ಹೈದರಾಬಾದಿನಲ್ಲಿ ತಾರೆ ಅಕ್ಕಿನೇನಿ ಅಮಲಾ ಬಂಧನ

By ಅನಂತರಾಮು, ಹೈದರಾಬಾದ್

Akkineni Amala
ಕನ್ನಡದ 'ಬೆಳ್ಳಿಯಪ್ಪ ಬಂಗಾರಪ್ಪ', 'ಕ್ಷೀರಸಾಗರ' (ಇವೆರಡೂ ಕುಮಾರ ಬಂಗಾರಪ್ಪ ಜೊತೆಗಿನ ಚಿತ್ರಗಳು), 'ಬಣ್ಣದ ಗೆಜ್ಜೆ' (ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ) ಮತ್ತು ಕಮಲ ಹಾಸನ್ ಜೊತೆ 'ಪುಷ್ಪಕ ವಿಮಾನ' ಚಿತ್ರಗಳಲ್ಲಿ ಅಭಿನಯಿಸಿದ್ದ ತಾರೆ ಅಮಲಾ ಅವರನ್ನು ಚಾರ್ಮಿನಾರ್ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಇಷ್ಟಕ್ಕೂ ನಟ ಅಕ್ಕಿನೇನಿ ನಾಗಾರ್ಜುನ ಅವರ ಪತ್ನಿ ಅಮಲಾ ಮಾಡಿದ ತಪ್ಪೇನು?

"Stop Coal Mining Save Indian Forests" ಎಂಬ ಬ್ಯಾನರ್‌ನ್ನು ಚಾರ್ಮಿನಾರ್ ಮೇಲೆ ಕಟ್ಟಿದ್ದು. ಗ್ರೀನ್‌ಪೀಸ್ ಸಂಘಟನೆಯ ಕಾರ್ಯಕರ್ತೆಯೂ ಆಗಿರುವ ಅಮಲಾ ಈ ಬ್ಯಾನರ್‌ಗಳನ್ನು ಕಟ್ಟಿಸಿದ್ದರು. ಇದಕ್ಕಾಗಿ ಈಕೆ ಹಾಗೂ ಇತರೆ ಗ್ರೀನ್ ಪೀಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಕಲ್ಲಿದ್ದಲು ಗಣಿಗಾರಿಕೆಯಿಂದ ಪರಿಸರ ಹಾಳಾಗುವುದಷ್ಟೇ ಅಲ್ಲ, ಲಕ್ಷಾಂತರ ಮಂದಿ ಗಿರಿಜನರ ಬದುಕು ನಾಶವಾಗುತ್ತದೆ. ಲಕ್ಷಾಂತರ ಪ್ರಾಣಿ ಸಂಕುಲ ನಶಿಸುತ್ತದೆ. ಬಂಗಾಳದ ಹುಲಿ ಸಂತತಿಯೂ ಈಗಾಗಲೆ ನಿರ್ನಾಮದ ಹಾದಿಯಲ್ಲಿದ್ದು ಅವು ಉಳಿಯುವುದಿಲ್ಲ ಎಂದಿದ್ದಾರೆ ಅಮಲಾ.

ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ 13 ಕಲ್ಲಿದ್ದಲು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇದಕ್ಕೆ ದೇಶದಾದ್ಯಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ 10 ಲಕ್ಷ ಹೆಕ್ಟೇರ್‍ ಅರಣ್ಯ ನಾಶವಾಗುತ್ತದೆ. ಅಪಾರ ವನ್ಯ ಸಂಪತ್ತಿಗೆ ಕೊಡಲಿ ಏಟು ಬೀಳಲಿದೆ ಎಂದು ಪ್ರತಿಭಟಿಸಲಾಗಿತ್ತು.

ಅಮಲಾ ಅವರನ್ನು ಚಾರ್ಮಿನಾರ್ ಪೊಲೀಸರು ಬಂಧಿಸಿದ ಬಳಿಕ ಅವರನ್ನು ಠಾಣೆಗೆ ಕರೆದೊಯ್ದು ಬಳಿಕ ಬಾಂಡ್ ಪತ್ರಕ್ಕೆ ಸಹಿ ಮಾಡಿಸಿಕೊಂಡು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada films Belliyappa Bangarapp, Ksheera Saagara and Bannada Gejje fame actress Akkineni Amala was arrested today by the Charminar police at Charminar in Hyderabad. She was arrested for keeping a banner on Charminar, on her banner it was written that "Stop Coal Mining Save Indian Forests".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X