Just In
Don't Miss!
- News
ಬುಧವಾರ ಜೋ ಬೈಡನ್, ಕಮಲಾ ಹ್ಯಾರಿಸ್ ಪ್ರಮಾಣವಚನ: ಸಮಯ, ವೀಕ್ಷಣೆ ವಿವರ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 19ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಮೇಲಿನ ಆಪಾದನೆಯನ್ನ ಅಳಿಸಿ ಹಾಕಿದ ಸುಮಲತಾ
ಸಿನಿಮಾ ಸ್ಟಾರ್ ಗಳು ರಾಜಕಾರಣಿಗಳ ಪರ ಪ್ರಚಾರ ಮಾಡಿದ್ರೆ ಜನ ಸೇರ್ತಾರೆ, ಮತಗಳಾಗಿ ಪರಿವರ್ತನೆಯಾಗಲ್ಲ ಎಂಬುದು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿರುವ ವಿಷ್ಯ. ಆದರೂ ಪ್ರತಿ ಚುನಾವಣೆಯಲ್ಲೂ ಸಿನಿಮಾ ತಾರೆಯರು ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾನೇ ಇರ್ತಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಪ್ರಚಾರದ ಬಗ್ಗೆ ಆಪಾದನೆ, ಆರೋಪ ಒಂದು ಭಾರಿ ಸದ್ದು ಮಾಡಿತ್ತು. ದರ್ಶನ್ ಪ್ರಚಾರ ಮಾಡಿದ್ರೆ ಅವರ ಅಭ್ಯರ್ಥಿ ಗೆಲ್ಲಲ್ಲ ಎಂದು ಕಾಲೆಳೆದರು. ಅದಕ್ಕೆ ಉದಾಹರಣೆ ಎಂಬಂತೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಂಡ ಸೋಲು ಕಣ್ಣ ಮುಂದೆ ಇತ್ತು.
ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದ ಚಾಲೆಂಜಿಂಗ್ ಸ್ಟಾರ್: ದರ್ಶನ್ ಗೆ ಧಿಕ್ಕಾರ ಕೂಗಿದ ಜೆಡಿಎಸ್.!
ಅದೇ ವಿಷ್ಯವನ್ನ ಮಂಡ್ಯದಲ್ಲಿ ತೇಲಿಬಿಟ್ಟು ಡಿ ಬಾಸ್ ಬಳಗಕ್ಕೆ ಮಾನಸಿಕವಾಗಿ ಅಟ್ಯಾಕ್ ಮಾಡಿದ್ದರು ಪ್ರತಿಪಕ್ಷಗಳು. ಅಂದು ದರ್ಶನ್ ಪ್ರಚಾರ ಮಾಡಿದ್ದ ಸಿದ್ದರಾಮಯ್ಯ ಗೆಲ್ಲಲಿಲ್ಲ. ಈಗ ಸುಮಲತಾನೂ ಗೆಲ್ಲಲ್ಲ ಎಂದು ಬಿಂಬಿಸಿದರು. ಆದ್ರೀಗ, ಡಿ ಬಾಸ್ ಮೇಲಿನ ಆಪಾದನೆ, ಆರೋಪವನ್ನ ಭರ್ಜರಿ ಗೆಲುವಿನ ಮೂಲಕ ಸುಮಲತಾ ಅಳಿಸಿಹಾಕಿದ್ದಾರೆ. ಮುಂದೆ ಓದಿ....

ಕಾಲರ್ ಎತ್ತಿದ ಡಿ-ಬಾಸ್ ಬಳಗ
ದರ್ಶನ್ ಪ್ರಚಾರ ಮಾಡಿದ್ರೆ ಸುಮಲತಾ ಗೆಲ್ಲಲ್ಲ ಎಂದುವರಿಗೆ ಮಂಡ್ಯ ಫಲತಾಂಶ ಉತ್ತರ ನೀಡಿದೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅಂಬರೀಶ್ ಪತ್ನಿ ಜಯಗೊಳಿಸಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಖುಷಿ ತಂದಿದೆ. ಸುಮಲತಾ ಗೆಲುವಿನಲ್ಲಿ ಡಿ ಬಾಸ್ ಅವರ ಪಾಲು ಇದೆ ಎಂದು ಕಾಲರ್ ಎತ್ತಿದ್ದಾರೆ.
ಫಲಿಸಲಿಲ್ಲ ದರ್ಶನ್ ಪ್ರಚಾರ: ಚಾಮುಂಡೇಶ್ವರಿಯಲ್ಲಿ ಸಿದ್ದು ಗೆಲ್ಲಲಿಲ್ಲ.!

ಹತ್ತಕ್ಕೂ ಹೆಚ್ಚು ದಿನ ಡಿ ಬಾಸ್ ಪ್ರಚಾರ
ಮಂಡ್ಯದಲ್ಲಿ ಸುಮಲತಾ ಪರ ಕ್ಯಾಂಪೇನ್ ಮಾಡಿದ್ದ ದರ್ಶನ್ ಸತತವಾಗಿ ಹತ್ತಕ್ಕೂ ಹೆಚ್ಚು ದಿನ ಬೀದಿಗಿಳಿದು ಮತ ಕೇಳಿದ್ದರು. ಮಂಡ್ಯ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ಎಲ್ಲ ಕಡೆಯೂ ಹಳ್ಳಿ ಹಳ್ಳಿಗೂ ಹೋಗಿದ್ದರು. ಹೋದೆಲ್ಲೆಲ್ಲ ಜನಸಾಗರವೇ ಸೇರಿತ್ತು.
ಯಾರೋ ನಾಲ್ಕು ಜನ 'ಡಿ ಬಾಸ್' ಅಂತಾರೆ: ದರ್ಶನ್ ವಿರುದ್ಧ ಸಿಎಂ ವಾಗ್ದಾಳಿ

ರಾಬರ್ಟ್ ಸೆಟ್ ನಲ್ಲೇ ಸಂಭ್ರಮ
ರಾಬರ್ಟ್ ಚಿತ್ರೀಕರಣದಲ್ಲಿರುವ ದರ್ಶನ್, ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದಾರೆ ಎಂದು ತಿಳಿಯುತ್ತಿದ್ದಂತೆ ವಿಡಿಯೋ ಮೂಲಕ ಮಂಡ್ಯ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ರಾಬರ್ಟ್ ಸೆಟ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಂಡ್ಯ ಅಭಿವೃದ್ದಿಗಾಗಿ ಸುಮಲತಾ ಅಮ್ಮ ಎಲ್ಲ ರೀತಿಯ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
MP ಆದ ಸುಮಲತಾ ಅಂಬರೀಶ್ ಮುಂದಿನ ನಡೆಯೇನು?

ದರ್ಶನ್-ಯಶ್ ಜುಗಲ್ ಬಂಧಿ
ಮಂಡ್ಯದಲ್ಲಿ ಸುಮಲತಾ ಜಯಗಳಿಸಲು ಹಲವು ಕಾರಣಗಳಿರಬಹುದು. ಅದರಲ್ಲಿ ಒಂದು ಕಾರಣ ಜೋಡೆತ್ತುಗಳ ಬಲ. ದರ್ಶನ್ ಮತ್ತು ಯಶ್ ಒಟ್ಟಿಗೆ ನಿಂತು ಮಂಡ್ಯದಲ್ಲಿ ಅಬ್ಬರದ ಪ್ರಚಾರ ಮಾಡಿದ್ದು ಹಾಗೂ ಜನರ ಮನಸ್ಸು ಸುಮಲತಾ ಪರವಾಗಿ ವಾಲುವಂತೆ ಅವರು ಮಾಡಿದ ಕೆಲವು ಕೆಲಸಗಳು ಕೂಡ ಗೆಲುವಿಗೆ ಕಾರಣವಾಗಿದೆ. ಇದನ್ನೇ ಸುಮಲತಾ ಕೂಡ ಹೇಳಿದ್ದಾರೆ. ನನ್ನ ಗೆಲುವಿನಲ್ಲಿ ಯಶ್ ಮತ್ತು ದರ್ಶನ್ ಇಬ್ಬರು ಇರಲಿದ್ದು, ಎಲ್ಲರೂ ಸೇರಿ ಸಂಭ್ರಮಿಸುತ್ತೇವೆ ಎಂದಿದ್ದಾರೆ.