Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂದೇಶ್ ಹೋಟೆಲ್ ಬಿಟ್ಟು ಬೇರೆ ಕಡೆ ಸುದ್ದಿಗೋಷ್ಠಿ ಮಾಡಿದ್ದು ಇದೇ ಕಾರಣಕ್ಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿಗೆ ಹೋದಾಗೆಲ್ಲಾ ಸ್ನೇಹಿತ, ಹಿತೈಷಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಾರೆ. ದರ್ಶನ್ ಅವರ ಪಾರ್ಟಿ, ಪ್ರೆಸ್ಮೀಟ್ ಏನೇ ಇದ್ದರು ಇದೇ ಹೋಟೆಲ್ನಲ್ಲಿ ಇರ್ತಿತ್ತು. ಆದರೆ, ಅರುಣಾ ಕುಮಾರಿ ವಿಚಾರದಲ್ಲಿ ನಡೆದ ಪ್ರೆಸ್ಮೀಟ್ ಸಂದೇಶ್ ಹೋಟೆಲ್ನಲ್ಲಿ ಆಗಿಲ್ಲ.
Recommended Video
ಸಪ್ಲೈಯರ್ ಘಟನೆ ನಡೆದ ಮೇಲೆ ನಟ ದರ್ಶನ್ ಸಂದೇಶ್ ಹೋಟೆಲ್ನಿಂದ ಅಂತರ ಕಾಯ್ದುಕೊಂಡರಾ ಎಂಬ ಅನುಮಾನ ಕಾಡಿದೆ. ಇದೀಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿಯಿಂದ ತಿಂಗಳ ಹಿಂದೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಹೋಟೆಲ್ ಮಾಲೀಕ ಸಂದೇಶ್ ಪ್ರತಿಕ್ರಿಯೆ ನೀಡಿದ್ದು, ''ಗಲಾಟೆ ಆಗಿದ್ದು ನಿಜ, ಹಲ್ಲೆ ಮಾಡಿಲ್ಲ. ಬೈಯ್ದರು ಅಷ್ಟೇ'' ಎಂದಿದ್ದಾರೆ. ಏನಿದು ಪ್ರಕರಣ ಮುಂದೆ ಓದಿ...

ಸಂದೇಶ್ ಹೋಟೆಲ್ನಿಂದ ಡಿ ಬಾಸ್ ಅಂತರ?
ಸಂದೇಶ್ ಹೋಟೆಲ್ ಅಂದ್ರೆ ಅದೊಂದು ರೀತಿ ನಟ ದರ್ಶನ್ ಅವರದ್ದೇ ಎನ್ನುವ ಮಾತಿದೆ. ದರ್ಶನ್ ಹಾಗೂ ಸ್ನೇಹಿತರು ಯಾರೇ ಮೈಸೂರಿಗೆ ಬಂದ್ರೆ ಸಂದೇಶ್ ಪ್ರಿನ್ಸ್ ಹೋಟೆಲ್ ಫಿಕ್ಸ್. ಆದ್ರೆ, ಈ ಹೋಟೆಲ್ನಿಂದ ನಟ ದರ್ಶನ್ ಅಂತರ ಕಾಯ್ದುಕೊಂಡರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಅರುಣಾಕುಮಾರಿ ವಿಚಾರವಾಗಿ ದರ್ಶನ್ ಪ್ರೆಸ್ಮೀಟ್ ಮಾಡುವ ವೇಳೆ ಬೇರೆ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದು.
ಅರುಣಾಕುಮಾರಿ
ಪ್ರಕರಣ:
ದರ್ಶನ್
ಮತ್ತು
ಸ್ನೇಹಿತರ
ವಿರುದ್ಧ
ಸಿಡಿದೆದ್ದ
ಇಂದ್ರಜಿತ್

ಬಹಳಷ್ಟು ಜನರು ಕೇಳಿದ್ರು
ಸಂದೇಶ್ ಹೋಟೆಲ್ ಬಿಟ್ಟು ಬೇರೆ ಹೋಟೆಲ್ನಲ್ಲಿ ದರ್ಶನ್ ಪ್ರೆಸ್ ಮೀಟ್ ಮಾಡಿದ್ಮೇಲೆ ಬಹಳಷ್ಟು ಜನರು ಸಂದೇಶ ಅವರಲ್ಲಿ ''ಏಕೆ ನಿಮ್ಮ ಹೋಟೆಲ್ನಲ್ಲಿ ಪ್ರೆಸ್ಮೀಟ್ ಮಾಡಿಲ್ಲ'' ಎಂದು ಕೇಳಿದರಂತೆ. ಇದು ಸಹಜವಾಗಿ ಕೇಳಬೇಕಾದ ಪ್ರಶ್ನೆಯೇ. ತನ್ನದೇ ಹೋಟೆಲ್ ಎನ್ನುವಷ್ಟು ಆತ್ಮೀಯತೆ ಹೊಂದಿರುವ ನಟ ಪ್ರೆಸ್ಮೀಟ್ಗಾಗಿ ಬೇರೆ ಹೋಟೆಲ್ಗೆ ಹೋದ್ರು ಅಂದ್ರೆ ಅದರ ಹಿಂದಿನ ಕಾರಣ ಹುಡುಕುವುದು ಸಾಮಾನ್ಯ.

ಆ ಘಟನೆಯಿಂದ ಬೇಸರ ಆಯ್ತಾ?
ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ರು ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದರು. 'ಹಲ್ಲೆ ಮಾಡಿಲ್ಲ, ಬೈಯ್ದರು ಅಷ್ಟೇ' ಎಂದು ಸಂದೇಶ್ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ನಡೆದಾಗ ದರ್ಶನ್ ಸ್ವಲ್ಪ ಕೋಪವಾಗಿ ಇದ್ದರು, ಅಡುಗೆ ಬಡಿಸುವ ವಿಚಾರದಲ್ಲಿ ಸಪ್ಲೈಯರ್ ಮೇಲೆ ರೇಗಾಡಿದರು ಎಂದು ಸಂದೇಶ್ ಹೇಳಿದ್ದಾರೆ. ಈ ವೇಳೆ ಕಾರ್ಮಿಕರ ಪರವಾಗಿ ಸಂದೇಶ್ ಮಾತನಾಡಿ, ದರ್ಶನ್ ಅವರನ್ನು ಸಮಾಧಾನ ಪಡಿಸಿದ್ದು ಆಗಿದೆ. ಈ ಘಟನೆ ಬಳಿಕ ದಾಸ ಸಂದೇಶ್ ಹೋಟೆಲ್ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ದಲಿತನ
ಮೇಲೆ
ದರ್ಶನ್
ಹಲ್ಲೆ
ಆರೋಪ:
ಇಂದ್ರಜಿತ್
ಸುಳ್ಳು
ಹೇಳುತ್ತಿದ್ದಾರೆಂದ
ಸಂದೇಶ್
ನಾಗರಾಜ್

ದರ್ಶನ್ ಜೊತೆ ಮಾತನಾಡಿದ ಸಂದೇಶ್
''ದರ್ಶನ್ ಸ್ನೇಹದಲ್ಲಿ ಬಿರುಕು, ಮುನಿಸು ಏನು ಇಲ್ಲ. ನಾವು ಯಾವಾಗಲೂ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡ್ತೇವೆ. ಕೆಲವು ದಿನಗಳಿಂದ ದರ್ಶನ್ ಫಾರ್ಮ್ಹೌಸ್ನಲ್ಲಿ ಇದ್ದರು. ಹೋಟೆಲ್ ಕಡೆ ಬಂದಿಲ್ಲ. ಈ ಘಟನೆ ಆಗಿದ್ದು ಒಂದು ತಿಂಗಳ ಹಿಂದೆ'' ಎಂದು ಸಂದೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆ ಸುದ್ದಿಯಾಗುತ್ತಿದ್ದಂತೆ ನಟ ದರ್ಶನ್ಗೆ ಫೋನ್ ಮಾಡಿದ ನಿರ್ಮಾಪಕ ಸಂದೇಶ್ ಮಾತನಾಡಿದರಂತೆ.