Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ಮೊದಲ ಬಾರಿಗೆ 'ಕರಿಚಿರತೆ'ಗೆ ಭಟ್ ಆಕ್ಷನ್ ಕಟ್
ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಮೋಡಿ ಎಲ್ಲರಿಗೂ ಗೊತ್ತು. ಹಾಗೇ, 'ದುನಿಯಾ' ಸೂರಿ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ ಕಮಾಲ್ ಗೂ ಸಾಕ್ಷಿಯಾಗಿದ್ದು ನಿಮ್ಮಂಥ ಅಭಿಮಾನಿ ದೇವರುಗಳೇ.
ಸೂಪರ್ ಹಿಟ್ ಜೋಡಿಗಳ ಬಗ್ಗೆ ನಾವೀಗ ಹೇಳುತ್ತಿರುವುದಕ್ಕೆ ಕಾರಣ, ನಿರ್ದೇಶಕ ಯೋಗರಾಜ್ ಭಟ್ ಜೊತೆ ದುನಿಯಾ ವಿಜಯ್ ಅಭಿನಯಿಸುವುದಕ್ಕೆ ಒಪ್ಪಿಕೊಂಡಿರುವ ಹೊಸ ಸಿನಿಮಾ! ಭಟ್ರು ಮಾತಿಗೆ ಫೇಮಸ್ಸು, ವಿಜಯ್ ಹೊಡಿಬಡಿಯುವುದಕ್ಕೆ ಫೇಮಸ್ಸು. ಎರಡು ತದ್ವಿರುದ್ಧ ಅದ್ಭುತಗಳು ಮೊದಲ ಬಾರಿಗೆ ಒಂದಾಗುವುದಕ್ಕೆ ನಿರ್ಧರಿಸಿರುವುದು ಗಾಂಧಿನಗರದ ಹೊಸ ಅಚ್ಚರಿ.
ಯೋಗರಾಜ್ ಭಟ್ ಒಂದು ಆಕ್ಷನ್ ಲವ್ ಸ್ಟೋರಿ ಚಿತ್ರಕಥೆಯನ್ನ ರೆಡಿಮಾಡಿದ್ದಾರೆ. ಅದಕ್ಕೆ ದುನಿಯಾ ವಿಜಯ್ ಸೂಕ್ತ ಅಂತ ಸೆಲೆಕ್ಟ್ ಮಾಡಿದ್ದಾರೆ. ಭಟ್ರ ಜೊತೆ ಕೆಲಸ ಮಾಡುವುದಕ್ಕೆ ವಿಜಯ್ ಕೂಡ ಹಿಂದು ಮುಂದು ನೋಡದೇ ಒಪ್ಪಿಕೊಂಡಿದ್ದಾರೆ. [ಹೊಸ ಸಾಹಸಕ್ಕೆ ಕೈಹಾಕಿದ ಯೋಗರಾಜ್ ಭಟ್ರು]
ಆದ್ದರಿಂದ ಇಲ್ಲಿ ಇಬ್ಬರ ಇಮೇಜ್ ಗೂ ಸಮವಾಗಿ ಪ್ರಾಮುಖ್ಯತೆ ನೀಡಲಾಗುತ್ತದೆ. ಭಟ್ರು-ವಿಜಯ್ ಕಾಂಬಿನೇಷನ್ ನಲ್ಲಿ ತಯಾರಾಗುವ ಚಿತ್ರದಲ್ಲಿ ಮಾತೂ ಇದೆ. ಭರ್ಜರಿ ಆಕ್ಷನ್ ಕೂಡ ಇದೆ. ಅಂದ್ಹಾಗೆ ಚಿತ್ರಕ್ಕೆ 'ಮಾಮರ' ಅಥವಾ '407' ಅನ್ನುವ ಟೈಟಲ್ ಇಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. [ದುನಿಯಾ ವಿಜಯ್ ಚಿನ್ನದ ಕಿರೀಟದ ಹಿಂದಿನ ಕಥೆ]
ಬಿ.ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಹಾಗೆ ನೋಡಿದ್ರೆ, ಭಟ್ರು-ಗಣೇಶ್ ಕಾಂಬಿನೇಷನ್ ನಲ್ಲಿ ಇದೇ ತಿಂಗಳು ಹೊಸ ಚಿತ್ರ ಸೆಟ್ಟೇರಬೇಕಿತ್ತು. ಆದ್ರೆ, ಗೋಲ್ಡನ್ ಸ್ಟಾರ್ 'ZOOಮ್' ಮತ್ತು 'ಸ್ಟೈಲ್ ಕಿಂಗ್' ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಈ ಚಿತ್ರವನ್ನ ಮುಂದಕ್ಕೆ ತಳಿ ದುನಿಯಾ ವಿಜಯ್ ಜೊತೆಗಿನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಭಟ್ರು. ಮುಂದಿನ ತಿಂಗಳು ಸಿನಿಮಾ ಸೆಟ್ಟೇರಲಿದೆ.