Just In
- 33 min ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 2 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 11 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- News
ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಬುಲಾವ್
- Finance
ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ
- Automobiles
3 ಡೋರುಗಳ, 5 ಡೋರುಗಳ ಫೇಸ್ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ
- Sports
ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಭೇಟಿ ಮಾಡಿದ 'ದಿ ವಿಲನ್' ನಿರ್ಮಾಪಕ ಮನೋಹರ್
ಒಬ್ಬ ಸ್ಟಾರ್ ನಟ, ಒಬ್ಬ ದೊಡ್ಡ ನಿರ್ಮಾಪಕ ಭೇಟಿ ಮಾಡಿದಾಗ ಇಬ್ಬರು ಸೇರಿ ಒಂದು ಸಿನಿಮಾ ಮಾಡುತ್ತಿದ್ದಾರಾ..? ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗ ಅದೇ ರೀತಿಯ ನಿರೀಕ್ಷೆ ಶುರುವಾಗಿದೆ.
ನಟ ದರ್ಶನ್ ರನ್ನು ನಿರ್ಮಾಪಕ ಸಿ ಆರ್ ಮನೋಹರ್ ಭೇಟಿ ಮಾಡಿದ್ದಾರೆ. ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಸಿ ಆರ್ ಮನೋಹರ್ ಆಗಮಿಸಿದ್ದು, ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳನ್ನು ಸಿ ಆರ್ ಮನೋಹರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಷ್ಟದಲ್ಲಿದ್ದ ಅಭಿಮಾನಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್
ಈ ಫೋಟೋ ನೋಡಿದ ತಕ್ಷಣ ದರ್ಶನ್ ಜೊತೆಗೆ ಸಿ ಆರ್ ಮನೋಹರ್ ಸಿನಿಮಾ ಮಾಡುತ್ತಾರಾ ಎನ್ನವ ಪ್ರಶ್ನೆ ಮೂಡುತ್ತದೆ. ಆದರೆ, ಆ ರೀತಿಯ ಪ್ಲಾನ್ ಏನು ಇಲ್ಲವಂತೆ. ಇದೊಂದು ಸಹಜ ಭೇಟಿ ಅಷ್ಟೇ ಆಗಿದೆಯಂತೆ. ಕೆಲ ದಿನಗಳಿಂದ ಇಬ್ಬರು ಭೇಟಿ ಮಾಡಬೇಕು ಎಂದುಕೊಂಡಿದ್ದು, ನಿನ್ನೆ ಅದು ಕೂಡಿ ಬಂದಿದೆ.
ಸದ್ಯಕ್ಕೆ, ಇಬ್ಬರು ಯಾವುದೇ ಸಿನಿಮಾ ಮಾಡುವ ಪ್ಲಾನ್ ನಲ್ಲಿ ಇಲ್ಲವಂತೆ. ದರ್ಶನ್ ಮೂರ್ನಾಲ್ಕು ಚಿತ್ರಗಳು ಬ್ಯುಸಿ ಇದ್ದಾರೆ, ಮನೋಹರ್ ಕೂಡ ಹೊಸ ಚಿತ್ರ ಶುರು ಮಾಡಿದ್ದಾರೆ. ಹೀಗಾಗಿ ಇದು ಸಿನಿಮಾದ ವಿಷಯ ಭೇಟಿ ಅಲ್ಲವಂತೆ.
ಸದ್ಯಕ್ಕೆ ಇಲ್ಲ ಎಂದರೂ ಮುಂದೊಂದು ದಿನ ದರ್ಶನ್ ಸಿನಿಮಾವನ್ನು ಸಿ ಆರ್ ಮನೋಹರ್ ನಿರ್ಮಾಣ ಮಾಡುವ ಆಸೆ ಇದೆಯಂತೆ. ಅಂದಹಾಗೆ, ಈ ಹಿಂದೆ 'ದಿ ವಿಲನ್', 'ರೋಗ್', 'ವಜ್ರಕಾಯ', 'ಶಿವಂ' ಚಿತ್ರಗಳನ್ನು ಮನೋಹರ್ ನಿರ್ಮಾಣ ಮಾಡಿದ್ದರು.