Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಟ್ಟ' ಗಿರಿರಾಜ್ 'ಅದ್ವೈತ' ಬಿಡುಗಡೆ ಡೇಟ್ ಫಿಕ್ಸ್
ಕೇವಲ 35 ಸಾವಿರ ಬಂಡವಾಳದೊಂದಿಗೆ ಡಿಜಿಟಿಲ್ ಕೆಮೆರಾ ಬಳಸಿ "ನವಿಲಾದವರು" ಎಂಬ ಸದಭಿರುಚಿ ಚಿತ್ರ ನಿರ್ದೇಶಿಸಿದ್ದ ಗಿರಿರಾಜ್ ಹಾಗೂ ಏಕ್ಸ್ ಕ್ಯೂಸ್ ಮಿ ಖ್ಯಾತಿ ನಿರ್ಮಾಪಕ ಎನ್ ಎಂ ಸುರೇಶ್ ಅವರ ಕಾಂಬಿನೇಷನ್ ಚಿತ್ರ 'ಅದ್ವೈತ' ಕೊನೆಗೂ ಬಿಡುಗಡೆ ಭಾಗ್ಯ ಕಾಣುತ್ತಿದೆ. ಡಿ.6 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆ ಸೇರಿದಂತೆ ರಾಜ್ಯದೆಲ್ಲೆಡೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗಿರಿರಾಜ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಸೋಲಿನ
ಮೇಲೆ
ಸೋಲು
ಕಂಡರೂ
ಎದೆಗುಂದರೆ
ಹೊಸಬರಿಗೆ
ಅವಕಾಶ
ನೀಡುವ
ಸುರೇಶ್
ಅವರ
ಧೈರ್ಯದ
ಬಗ್ಗೆ
ಗಾಂಧಿನಗರದಲ್ಲಿ
ಮೆಚ್ಚುಗೆ
ಮಾತುಗಳು
ಆಗಾಗ
ಕೇಳಿಬರುತ್ತದೆ.
ಈಗ
ಕಿಶೋರ್,
ಸುಕೃತಾ
ಅಭಿನಯದ
ಸಿನಿರಸಿಕರು,
ವಿಮರ್ಶಕರ
ಮೆಚ್ಚುಗೆಯ
'ಜಟ್ಟ'
ಚಿತ್ರವನ್ನು
ನೀಡಿರುವ
ಗಿರಿರಾಜ್
ಅವರು
ಎಲ್ಲರಿಗೂ
ಚಿರಪರಿಚಿತರಾಗಿದ್ದಾರೆ.
ಆದರೆ,
ಅದ್ವೈತ
ನಿರ್ದೇಶಿಸಿದಾಗ
ಗಿರಿರಾಜ್
ಕೂಡಾ
ಹೊಸಬರಾಗಿದ್ದರು.
ಎಲ್ಲವೂ
ಸರಿಯಾಗಿ
ಆಗಿದ್ದರೆ
ಜಟ್ಟ
ಚಿತ್ರಕ್ಕಿಂತ
ಮೊದಲು
ಅದ್ವೈತ
ಬಿಡುಗಡೆಯಾಗಬೇಕಿತ್ತು.
ಮೊದಲಿಗೆ ನಾಯಕ ಅಜಯ್ ರಾವ್ ಗೆ ಸೂಕ್ತ ನಾಯಕಿ ಸಿಗದೇ ತುಂಬಾ ದಿನ ಒದ್ದಾಟ ನಡೆಸಿದ ಚಿತ್ರ ತಂಡ ಕೊನೆಗೆ ಹರ್ಷಿಕಾ ಪೂಣಚ್ಚ ಅವರನ್ನು ಹಾಕಿಕೊಂಡು ಚಿತ್ರ ಪೂರೈಸಿತು. ಏಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ತನ್ನನ್ನು ಚಿತ್ರರಂಗಕ್ಕೆ ಕರೆತಂದ ಸುರೇಶ್ ಅವರು ಕೇಳಿದ ತಕ್ಷಣ ಈ ಪ್ರಾಜೆಕ್ಟ್ ಅನ್ನು ಅಜಯ್ ರಾವ್ ಒಪ್ಪಿಕೊಂಡಿದ್ದರು.
2010
ವರ್ಷಾರಂಭದಲ್ಲಿ
ಸೆಟ್ಟೇರಿದ
ಅದ್ವೈತ
ಚಿತ್ರ
ಪಕ್ಕಾ
ಕಮರ್ಷಿಯಲ್
ಅಂಶಗಳುಳ್ಳ
ಚಿತ್ರವಾಗಿದ್ದು,
ಮನರಂಜನೆ
ಗ್ಯಾರಂಟಿ
ಎನ್ನಲಾಗಿದೆ.
ಏಕ್ಸ್
ಕ್ಯೂಸ್
ಮಿ
ಚಿತ್ರದ
ಮೂಲಕ
ತನ್ನನ್ನು
ಚಿತ್ರರಂಗಕ್ಕೆ
ಕರೆತಂದ
ಸುರೇಶ್
ಅವರು
ಕೇಳಿದ
ತಕ್ಷಣ
ಪ್ರಾಜೆಕ್ಟ್
ಗೆ
ಅಜಯ್
ರಾವ್
ಒಪ್ಪಿಕೊಂಡಿದ್ದರು.
<center><center><iframe
width="100%" height="480" src="//www.youtube.com/embed/YI_QdmhC1VQ" frameborder="0" allowfullscreen></iframe></center></center>
ಎಕ್ಸ್ ಕ್ಯೂಸ್ ಮಿ ಭರ್ಜರಿ ಯಶಸ್ಸಿನ ನಂತರ 7"ಓ ಕ್ಲಾಕ್, ಚಪ್ಪಾಳೆ, ತನನಂ ಹಾಗೂ ತೆಲುಗಿನಲ್ಲಿ ಸೀನು ವಾಸಂತಿ ಲಕ್ಷ್ಮಿ ಎಂಬ ಚಿತ್ರಗಳನ್ನು ನಿರ್ಮಿಸಿ ಸಾಲು ಸಾಲಾಗಿ ಕೈ ಸುಟ್ಟುಕೊಂಡ ಸುರೇಶ್ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡಾ ಅವರ ಬಹು ನಿರೀಕ್ಷಿತ ಚಿತ್ರ ರಾವಣ ಗೆಲುವು ಕಾಣಲಿಲ್ಲ. 'ರಾಯಲ್ ಸ್ಟಾರ್' ಅಜಯ್ ರಾವ್ ಅವರಿಗೂ ಒಳ್ಳೆ ಬ್ರೇಕ್ ಬೇಕಿದೆ. ಗಿರಿ ಅವರಿಗೂ ಒಂದು ಕಮರ್ಷಿಯಲ್ ಯಶಸ್ಸು ಸಿಗಬೇಕಿದೆ. ಎಲ್ಲವೂ ಪ್ರೇಕ್ಷಕ ಪ್ರಭುಗಳ ಕೈಲಿದೆ.