Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಾಲೆಂಜಿಂಗ್ ಸ್ಟಾರ್' ಸಾಕು 'ಮೈಸೂರು ರತ್ನ' ಯಾಕೆ?
ಚಾಲೆಂಜಿಂಗ್ ಸ್ಟಾರ್.......ಅಭಿಮಾನಿಗಳು ಪ್ರೀತಿಯಿಂದ ನಟ ದರ್ಶನ್ ಅವರಿಗೆ ನೀಡಿರುವ ಬಿರುದು. ಇದರ ಜೊತೆಗೆ 'ಕರುನಾಡ ಕಲಾರತ್ನ', 'ಬಾಕ್ಸ್ ಆಫೀಸ್ ಸುಲ್ತಾನ್', 'ಮೈಸೂರು ಹುಲಿ' ಹೀಗೆ ಸಾಲು ಸಾಲು ಬಿರುದುಗಳು ದರ್ಶನ್ ಅವರ ಮುಡಿಗೇರಿದೆ. ಆದ್ರೆ, ದರ್ಶನ್ ಅವರ ಮಾತ್ರ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳಲು ತುಂಬಾ ಇಷ್ಟಪಡ್ತಾರೆ.
ಈ ಕಥೆ ಯಾಕೆ ಈಗ ಅಂತೀರಾ.....ವಿಷ್ಯ ಇದೆ. ಇತ್ತೀಚೆಗಷ್ಟೇ 'ಕರಿಯ-2' ಚಿತ್ರದ ಆಡಿಯೋವನ್ನ ನಟ ದರ್ಶನ್ ಬಿಡುಗಡೆ ಮಾಡಿದ್ದರು. ಸಂತೋಷ್ ಅಭಿನಯದ ಈ ಚಿತ್ರವನ್ನ ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ, ದರ್ಶನ್ ಅಭಿನಯಿಸಿದ್ದ 'ಕರಿಯ' ಚಿತ್ರವನ್ನ ಇದೇ ಅನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಹೀಗಾಗಿ, ದರ್ಶನ್ ಅಂದ್ರೆ ಈ ನಿರ್ಮಾಪಕರಿಗೆ ತುಂಬಾ ಅಭಿಮಾನ.
ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್
ಈ ಅಭಿಮಾನದ ಸಂಕೇತವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 'ಕರಿಯ-2' ಚಿತ್ರತಂಡ 'ಮೈಸೂರು ರತ್ನ' ಎಂಬ ಬಿರುದನ್ನ ನೀಡಿದೆ. ಚಿತ್ರತಂಡದ ಪ್ರೀತಿಗೆ ಮನತುಂಬಿ ಮಾತನಾಡಿದ ದರ್ಶನ್, ''ನನಗೆ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಅಂತ ಬಿರುದು ಇದೆ. ನನಗ್ಯಾಕೆ....ನಮ್ಮ ಹೀರೋ ಸಂತೋಷ್ ಗೆ ಮೈಸೂರು ರತ್ನ ಅಂತ ಇಡಿ ಎಂದು ಸಂತೋಷ ವ್ಯಕ್ತಪಡಿಸಿದರು.
'ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್