಿಮಾ ಬಿಡುಗಡೆಯಾಗುತ್ತಿದೆ
ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ಗೌಡ ಬಂಡವಾಳ ಹಾಕಿದ್ದಾರೆ. ಶಾನ್ವಿ ಶ್ರೀವತ್ಸವ್ ಚಿತ್ರದ ನಾಯಕಿ. ಇನ್ನು ಟೀಸರ್ ನಲ್ಲಿ ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.