Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಿಕೆಟ್ ತಂಡದಲ್ಲಿ ದಲಿತರಿಗೆ ಸ್ಥಾನವೇ ಇಲ್ಲ, ಅಲ್ಲಿಯೂ ಮೀಸಲಾತಿ ಬೇಕು: ಚೇತನ್ ಅಹಿಂಸ
ನಟ ಚೇತನ್ ಅಹಿಂಸ, ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ನಿರ್ದಿಷ್ಟ ಪಕ್ಷದೊಟ್ಟಿಗೆ ಗುರುತಿಸಿಕೊಂಡು ಪಕ್ಷ ರಾಜಕೀಯದಲ್ಲಿ ತೊಡಗಿಲ್ಲವಾದರೂ ಸಾಮಾಜಿಕ ವಿಷಯಗಳ ಬಗ್ಗೆ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಬಿಜೆಪಿ ಹಾಗೂ ಇನ್ನಿತರೆ ಕೆಲವು ರಾಜಕೀಯ ಪಕ್ಷಗಳ ಧ್ಯೇಯ, ಆದರ್ಶಗಳಿಗೆ ವಿರುದ್ಧವಾದ ನಿಲವುಗಳನ್ನು ಹೊಂದಿರುವ ಚೇತನ್ ಅಹಿಂಸ, ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುತ್ತಾ ಬಂದಿದ್ದಾರೆ. ಇದರಿಂದಾಗಿ ಹಲವು ಬಾರಿ ವಿರೋಧವನ್ನು, ಕೆಲವರಿಂದ ಸಹಮತವನ್ನೂ ಗಳಿಸಿದ್ದಾರೆ. ಒಮ್ಮೆ ಜೈಲಿಗೂ ಹೋಗಿ ಬಂದಿದ್ದಾರೆ.
ಥುಳಿತಕ್ಕೊಳಗಾದವರ, ದಲಿತರ ಅಲ್ಪಸಂಖ್ಯಾತರ ಪರ ದನಿ ಎತ್ತುತ್ತಾ ಬಂದಿರುವ ಚೇತನ್ ಅಹಿಂಸ, ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿಯ ಅಗತ್ಯತೆಯ ಆಗಾಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಮೀಸಲಾತಿ ವಿಷಯದ ಬಗ್ಗೆ ಚೇತನ್ ಅಹಿಂಸ ಆಡಿರುವ ಮಾತುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಚೇತನ್ ಹೇಳಿಕೆಯನ್ನು ವಿರೋಧಿಸಿದ್ದರೆ, ಕೆಲವರು ಹಾಸ್ಯ ಮಾಡಿದ್ದಾರೆ. ಕೆಲವರು ಸಹಮತವನ್ನೂ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ ತಂಡವು ಸತತ ಕ್ರಿಕೆಟ್ ಆಡುತ್ತಿದ್ದು, ಇತ್ತೀಚೆಗೆ ಟಿ20 ವಿಶ್ವಕಪ್ ಸೋಲು, ಆ ಬಳಿಕ ನ್ಯೂಜಿಲೆಂಡ್ ಸರಣಿ ಸೋಲನ್ನು ಅನುಭವಿಸಿದೆ. ಇದರ ಬೆನ್ನಲ್ಲೆ ನಟ ಚೇತನ್ ಅಹಿಂಸ, ಕ್ರಿಕೆಟ್ ತಂಡದಲ್ಲಿಯೂ ಮೀಸಲಾತಿ ಜಾರಿ ಆಗಬೇಕು ಎಂದು ಹೇಳಿದ್ದಾರೆ. ಇದು ವಿರೋಧಕ್ಕೂ ಹಾಸ್ಯಕ್ಕೂ ವಸ್ತುವಾಗಿದೆ.
'ಎಲ್ಲ ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಬೇಕು. ಶಿಕ್ಷಣ, ರಾಜಕೀಯ ಎಲ್ಲದರಲ್ಲೂ ಬೇಕು. ಬಿಸಿಸಿಐ, ಭಾರತ ಕ್ರಿಕೆಟ್ ತಂಡದ ಸುದೀರ್ಘ ಇತಿಹಾಸವನ್ನು ಗಮನಿಸಿದರೆ ಅದರಲ್ಲಿ ದಲಿತರಿಗೆ ಪ್ರಾತಿನಿಧ್ಯ ಬಹಳ ಕಡಿಮೆ. ನನ್ನ ಅಧ್ಯಯನದ ಪ್ರಕಾರ ಹಾಗೂ ಅಂಕಿ-ಅಂಶಗಳ ಪ್ರಕಾರ ಇಷ್ಟು ದಶಕಗಳಲ್ಲಿ ಕೇವಲ ನಾಲ್ಕು ಮಂದಿಯಷ್ಟೆ ದಲಿತರು ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ'' ಎಂದಿದ್ದಾರೆ ಚೇತನ್.
''ಭಾರತದಲ್ಲಿ ದಲಿತರು, ಆದಿವಾಸಿಗಳು ಸೇರಿದರೆ ಸುಮಾರು 30% ಜನಸಂಖ್ಯೆ ಆಗುತ್ತಾರೆ. ಹಾಗಿದ್ದರೆ ಕೇವಲ ನಾಲ್ಕು ಜನ ಭಾರತ ತಂಡದಲ್ಲಿ ಆಡುವುದೆಂದರೆ ಅದು ಅನ್ಯಾಯ. ಇದು ಉದ್ದೇಶಪೂರ್ವಕವಾಗಿ ಹೀಗಾಗಿದೆ ಎನ್ನುವುದಕ್ಕಿಂತಲೂ ಇದು ರಚನಾತ್ಮಕ ಸಮಸ್ಯೆ ಎಂದು ನನಗೆನಿಸುತ್ತದೆ. ಕೇವಲ ದೊಡ್ಡ ಖಾಸಗಿ ಶಾಲೆಗಳಷ್ಟೆ ಕ್ರಿಕೆಟ್ಗೆ ಪ್ರಾಧಾನ್ಯತೆ ನೀಡುತ್ತಿವೆ. ಅಲ್ಲಿ ಎಲ್ಲ ಶ್ರೀಮಂತರ ಮಕ್ಕಳಷ್ಟೆ ಕಲಿಯುತ್ತಿರುತ್ತಾರೆ. ಅಲ್ಲಿ ದಲಿತರಿಗೆ ಅವಕಾಶವೇ ಇರುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿಯೂ ಅತ್ಯುತ್ತಮ ಪ್ರತಿಭಾವಂತರಿದ್ದಾರೆ ಆದರೆ ಅವಕಾಶವೇ ಸಿಗುತ್ತಿಲ್ಲ'' ಎಂದಿದ್ದಾರೆ ಚೇತನ್.