Don't Miss!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನಿದು ದುನಿಯಾ ಸೂರಿ 'ಕೆಂಡಸಂಪಿಗೆ' ವಿವಾದ, ವಿಷಾದ?
ನಿರ್ದೇಶಕ ದುನಿಯಾ ಸೂರಿ ಹೊಚ್ಚ ಹೊಸ ಪ್ರತಿಭೆಗಳನ್ನಿಟ್ಟುಕೊಂಡು 'ಕೆಂಡಸಂಪಿಗೆ' ಚಿತ್ರವನ್ನ ರೆಡಿ ಮಾಡಿದ್ದಾರೆ. ಇದರ ಜೊತೆಗೆ ಅವಕಾಶಕ್ಕಾಗಿ ಹಾತೊರೆಯುವ ಯುವ ಪ್ರತಿಭೆಗಳಿಗೆ ಒಂದು ಚಾನ್ಸ್ ಕೊಡ್ತಿದ್ದಾರೆ. ಈ ಸುದ್ದಿ ಕಳೆದ ವಾರದಿಂದಲೂ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿತ್ತು.
'ಕೆಂಡಸಂಪಿಗೆ' ಟ್ರೇಲರ್ ಲಾಂಚ್ ಮತ್ತು 'ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್' ಬಗ್ಗೆ ಪತ್ರಿಕಾ ಮತ್ತು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳುವುದಕ್ಕೆ ದುನಿಯಾ ಸೂರಿ ಒಂದು ಪ್ರೆಸ್ ಮೀಟ್ ಅರೇಂಜ್ ಮಾಡಿದ್ದರು. ವರ್ಷಗಳ ಗ್ಯಾಪ್ ನಂತ್ರ ದುನಿಯಾ ಸೂರಿಯ 'ಕೆಂಡಸಂಪಿಗೆ' ಚಮತ್ಕಾರ ಹೇಗೆ ಮೂಡಿಬಂದಿದೆ ಅಂತ ತಿಳಿದುಕೊಳ್ಳುವುದಕ್ಕೆ ಎಲ್ಲಾ ಪತ್ರಿಕಾ ಬಾಂಧವರು ಆಗಮಿಸಿದರು.
ಪ್ರತಿಕಾಗೋಷ್ಠಿ ಶುರುವಾಗುತ್ತಿದ್ದಂತೆ ದುನಿಯಾ ಸೂರಿ ಒಂದು ವಿಡಿಯೋ ಪ್ಲೇ ಮಾಡಿ, ತಮ್ಮ ಎಂದಿನ ಸುಕ್ಕಾ ಸ್ಟೈಲ್ ನಲ್ಲಿ ಮಾತಿಗಿಳಿದರು. ಸೂರಿ ಆಡಿದ ಒಂದು ಮಾತಿನಿಂದ ಬೇಸರಗೊಂಡ ಹಿರಿಯ ಪತ್ರಕರ್ತರೊಬ್ಬರು ಚಕಾರ ಎತ್ತಿದ್ದರು. ಅಲ್ಲಿಂದ ಶುರುವಾಗಿದ್ದು ಹೊಸ ವಿವಾದ. ಅಸಲಿಗೆ ದುನಿಯಾ ಸೂರಿ ಹೇಳಿದ್ದೇನು? ಯುವ ಪ್ರತಿಭೆಗಳನ್ನ ದುನಿಯಾ ಸೂರಿ ಅವಮಾನ ಮಾಡಿದ್ದಾರಾ..? ಮುಂದೆ ಓದಿ......
ಪತ್ರಿಕಾಗೋಷ್ಟಿಯಲ್ಲಿ ಆಗಿದ್ದೇನು?
'ಕೆಂಡಸಂಪಿಗೆ' ಟ್ರೇಲರ್ ಲಾಂಚ್ ಮಾಡುವ ಮೊದಲು ದುನಿಯಾ ಸೂರಿ ಹೊಸ ಕಥೆ ಹೇಳುವುದಕ್ಕೆ ಶುರು ಮಾಡಿದರು. ಎಲ್ಲವನ್ನ ಡಿಫರೆಂಟ್ ಸ್ಟೈಲ್ ನಲ್ಲಿ 'ರಿಯಲಿಸ್ಟಿಕ್' ಆಗಿ ಮಾಡುವ ದುನಿಯಾ ಸೂರಿ ಒಂದು ವಿಡಿಯೋ ತೋರಿಸಿದರು. ಅವಕಾಶಕ್ಕಾಗಿ ದುನಿಯಾ ಸೂರಿ ಆಫೀಸಿಗೆ ಬರುತ್ತಿದ್ದ ಯುವಕರು. ಅವರು ಪಡುವ ಪಾಡು, ಕೊಡುವ ಟಾರ್ಚರ್ ನ್ನೆಲ್ಲಾ ಹಿಡನ್ ಕ್ಯಾಮರಾ ಬಳಸಿ ಸೂರಿ ಮತ್ತು ತಂಡ ಶೂಟ್ ಮಾಡಿತ್ತು. ಅದನ್ನ ಟ್ರೇಲರ್ ರೂಪದಲ್ಲಿ ಪತ್ರಿಕಾ ಮಿತ್ರರ ಮುಂದೆ ಪ್ರದರ್ಶನ ಮಾಡಿದರು.
ದುನಿಯಾ ಸೂರಿ ಹೇಳಿದ್ದೇನು?
ದಿನ ಬೆಳಗಾದರೆ ಆಫೀಸಿನ ಮುಂದೆ ಚಾನ್ಸ್ ಗಾಗಿ ಒಬ್ಬರಾದರೂ ಬಂದೇ ಬರುತ್ತಾರೆ. ತಮಗಿಷ್ಟ ಬಂದ ಹಾಗೆ ಫೋಟೋಗಳನ್ನ ತೆಗೆಸಿಕೊಂಡು, ಚಿತ್ರವಿಚಿತ್ರ ವೇಷಗಳಲ್ಲಿ ಬರುತ್ತಾರೆ. ಒಂದು ಅವಕಾಶ ಕೊಡಿ ಅಂತ ಗೋಗರೆಯುತ್ತಾರೆ. ''ಅವಕಾಶ ಕೇಳಿಕೊಂಡು ಬರುವವರು ಮಾನಸಿಕ ಹಿಂಸೆ ಕೊಡುತ್ತಾರೆ'' ಅಂತ ದುನಿಯಾ ಸೂರಿ ಹೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿದ್ದ ಹಲವರು ಕೆಂಡಾಮಂಡಲವಾದರು. [ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದಾರೆ ದುನಿಯಾ ಸೂರಿ]
ಯುವ ಪ್ರತಿಭೆಗಳನ್ನ ಹೀಯಾಳಿಸಿದ್ದು ಎಷ್ಟು ಸರಿ?
ಬರೀ ದುನಿಯಾ ಸೂರಿಗೆ ಮಾತ್ರವಲ್ಲ, ಚಿತ್ರರಂಗದಲ್ಲಿರುವ ಎಲ್ಲರಿಗೂ ಚಾನ್ಸ್ ಗಾಗಿ ಅರಸಿ ಬರುವವರಿಂದ ಟಾರ್ಚರ್ ಇದ್ದದ್ದೇ. ಆದ್ರೆ, ಹಾಗೆ ಅವಕಾಶ ಕೇಳಿಕೊಂಡು ಬರುವವರನ್ನ ಹೀಯಾಳಿಸಿ, ಅವರಿಗೆ ಗೊತ್ತಾಗದಂತೆ ಹಿಡನ್ ಕ್ಯಾಮರಾ ಬಳಸಿ ಶೂಟ್ ಮಾಡಿ, ಅದರಿಂದ ಟ್ರೇಲರ್ ತಯಾರಿಸಿ, ಕೆಲ ವಾಹಿನಿಗಳಿಗೆ ಅದನ್ನ ಕೊಟ್ಟು ಜಗಜ್ಜಾಹೀರಾಗುವಂತೆ ಮಾಡುವುದು ಎಷ್ಟು ಸರಿ. ಅದರಲ್ಲೂ ದುನಿಯಾ ಸೂರಿ ಅಂತಹ 'ಸ್ಟಾರ್' ಡೈರೆಕ್ಟರ್ ಇಂತಹ ಕೆಲಸ ಮಾಡಿರುವುದಕ್ಕೆ ಅಲ್ಲಿದ್ದವರ ಕಣ್ಣು ಕೆಂಪಗಾಯಿತು. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]
ಮಾನನಷ್ಟ ಮೊಕ್ಕದ್ದಮೆ ಹಾಕ್ತಾರಂತೆ ಒಬ್ಬರು!
ಪತ್ರಕರ್ತರಿಗೆ ಮತ್ತು ವಾಹಿನಿಗಳಿಗೆ ದುನಿಯಾ ಸೂರಿ ಕಳುಹಿಸಿದ ವಿಡಿಯೋದಲ್ಲಿ ಅವಕಾಶ ಕೇಳೋಕೆ ಹೋಗಿದ್ದ ಅರವಿಂದ್ ಅನ್ನುವವರ ಚಿತ್ರಣ ಕೂಡ ಇತ್ತು. ವಾಹಿನಿಗಳಲ್ಲಿ ಇದು ಪ್ರಸಾರವಾದ್ದರಿಂದ ಮತ್ತು ಅದರಲ್ಲಿ ಅವಕಾಶ ಕೇಳೋಕೆ ಹೋದವರನ್ನ ಹೀಯಾಳಿಸಿದ್ದರಿಂದ ಅರವಿಂದ್ ಕುಟುಂಬದವರು ಕೊಂಚ ಘಾಸಿಗೊಂಡಿದ್ದಾರೆ. ''ಚಾನ್ಸ್ ಗಾಗಿ ಇಷ್ಟೆಲ್ಲಾ ಗೋಗರಿಯಬೇಕಿತ್ತಾ?'' ಕೆಲವರು ದೂರವಾಣಿ ಕರೆಮಾಡಿ ಹೀಯಾಳಿಸಿದ್ದಾರೆ. ಇದರಿಂದ ಬೇಸರಗೊಂಡಿರುವ ಅರವಿಂದ್, ''ಎಲ್ಲರಿಗೂ ನಟಿಸಬೇಕು ಅಂತ ಇಷ್ಟವಿರುತ್ತೆ. ಅವಕಾಶಕ್ಕಾಗಿ ನಾನು ಅವರ ಬಳಿ ಹೋಗಿದ್ದೆ. ಆದ್ರೆ, ಅದನ್ನ ಚಿತ್ರೀಕರಿಸಿ ಎಲ್ಲಾ ವಾಹಿನಿಗಳಲ್ಲಿ ತೋರಿಸುವುದು ತಪ್ಪು. ಇದರಿಂದ ನನಗೆ ಅವಮಾನ ಆಗಿದೆ. ದುನಿಯಾ ಸೂರಿ ನನ್ನನ್ನ ಕ್ಷಮೆ ಕೇಳಬೇಕು. ಇಲ್ಲವಾದರೆ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇನೆ'' ಅಂತ ಎಲ್ಲಾ ಸುದ್ದಿ ವಾಹಿನಿಗಳಿಗೆ ಅರವಿಂದ್ ಹೇಳಿಕೆ ನೀಡಿದ್ದಾರೆ.
ದುನಿಯಾ ಸೂರಿ ಮನಸ್ಸಲ್ಲೇನಿದೆ?
ದಿನಂಪ್ರತಿ ಅವಕಾಶಗಳನ್ನ ಕೇಳಿಕೊಂಡು ಬರುವ ಬದಲು ಪ್ರತಿಭೆ ಇದ್ದರೆ ಉದ್ಧಾರವಾಗಲಿ ಅಂತ 'ಪರಿಮಳ ಫಿಲಂ ಫ್ಯಾಕ್ಟರಿ' ಮುಖಾಂತರ 'ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್' ಮೂಲಕ ಯುವ ಪ್ರತಿಭೆಗಳಿಗೆ ಪ್ಲಾಟ್ ಫಾರಂ ಕಲ್ಪಿಸುವುದು ದುನಿಯಾ ಸೂರಿ ಉದ್ದೇಶ. ಸೆಲೆಬ್ರಿಟಿ ಆಗುವ ಕನಸು ಕಾಣುವವರು 5 ನಿಮಿಷದ ವಿಡಿಯೋ ಮಾಡಿ ಅದರಲ್ಲಿ ತಮ್ಮ ಪ್ರತಿಭೆಯನ್ನ ಅನಾವರಣ ಮಾಡಬೇಕು. ಪೆನ್ ಡ್ರೈವ್ ಅಥವಾ ಡಿ.ವಿ.ಡಿ ಮುಖಾಂತರ ಮಾರ್ಚ್ 25 ರೊಳಗೆ 'ಪರಿಮಳ ಫಿಲಂ ಫ್ಯಾಕ್ಟರಿ' ತಲುಪಬೇಕು. ಈ ಸ್ಪರ್ಧೆಗೆ ಪ್ರಚಾರ ಸಿಗಲಿ ಅನ್ನುವ ಕಾರಣಕ್ಕೆ ಅವಕಾಶ ಕೇಳಿ ಬಂದವರ ವಿಡಿಯೋಗಳನ್ನಿಟ್ಟುಕೊಂಡು ಸೂರಿ ಟ್ರೇಲರ್ ರೆಡಿ ಮಾಡಿದ್ದರು. [ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ]
ಒಳ್ಳೆಯ ಉದ್ದೇಶದ ಹಿಂದೆ ಆದ ಎಡವಟ್ಟು
ಹೊಸ ಟ್ಯಾಲೆಂಟ್ ಗಳಿಗೆ ಸೂರಿ ಮಣೆ ಹಾಕುತ್ತಿರುವ ಉದ್ದೇಶ ಒಳ್ಳೆಯದ್ದೇ. ಆದ್ರೆ, ಅದನ್ನ ಪ್ರದರ್ಶಿಸಿದ ರೀತಿ ಸರಿಯಿಲ್ಲ. ಹೆಸರಾಂತ ನಿರ್ದೇಶಕರಾಗಿ, ಇನ್ನೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನ ಆಡಿಕೊಳ್ಳುವುದು ತಪ್ಪು. ಒಂದು ಸ್ಪರ್ಧೆಗಾಗಿ ಸ್ಟಿಂಗ್ ಆಪರೇಷನ್ (ಹಿಡನ್ ಕ್ಯಾಮರಾ ಬಳಸಿ ಚಿತ್ರೀಕರಣ) ಮಾಡಿ ಅವರನ್ನ ಕೇಳಾಗಿ ತೋರಿಸುವುದು ಸಮಂಜಸ ಅಲ್ಲ ಅಂತ ಈಗ ಎದ್ದಿರುವ ಹೊಸ ವಾದ-ವಿವಾದ.