ಸಿನಿಮಾ ಬಿಡುಗಡೆಗೆ ಮುನ್ನವೇ ವಿಧಿವಶರಾದ ನಿರ್ಮಾಪಕ
ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ನಿರ್ಮಾಪಕ NLN.ಮೂರ್ತಿ ಅವರು ಇಂದು ವಿಧಿವಶರಾಗಿದ್ದಾರೆ.
Recommended Video
ವಿನಯ್ ರಾಜ್ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ನಿರ್ಮಾಪಕರಾಗಿದ್ದ ಮೂರ್ತಿ ಅವರಿಗೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅವರು ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಮೂರ್ತಿ ಅವರು ಶರಣ್ ಅವರೊಟ್ಟಿಗೆ ಸಿನಿಮಾ ಮಾಡುವ ಯೋಜನೆ ಇತ್ತು, ಇದಕ್ಕಾಗಿ ಎಸ್ ಭಗತ್ ರಾಜ್ ಅವರಿಗೆ ಚಿತ್ರಕತೆ ಬರೆಸಿದ್ದರು, ಕತೆಯನ್ನು ಶರಣ್ ಅವರಿಗೆ ಹೇಳಿಯೂ ಆಗಿತ್ತು, ಆದರೆ ಸಿಸನಿಮಾ ಸೆಟ್ಟೇರುವ ಮುನ್ನವೇ ನಿಧನವಾಗಿದ್ದಾರೆ. ಮೂರ್ತಿ ಅವರ ತಾಯಿ ಗುರುವಾರವಷ್ಟೆ ನಿಧನವಾಗಿದ್ದರು

ಮೂರ್ತಿ ನಿರ್ಮಾಣದ ಗ್ರಾಮಾಯಣ ಸಿನಿಮಾ ಸಹ ಇನ್ನೂ ಬಿಡುಗಡೆ ಆಗಿಲ್ಲ. ಪ್ರಸ್ತುತ ಟ್ರೇಲರ್ ಅಷ್ಟೆ ಬಿಡುಗಡೆ ಆಗಿರುವ ಈ ಸಿನಿಮಾದ ಚಿತ್ರೀಕರಣ ಚಿತ್ರೀಕರಣ ಇನ್ನೂ ಬಾಕಿ ಇದೆ.
ಮುನ್ನಾ ಮೂರ್ತಿ ಅವರು ಇತ್ಯರ್ಥ ಎಂಬ ಸಿನಿಮಾ ನಿರ್ಮಿಸಿದ್ದರು. ಅದು ಸಹ ಇನ್ನೂ ಬಿಡುಗಡೆ ಆಗಿಲ್ಲ.


Click it and Unblock the Notifications











