ವಿವಾದಿತ ಲೇಖಕ ಯೋಗೇಶ್ ಮಾಸ್ಟರ್ ಸೆಕೆಂಡ್ ಇನ್ನಿಂಗ್ಸ್
ತಮ್ಮ 'ಢುಂಢಿ' ಕೃತಿಯ ಮೂಲಕ ವಿಘ್ನ ವಿನಾಶಕ ವಿಘ್ನೇಶ್ವರನನ್ನು ವಿಚಿತ್ರವಾಗಿ ಸೃಷ್ಟಿಸಿ ಕೋಟ್ಯಾಂತರ ಆಸ್ತಿಕರ ಪಾಲಿನ ವಿಲನ್ ಆದ ಯೋಗೇಶ್ ಮಾಸ್ಟರ್ ಅವರು ಇನ್ನೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಈ ಹಿಂದೆ ಅವರು 'ಪ್ರೀತಿ ಪ್ಯಾರ್ ಔರ್ ಲವ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇದೀಗ 'ಮೂರು ಬಿಟ್ಟವರು ಊರಿಗೆ ದೊಡ್ಡವರು' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಕೊಪ್ಪಳದಲ್ಲಿ ಈ ಚಿತ್ರದ ಮುಹೂರ್ತ ಶುಕ್ರವಾರ (ಫೆ.20) ನಡೆಯಿತು. [ಸ್ಯಾಂಡಲ್ ವುಡ್ ಗೆ 'ಢುಂಢಿ' ಯೋಗೇಶ್ ಮಾಸ್ಟರ್]

ಬಸವರಾಜ ಕೊಪ್ಪಳ ಅವರು ನಾಯಕ ನಟರಾಗಿ ಅಭಿನಯಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಯೋಗೀಶ್ ಮಾಸ್ಟರ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರದ ತೆರೆಕಾಣುವ ಸಾಧ್ಯತೆಗಳಿವೆ.
ಇನ್ನು ಪ್ರೀತಿ ಪ್ಯಾರ್ ಮತ್ತು ಲವ್ ಚಿತ್ರದ ವಿಚಾರಕ್ಕೆ ಬಂದರೆ, ಇದೊಂದು ಮೂರು ವೆರೈಟಿ ಪ್ರೀತಿಯ ಕಥೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮೂರು ಯುವ ಜೋಡಿಗಳ ಮೂರು ಡಿಫೆರೆಂಟ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಯೋಗೇಶ್ ಮಾಸ್ಟರ್ ಹಾಗೂ ಕೃಷ್ಣ ರಚಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











