ಡಿವಿಡಿ ರೂಪದಲ್ಲಿ ಅವಾರ್ಡ್ ವಿನ್ನಿಂಗ್ ಕನ್ನಡ ಚಿತ್ರಗಳು
ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕ ವರ್ಗವನ್ನು ತಲುಪುತ್ತಿಲ್ಲ. ಚಿತ್ರಮಂದಿರದಲ್ಲಿ ಯಾಕೆ ಬಿಡುಗಡೆಯಾಗಲ್ಲ. ಆ ರೀತಿಯ ಚಿತ್ರಗಳನ್ನು ನೋಡುವುದು ಬಲು ದುರ್ಲಭ ಎಂಬ ಮಾತುಗಳು ಹಾಗೂ ಈ ರೀತಿಯ ಸಿನಿಮಾಗಳ ಇತಿಮಿತಿಗಳ ನಡುವೆ ಟೋಟಲ್ ಕನ್ನಡ ಸಂಸ್ಥೆ ಒಂದಷ್ಟು ಉತ್ತಮ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಹೊರತರುತ್ತಿದೆ.
ಈ ಬಾರಿ ನಾಲ್ಕು ಕನ್ನಡ ಸಿನಿಮಾಗಳನ್ನು ಡಿವಿಡಿ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಪಿ ಶೇಷಾದ್ರಿ ನಿರ್ದೇಶನದ 'ಬೆಟ್ಟದ ಜೀವ' ಹಾಗೂ 'ಭಾರತ್ ಸ್ಟೋರ್ಸ್', ಗಿರೀಶ್ ಕಾಸರವಳ್ಳಿ ಅವರ 'ಕೂರ್ಮಾವತಾರ', ಕೆಎನ್ ಟಿ ಶಾಸ್ತ್ರಿ ಅವರ 'ಸರಸಮ್ಮನ ಸಮಾಧಿ' ಚಿತ್ರಗಳು ಡಿವಿಡಿ ರೂಪದಲ್ಲಿ ಲಭ್ಯ. [ಪಿ ಶೇಷಾದ್ರಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ]

ಡಿವಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಆಗಮಿಸಲಿದ್ದಾರೆ. ಕಾರ್ಯಕ್ರಮವನ್ನು ಹರಿಹರಪುರ ಮಂಜುನಾಥ್ ನಿರೂಪಿಸಲಿದ್ದಾರೆ. ಸ್ಥಳ: ಬಿಪಿ ವಾಡಿಯಾ ಸಭಾಂಗಣ, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-04. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99862 22402 (ಒನ್ಇಂಡಿಯಾ ಕನ್ನಡ)


Click it and Unblock the Notifications











