Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲೆಮಾದೇಶ್ವರ ಅರಣ್ಯದಲ್ಲಿ ದರ್ಶನ್, ಚಿಕ್ಕಣ್ಣ ಸುತ್ತಾಟ
ನಟ ದರ್ಶನ್ ಮತ್ತೆ ಕಾಡು ಸೇರಿದ್ದಾರೆ. ಕಾಡು ಸುತ್ತುವುದು, ಕಾಡುಪ್ರಾಣಿಗಳ ಚಿತ್ರ ತೆಗೆಯುವುದು ದರ್ಶನ್ ರೂಢಿಸಿಕೊಂಡಿರುವ ಹವ್ಯಾಸ.
Recommended Video
ದರ್ಶನ್ ಪ್ರಾಣಿ ಪ್ರೇಮದ ಬಗ್ಗೆ ಅಭಿಮಾನಿಗಳಿಗೆ ಗೊತ್ತಿರುವಂಥಹದ್ದೆ. ದರ್ಶನ್ ಪ್ರಕೃತಿ ಪ್ರೇಮಿ ಸಹ. ಕಾಡು ಪ್ರಾಣಿಗಳ ಚಿತ್ರ ತೆಗೆಯಲು ದೇಶದ ಉತ್ತಮ ಕಾಡುಗಳನ್ನು ಸುತ್ತಿತ್ತುತ್ತಾರೆ ದರ್ಶನ್. ಸ್ವಾಭಾವಿಕವಗಿ ಪ್ರಕೃತಿ ಪ್ರೇಮ ದರ್ಶನ್ ಒಳಗೆ ಮೊಳೆತಿದೆ.
ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?
ಇದೇ ಕಾರಣಕ್ಕೆ ದರ್ಶನ್ ಅವರನ್ನು ರಾಜ್ಯದ ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ದರ್ಶನ್ ಸಹ ಪ್ರೀತಿಯಿಂದಲೇ ಗೌರವವನ್ನು ಒಪ್ಪಿಕೊಂಡಿದ್ದಾರೆ. ಇದರ ಭಾಗವಾಗಿಯೇ ದರ್ಶನ್ ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಗೆ ಭೇಟಿ ನೀಡಿದ್ದಾರೆ.
ದರ್ಶನ್ ಜೊತೆ ಚಿಕ್ಕಣ್ಣ ಭೇಟಿ
ದರ್ಶನ್ ಹಾಗೂ ನಟ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಮಕ್ಕಳಿ ವ್ಯಾಪ್ತಿಯಲ್ಲಿರುವ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ಸಸಿ ನೆಟ್ಟು ಅರಣ್ಯ ಪ್ರಸ್ತಾಹ ಯೋಜನೆಗೆ ಚಾಲನೆ ನೀಡಿದ್ದಾರೆ. ದರ್ಶನ್ ಅವರೊಟ್ಟಿಗೆ ನಟ ಚಿಕ್ಕಣ್ಣ ಸಹ ಇದ್ದು, ದರ್ಶನ್ ಜೊತೆ ಕೈಜೋಡಿಸಿದ್ದಾರೆ.
ಕೆಲ ಕಾಲ ಸುತ್ತಾಟ ಸಹ ನಡೆಸಿದ್ದಾರೆ
ದರ್ಶನ್ ಹಾಗೂ ಚಿಕ್ಕಣ್ಣ ಅವರು ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಕೆಲ ಕಾಲ ಸುತ್ತಾಟ ನಡೆಸಿ ಅರಣ್ಯದ ಅನುಭವ ಸವಿದಿದ್ದಾರೆ. ಇವರೊಂದಿಗೆ ಕೆಲ ಅರಣ್ಯಾಧಿಕಾರಿಗಳು ಸಹ ಸಾಥ್ ನೀಡಿದ್ದಾರೆ.
ಕೊರೊನಾ ನಿಯಮ ಉಲ್ಲಂಘನೆ: ದರ್ಶನ್ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ
ಫಾರೆಸ್ಟ್ ವಾಚರ್ಗಳೊಂದಿಗೆ ಸಂವಹನ
ನಂತರ ದರ್ಶನ್ ಅವರು ಫಾರೆಸ್ಟ್ ವಾಚರ್ಗಳೊಟ್ಟಿಗೆ ಮಾತುಕತೆ ನಡೆಸಿ ಅವರಿಗೆ ಸ್ಪೂರ್ತಿ ತುಂಬವ ಕಾರ್ಯ ಮಾಡಿದ್ದಾರೆ. ಈ ಹಿಂದೆಯೂ ದರ್ಶನ್ ಅವರು ವಾಚರ್ಸ್ಗಳೊಟ್ಟಿಗೆ ಮಾತುಕತೆ ನಡೆಸಿದ್ದರು. ಅವರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದರು.
ಐಎಫ್ಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್
ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕುತ್ತಾರೆ
ದರ್ಶನ್ ಅವರು ತೆಗೆದ ವನ್ಯಜೀವಿ ಚಿತ್ರಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಅರಣ್ಯಾಭಿವೃದ್ಧಿ ಹಾಗೂ ಇನ್ನೂ ಹಲವು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಚಿಕ್ಕಣ್ಣ ಅವರು ಈ ಹಿಂದೆ ದರ್ಶನ್ ತೆಗೆದ ಚಿತ್ರವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರು.
ದುಬಾರಿ ಕಾರು ಬಿಟ್ಟು ರೈತ ಮಿತ್ರ ಟ್ರ್ಯಾಕ್ಟರ್ ಓಡಿಸುತ್ತಿರುವ ಡಿ ಬಾಸ್ ದರ್ಶನ್