Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಮ್ಯಾ ವಾಹನಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ
ಮೈಸೂರಿನ ಲಲಿತ್ ಮಹಲ್ ಅರಮನೆಯ ಬಳಿ ರಮ್ಯಾ ಅವರು ದಿಗಂತ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ರಮ್ಯಾ ಅವರು ಚಿತ್ರೀಕರಣಕ್ಕಾಗಿ ಅರಮನೆ ಬಳಿಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿದ್ದಾರೆ.
ಘಟನೆಯಿಂದ ಕೆಲ ಕಾಲ ವಿಚಲಿತರಾದ ರಮ್ಯಾ ನಂತರ ಕಾರಿನಿಂದ ಇಳಿದು ಕಾರ್ಯಕರ್ತರನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಏನಾಯ್ತು ಅಲ್ಲಿ? : ಒಂದ್ನಿಮಿಷ..ಒಂದ್ನಿನಿಷ ಇರಿ ಪ್ಲೀಸ್ ಎಂದು ರಮ್ಯಾ ವಾಹನ(caravan)ದ ಬಾಗಿಲಲ್ಲಿ ನಿಂತು ಹಲವು ಬಾರಿ ಮನವಿ ಮಾಡಿದರೂ ಕಾರ್ಯಕರ್ತರು ಓಗೊಡಲಿಲ್ಲ.
'ಇಂಡಸ್ಟ್ರೀಯಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಶೂಟಿಂಗ್ ಮಾಡಬಾರದು ಅಂತಾ ನಮಗೆ ರೂಲ್ ಹಾಕಿಲ್ಲ. ನೀವು ಇಲ್ಲಿ ಬಂದು ಗಲಾಟೆ ಮಾಡಿ ಇಲ್ಲಿರುವ ಕೆಲಸಗಾರರು ಕೆಲಸ ನಿಲ್ಲಿಸಿದರೆ ಅವರಿಗೆ ಯಾರು ದುಡ್ಡು ಕೊಡುತ್ತಾರೆ' ಎಂದು ರಮ್ಯಾ ಪ್ರಶ್ನಿಸಿದರು.
'ಇಡೀ ಭಾರತವೇ ಡೀಸೆಲ್ ಬೆಲೆ ಏರಿಕೆ, ಎಫ್ ಡಿಐ, ಅಡುಗೆ ಅನಿಲ ಸಮಸ್ಯೆ ವಿರುದ್ಧ ಹೋರಾಟಕ್ಕೆ ಇಳಿದಿದೆ. ನೀವು ಕೂಡಾ ಬೆಂಬಲ ನೀಡಬೇಕು. ಚಿತ್ರರಂಗದ 150 ಜನ ದಿನದ ಊಟ ಹೋಗುತ್ತದೆ ಎನ್ನುತ್ತೀರಾ.. ಲಕ್ಷಾಂತರ ಜನಕ್ಕೆ ನೋವಾದರೆ ಸ್ಪಂದಿಸಲು ಆಗುವುದಿಲ್ಲವೇ' ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶಭರಿತವಾಗಿ ಆಗ್ರಹಿಸಿದರು.
ನಾವು ಕಲಾವಿದೆಯಾಗಿ ಅವರು ಬಂದ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಲು ಬಂದಿದ್ದೇವು. ಆದರೆ, ಆಕೆ ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿ ಕೆರಳಿಸಿದರು ಎಂದು ಕಾರ್ಯಕರ್ತರು ಹೇಳಿದರು.
ಮಾತಿನ ಚಕಮಕಿ ಮುಂದುವರೆಯುತ್ತಿದ್ದಂತೆ ಸ್ಥಳದಲ್ಲಿ ಕೆಲ ಪೊಲೀಸರು ಕಾಣಿಸಿಕೊಂಡು ರಮ್ಯಾ ಅವರನ್ನು ಬೇರೊಂದು ವಾಹನಕ್ಕೆ ಸಾಗಿಸಿ ಸ್ಥಳದಿಂದ ಬೇರೆಡೆಗೆ ಕಳುಹಿಸಿದರು.
ಇಡೀ ಚಿತ್ರತಂಡದವೇ ಅಲ್ಲಿತ್ತು ಆದರೆ, ರಮ್ಯಾ ಅವರನ್ನು ಮಾತ್ರ ಟಾರ್ಗೆಟ್ ಮಾಡಿದ್ದು ಏಕೆ? ಚಿತ್ರರಂಗ ಬಂದ್ ಗೆ ಬೆಂಬಲ ನೀಡುವಂತೆ ಕರೆ ನೀಡದಿರುವಾಗ ಕಲಾವಿದೆಯಾಗಿ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿಯಲು ಸಾಧ್ಯವೇ?
ಕಾಂಗ್ರೆಸ್ ಯುವ ನಾಯಕಿ ರಮ್ಯಾ ಹಾಗೂ ಬಿಜೆಪಿ ಕಾರ್ಯಕರ್ತರ ಹಠಮಾರಿತನಕ್ಕೆ ಇದು ಮತ್ತೊಂದು ನಿದರ್ಶನವಾಗಿತ್ತು.