Don't Miss!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಡಾ.ರಾಜ್ ಕುಟುಂಬ
ಸಮಾಜದ ಪರ ಚಿಂತನೆಗಳನ್ನು ಹೊಂದಿದ್ದ ಡಾ.ರಾಜ್ ಕುಮಾರ್ ರವರ ವಿಚಾರಧಾರೆಗಳನ್ನು ಅವರ ಕುಟುಂಬ ಚಾಚು ತಪ್ಪದೆ ಪಾಲಿಸುತ್ತಾ ಬಂದಿದೆ. ತಮ್ಮ ಟ್ರಸ್ಟ್ ನ ಮುಖಾಂತರ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಅಣ್ಣಾವ್ರ ಮಕ್ಕಳು ಇದೀಗ ಜನರಿಗೆ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಲು ಸಜ್ಜಾಗಿದೆ.
ಪರಿಸರ ಸಂರಕ್ಷಣೆಗೆ ಮುಂದಾಗಿರುವ ಡಾ.ರಾಜ್ ಕುಮಾರ್ ಮಕ್ಕಳು, ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗುಗಳನ್ನು ಬಳಸುವಂತೆ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಕರೆ ಕೊಟ್ಟಿದೆ.
''ನಾಳಿನ ಭಾರತ ನಿರ್ಮಾಣದ ಸ್ವಚ್ಛತೆಯ ನಡೆಗೆ ನಮ್ಮದೊಂದು ಪ್ರಯತ್ನ'' ಎನ್ನುತ್ತ ಡಾ.ರಾಜ್ ಕುಮಾರ್ ರವರ ಭಾವಚಿತ್ರವುಳ್ಳ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಅಣ್ಣಾವ್ರ ಮಕ್ಕಳು ಸಿದ್ಧಪಡಿಸಿದ್ದಾರೆ.
ಸಿದ್ದಗಂಗಾ ಮಠದ 10 ಸಾವಿರ ಮಕ್ಕಳಿಗೆ ನೇತ್ರ ತಪಾಸಣೆ ಮಾಡಿಸಿದ ಅಪ್ಪು
ಅಸಲಿಗೆ, ಈ ಬಟ್ಟೆ ಬ್ಯಾಗುಗಳ ಐಡಿಯ ಮೊದಲು ಹೊಳೆದಿದ್ದು ರಾಘವೇಂದ್ರ ರಾಜ್ ಕುಮಾರ್ ಗೆ. ರಾಘಣ್ಣನ ಐಡಿಯಗೆ ಮನಸೋತು ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಕೂಡ ಕೈಜೋಡಿಸಿದ್ದಾರೆ.
ಪ್ಲಾಸ್ಟಿಕ್ ನ ಸಂಪೂರ್ಣವಾಗಿ ನಿವಾರಿಸಲು ಮೊದಲ ಹೆಜ್ಜೆ ಬಟ್ಟೆ ಬ್ಯಾಗ್ ಗಳನ್ನು ಬಳಸುವುದು ಎಂಬುದು ಅಣ್ಣಾವ್ರ ಮಕ್ಕಳ ಅಭಿಪ್ರಾಯ. ಡಾ.ರಾಜ್ ಕುಮಾರ್ ಮನೆಗೆ, ಕಛೇರಿಗೆ, ಅಕಾಡೆಮಿಗೆ ಬರುವವರಿಗೆ ಸದ್ಯ ಈ ಬ್ಯಾಗ್ ಗಳು ಸಿಗಲಿವೆ. ಎಲ್ಲರಿಗೂ ಈ ಬ್ಯಾಗ್ ಗಳು ಸಿಗುವಂತೆ ವಿತರಣೆ ಮಾಡಲು ಅಣ್ಣಾವ್ರ ಮಕ್ಕಳು ಪ್ಲಾನ್ ಮಾಡಿದ್ದಾರೆ.
ಶಬರಿಮಲೆಗೆ ಹೋದಾಗಲೂ ಬ್ಯಾಗ್ ಗಳನ್ನು ವಿತರಿಸಲು ಅಣ್ಣಾವ್ರ ಕುಟುಂಬ ತಯಾರಾಗಿದೆ. ಅಣ್ಣಾವ್ರ ಹೆಸರಿನಲ್ಲಿ ಈ ಒಳ್ಳೆಯ ಕೆಲಸ ಶುರುವಾದರೆ, ಅದನ್ನ ಎಲ್ಲರೂ ಪಾಲಿಸುತ್ತಾರೆ ಎಂಬ ನಂಬಿಕೆ ಅವರ ಮಕ್ಕಳಿಗಿದೆ.