Don't Miss!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಭೇಟಿ ಮಾಡಿದ 'ದಿ ವಿಲನ್' ನಿರ್ಮಾಪಕ ಮನೋಹರ್
ಒಬ್ಬ ಸ್ಟಾರ್ ನಟ, ಒಬ್ಬ ದೊಡ್ಡ ನಿರ್ಮಾಪಕ ಭೇಟಿ ಮಾಡಿದಾಗ ಇಬ್ಬರು ಸೇರಿ ಒಂದು ಸಿನಿಮಾ ಮಾಡುತ್ತಿದ್ದಾರಾ..? ಎನ್ನುವ ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗ ಅದೇ ರೀತಿಯ ನಿರೀಕ್ಷೆ ಶುರುವಾಗಿದೆ.
ನಟ ದರ್ಶನ್ ರನ್ನು ನಿರ್ಮಾಪಕ ಸಿ ಆರ್ ಮನೋಹರ್ ಭೇಟಿ ಮಾಡಿದ್ದಾರೆ. ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಸಿ ಆರ್ ಮನೋಹರ್ ಆಗಮಿಸಿದ್ದು, ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳನ್ನು ಸಿ ಆರ್ ಮನೋಹರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಷ್ಟದಲ್ಲಿದ್ದ ಅಭಿಮಾನಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್
ಈ ಫೋಟೋ ನೋಡಿದ ತಕ್ಷಣ ದರ್ಶನ್ ಜೊತೆಗೆ ಸಿ ಆರ್ ಮನೋಹರ್ ಸಿನಿಮಾ ಮಾಡುತ್ತಾರಾ ಎನ್ನವ ಪ್ರಶ್ನೆ ಮೂಡುತ್ತದೆ. ಆದರೆ, ಆ ರೀತಿಯ ಪ್ಲಾನ್ ಏನು ಇಲ್ಲವಂತೆ. ಇದೊಂದು ಸಹಜ ಭೇಟಿ ಅಷ್ಟೇ ಆಗಿದೆಯಂತೆ. ಕೆಲ ದಿನಗಳಿಂದ ಇಬ್ಬರು ಭೇಟಿ ಮಾಡಬೇಕು ಎಂದುಕೊಂಡಿದ್ದು, ನಿನ್ನೆ ಅದು ಕೂಡಿ ಬಂದಿದೆ.
ಸದ್ಯಕ್ಕೆ, ಇಬ್ಬರು ಯಾವುದೇ ಸಿನಿಮಾ ಮಾಡುವ ಪ್ಲಾನ್ ನಲ್ಲಿ ಇಲ್ಲವಂತೆ. ದರ್ಶನ್ ಮೂರ್ನಾಲ್ಕು ಚಿತ್ರಗಳು ಬ್ಯುಸಿ ಇದ್ದಾರೆ, ಮನೋಹರ್ ಕೂಡ ಹೊಸ ಚಿತ್ರ ಶುರು ಮಾಡಿದ್ದಾರೆ. ಹೀಗಾಗಿ ಇದು ಸಿನಿಮಾದ ವಿಷಯ ಭೇಟಿ ಅಲ್ಲವಂತೆ.
ಸದ್ಯಕ್ಕೆ ಇಲ್ಲ ಎಂದರೂ ಮುಂದೊಂದು ದಿನ ದರ್ಶನ್ ಸಿನಿಮಾವನ್ನು ಸಿ ಆರ್ ಮನೋಹರ್ ನಿರ್ಮಾಣ ಮಾಡುವ ಆಸೆ ಇದೆಯಂತೆ. ಅಂದಹಾಗೆ, ಈ ಹಿಂದೆ 'ದಿ ವಿಲನ್', 'ರೋಗ್', 'ವಜ್ರಕಾಯ', 'ಶಿವಂ' ಚಿತ್ರಗಳನ್ನು ಮನೋಹರ್ ನಿರ್ಮಾಣ ಮಾಡಿದ್ದರು.