Don't Miss!
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ತಂದೆಗೆ ಕಿಡ್ನಿ ಸಮಸ್ಯೆಯಾದಾಗ ಕಾಪಾಡಿತ್ತು ಈ ಸಂಸ್ಥೆ
Recommended Video
ಮೈಸೂರಿನ ಸುತ್ತೂರಿನಲ್ಲಿ ಜಾತ್ರೆ ಶುರುವಾಗಿದೆ. ಇಂದು ಜಾತ್ರೆಯ ಎರಡನೇ ದಿನವಾಗಿದೆ. ನಿನ್ನೆ ಜಾತ್ರೆ ಅದ್ದೂರಿಯಾಗಿ ಪ್ರಾರಂಭವಾಗಿದೆ.
ನಿನ್ನೆ ಕಾರ್ಯಕ್ರಮದ ಉದ್ಘಾಟನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಟ ದರ್ಶನ್ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಿದರು. ಅಭಿಮಾನಿಗಳ ಸಮ್ಮುಖದಲ್ಲಿ ಅನೇಕ ವಿಚಾರಗಳನ್ನು ದಾಸ ಹಂಚಿಕೊಂಡರು.
ಕಾರನ್ನು ಫಾಲೋ ಮಾಡಿಕೊಂಡು ಹೋದ ಅಭಿಮಾನಿಗೆ 'ನಮಸ್ಕಾರ' ಎಂದ ದರ್ಶನ್.!
ಸುತ್ತೂರು ಸಂಸ್ಥೆಗೆ ಬಗ್ಗೆ ಬಹಳ ಅಭಿಮಾನ ಹೊಂದಿರುವ ದರ್ಶನ್ ಆ ಸಂಸ್ಥೆ ಹಿಂದೆ ಮಾಡಿದ ಸಹಾಯವನ್ನು ನೆನೆದರು. ಅಂದಹಾಗೆ, ಈ ಕಾರ್ಯಕ್ರಮದಲ್ಲಿ ದರ್ಶನ್ ಆಡಿದ ಮಾತುಗಳು ಮುಂದಿವೆ ಓದಿ...
ಜಿ ಎಸ್ ಎಸ್ ಜೊತೆಗೆ ಅವಿನಾಭಾವ ಸಂಬಂಧ
''ಎಲ್ಲ ಪೂಜ್ಯರಿಗೆ ನಮಸ್ಕಾರ. ಒಮ್ಮೆ ಬುದ್ದಿಯವರು ಸಿಕ್ಕು ಕಾರ್ಯಕ್ರಮ ಇದೆ ನೀನು ಬರಬೇಕು ಎಂದು ಹೇಳಿದ್ದರು. ಯಾವಾಗ ಇದ್ದರೂ ಹೇಳಿ ಬಂದೆ ಬರುತ್ತೇನೆ ಎಂದಿದೆ. ಸುತ್ತೂರು ನನಗೆ ಹಿಂದೆಯಿಂದಲೂ ಗೊತ್ತಿದೆ. ದರ್ಶನ್ ಗೆ ಜಿ ಎಸ್ ಎಸ್ ಸಂಸ್ಥೆ ಜೊತೆಗೆ ಅವಿನಾಭಾವ ಸಂಬಂಧ ಇದೆ.'' - ದರ್ಶನ್, ನಟ
ತಂದೆಗೆ ಕಿಡ್ನಿ ಸಮಸ್ಯೆ ಆದಾಗ
''ನಾನೊಬ್ಬ ಜೆಎಸ್ ಎಸ್ ವಿದ್ಯಾರ್ಥಿ. ಇಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ಮಾಡಿದ್ದೆ. ಆದರೆ, ಆರು ತಿಂಗಳಿಗೆ ವಾಪಾಸಾದೆ, ನನ್ನ ಯೋಗ್ಯತೆ ಅಷ್ಟೇ ಇತ್ತು. ಅದಕ್ಕಿಂತ ಹೆಚ್ಚಾಗಿ, ನನ್ನ ತಂದೆಗೆ ಕಿಡ್ನಿ ಸಮಸ್ಯೆ ಆದಾಗ ಆರ್ಥಿಕವಾಗಿ ಜೆಎಸ್ಎಸ್ ಆಸ್ಪತ್ರೆ ಬಹಳ ಸಹಾಯ ಮಾಡಿದೆ. ಎಂದಿಗೂ ಅವರಿಗೆ ಚಿರಋಣಿ ಆಗಿರುತ್ತೇನೆ.'' - ದರ್ಶನ್, ನಟ
'ಬಜಾರ್' ಹೀರೋಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದ ದರ್ಶನ್
ದನಗಳನ್ನು ನೋಡುವ ಆಸೆ
"ನಾನು ಚಿಕ್ಕ ಪುಟ್ಟ ಪಾತ್ರಗಳನ್ನ ಮಾಡಿದ್ದಕ್ಕೆ ಇಲ್ಲಿ ಕರೆದು ಕೂರಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ಸದಾ ಹೀಗೆ ಇರಲಿ. ನಾನೊಬ್ಬ ಕಾಮಾನ್ ಮ್ಯಾನ್ ಆಗಿದ್ದರೆ ಜಾತ್ರೆಯಲಿ ಆರಾಮಾಗಿ ಓಡಾಡಿಕೊಂಡು, ಇಲ್ಲಿ ಇರುವ ದನಗಳನ್ನು ನೋಡಿಕೊಂಡು ಬರುತ್ತಿದೆ. ಆದರೆ, ಈಗ ನೀವು ನನಗೆ ಹೋಗಲು ಬಿಡುವುದಿಲ್ಲ.'' - ದರ್ಶನ್, ನಟ
ವಿದ್ಯಾರ್ಥಿಗಳಿಗೆ ಬುದ್ದಿ ಮಾತು
''ಎಲ್ಲ ವಿದ್ಯಾರ್ಥಿಗಳಿಗೆ ಹೇಳುವುದು ಒಂದೇ. ಪರೀಕ್ಷೆ ಹತ್ತಿರ ಬರುತ್ತಿದೆ. ಓದದೆ ಇರುವ ಕಷ್ಟ ನನಗೆ ಗೊತ್ತಿದೆ. ಒಂದು ಪದವಿ ಇದ್ದರೆ, ಅದು ಒಂದು ಕೋಟಿ ರೂಪಾಯಿ ಇದ್ದ ಹಾಗೆ. ಎಲ್ಲರೂ ಚೆನ್ನಾಗಿ ಓದಿ. ನಮ್ಮ ಮೇಲಿನ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ. ನಮಸ್ಕಾರ'' - ದರ್ಶನ್, ನಟ