ದುನಿಯಾ ವಿಜಯ್ 'ದನ' ಕಾಯ್ಲಿಲ್ಲ.! ಪ್ರಿಯಾಮಣಿ ತಿರುಗಿ ನೋಡ್ಲಿಲ್ಲ.! ಯಾಕೆ?
ಅಂದು ಮೇ 6, ಶುಕ್ರವಾರ. ಕನಕಪುರದ ಶ್ರೀ ಕಂಕೇರಮ್ಮ ದೇವಸ್ಥಾನದಲ್ಲಿ ಜಾತ್ರೆ. ಆ ಜಾತ್ರೆ ಜೊತೆಗೆ ಜನರಿಗೆ ಮನರಂಜನೆ ನೀಡಲು ಪಣ ತೊಟ್ಟಿದ್ದು 'ದನ ಕಾಯೋನು' ಚಿತ್ರತಂಡ.
ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಿಗದಿ ಆಗಿತ್ತು. ನಾಯಕ ನಟ ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ರವರನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ಕನಕಪುರವೇ ಅಲ್ಲಿ ನೆರೆದಿತ್ತು. ಆದ್ರೆ, ಜನರ ಆಸೆ ಈಡೇರಲಿಲ್ಲ. [ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು']

'ದನ ಕಾಯೋನು' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಾಯಕ ನಟ ದುನಿಯಾ ವಿಜಯ್ ಬರಲಿಲ್ಲ. ಇನ್ನೂ ನಾಯಕ ನಟಿ ಪ್ರಿಯಾಮಣಿ ಅಂತೂ ಅತ್ತ ತಿರುಗಿ ನೋಡಲೇ ಇಲ್ಲ. ಅದಕ್ಕೆ ಕಾರಣವೇನು ಎಂಬುದು ಕೂಡ ತಿಳಿದುಬಂದಿಲ್ಲ. ಚಿತ್ರತಂಡ ಈ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. [ಯೋಗರಾಜ್ ಭಟ್ ಮತ್ತು ದುನಿಯಾ ವಿಜಿ ವಿರುದ್ಧ ಕೇಸ್ ದಾಖಲು]
ವಿ.ಹರಿಕೃಷ್ಣ ಸಂಗೀತ ನಿರ್ದೇಶನದ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಮಾಡಿ, ಸಮಾರಂಭದಲ್ಲಿ ಮಿಂಚಿದ್ದು 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಮಾತ್ರ.
ತಮ್ಮೂರಿನಲ್ಲೇ, ಅದರಲ್ಲೂ ಜಾತ್ರೆಯ ನಡುವೆಯೇ 'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಆಗ್ಬೇಕು ಎಂಬ ಆಸೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ರವರಿಗಿತ್ತು. ಅವರ ಆಸೆ ಈಡೇರಿತು. ನಿರ್ದೇಶಕ ಯೋಗರಾಜ್ ಭಟ್ ಕೈಜೋಡಿಸಿದ್ರು. ಆದ್ರೆ, ಚಿತ್ರದ ನಾಯಕ ಹಾಗೂ ನಾಯಕಿಯೇ ಅಲ್ಲಿ ಗೈರಾಗಿದ್ದು ಜನರಿಗೆ ಮಾತ್ರ ನಿರಾಸೆ ಆಯ್ತು.
'ದನ ಕಾಯೋನು' ಚಿತ್ರದ ಆಡಿಯೋ ಬಿಡುಗಡೆ ಮಾಡಿದ ನಟಿ ರಚಿತಾ ರಾಮ್
'ದನ ಕಾಯೋನು' ಧ್ವನಿಸುರುಳಿ ಬಿಡುಗಡೆ ಸಂಭ್ರಮದಲ್ಲಿ 'ಬುಲ್ ಬುಲ್' ಬೆಡಗಿ
ಕನಕಪುರದಲ್ಲಿ ನಡೆದ 'ದನ ಕಾಯೋನು' ಆಡಿಯೋ ಬಿಡುಗಡೆ ಸಮಾರಂಭ
'ದನ ಕಾಯೋನು' ಚಿತ್ರದ ವಿಭಿನ್ನ ಪೋಸ್ಟರ್
'ದನ ಕಾಯೋನು' ಚಿತ್ರದಲ್ಲಿ ಹಳ್ಳಿ ಹೈದನ ಗೆಟಪ್ ನಲ್ಲಿ ದುನಿಯಾ ವಿಜಯ್
ದುನಿಯಾ ವಿಜಯ್ ಜೊತೆ ದನ ಕಾಯುವ ನಟಿ ಪ್ರಿಯಾಮಣಿ
'ದನ ಕಾಯೋನು' ಚಿತ್ರದಲ್ಲಿ ಭಿನ್ನ-ವಿಭಿನ್ನ ಗೆಟಪ್ ಹಾಕಿದ್ದಾರೆ ನಟ ದುನಿಯಾ ವಿಜಯ್
'ದನ ಕಾಯೋನು' ಚಿತ್ರದ ಮೇಕಿಂಗ್ ಸ್ಟಿಲ್
'ದನ ಕಾಯೋನು' ಸಾಂಗ್ ಶೂಟಿಂಗ್ ವೇಳೆ ಕ್ಲಿಕ್ ಆಗಿರುವ ಫೋಟೋ
'ದನ ಕಾಯೋನು' ಚಿತ್ರದ ಮೇಕಿಂಗ್ ಸ್ಟಿಲ್
'ದನ ಕಾಯೋನು' ಸಾಂಗ್ ಶೂಟಿಂಗ್ ವೇಳೆ ಕ್ಲಿಕ್ ಆಗಿರುವ ಫೋಟೋ


Click it and Unblock the Notifications











