twitter
    For Quick Alerts
    ALLOW NOTIFICATIONS  
    For Daily Alerts

    ಮೆಂಟಲ್ ಮಂಜ ಖ್ಯಾತಿಯ ನಟ ಅರ್ಜುನ್ ಅರೆಸ್ಟ್

    By Rajendra
    |

    Mental Manja fame Arjun
    'ಮೆಂಟಲ್ ಮಂಜ' ಚಿತ್ರದ ಮೂಲಕ ಗಾಂಧಿನಗರಕ್ಕೆ ಅಡಿಯಿಟ್ಟ ನಟ ಅರ್ಜುನ್ ಅವರನ್ನು ಬೆಂಗಳೂರು ಪೀಣ್ಯ ಪೊಲೀಸರು ಮಂಗಳವಾರ (ಆ.28) ರಾತ್ರಿ ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದಡಿ ಪೊಲೀಸರು ಅರ್ಜುನ್ ಅವರನ್ನು ದಸ್ತಗಿರಿ ಮಾಡಿರುವುದಾಗಿ ಕನ್ನಡ ಟಿವಿ ವಾಹಿನಿಗಳು ವರದಿ ಮಾಡಿವೆ.

    ಈ ಸಂಬಂಧ ಮೆಂಟಲ್ ಮಂಜ ಅಲಿಯಾಸ್ ಅರ್ಜುನ್ ಅವರ ಪತ್ನಿ ಲತಾಶ್ರೀ ದೂರು ನೀಡಿದ್ದರು. ಮೆಂಟಲ್ ಮಂಜ ಚಿತ್ರದ ಮೂಲಕ ಪರಿಚಿತನಾದ ಈತ 'ಮೂರನೆ ಕ್ಲಾಸ್ ಮಂಜ ಬಿಕಾಂ ಭಾಗ್ಯ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

    ಕನ್ನಡದಲ್ಲಿ ತಕ್ಕಮಟ್ಟಿಗೆ ತನ್ನ ಛಾಪು ಮೂಡಿಸಿದ್ದ ನಟ ಈತ. ಪ್ರೇಮ್ ನಗರ, ಜರ್ನಿ, ತಿಮ್ಮ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ 'ಆಟೋ ಮಂಜ' ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದು ಅದು ಇನ್ನೂ ಚಿತ್ರೀಕರಣ ಹಂತದಲ್ಲಿದೆ.

    ಲತಾಶ್ರೀ ಆವರನ್ನು ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ಈಕೆ ಅರ್ಜುನ್ ಅವರ ಸಂಬಂಧಿಕರು. ಇವರಿಬ್ಬರ ದಾಂಪತ್ಯ ಜೀವನದ ಫಲವಾಗಿ ಇವರಿಗೆ 3 ವರ್ಷದ ಮಗು ಕೂಡ ಇದೆ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎನ್ನುತ್ತವೆ ಕುಟುಂಬ ಮೂಲಗಳು.

    ಯಾಕೋ ಏನೋ ಕನ್ನಡ ಚಿತ್ರರಂಗದಲ್ಲಿ ನಟರು ಪತ್ನಿಗೆ ಕಿರುಕುಳ ನೀಡಿವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಕೆಲದಿನಗಳ ಹಿಂದೆ ಒರಟ ಪ್ರಶಾಂತ್ ತಮ್ಮ ಪತ್ನಿ ಮೇಲೆ ಒರೊಟೊರಟಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಈತ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ಅಲ್ಲದೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು.

    ಈಗ 'ಮೆಂಟಲ್ ಮಂಜ'ನ ಸರದಿ. ಚಿತ್ರದ ಟೈಟಲ್ ಗಳಿಗೆ ತಕ್ಕಂತೆ ಇವರ ನಡೆನುಡಿಗಳು ಇರುವುದು ನಿಜಕ್ಕೂ ಖೇದಕರ ಸಂಗತಿ. ಇಂತಹ ನಟರ ಕೆಲ ಹುಚ್ಚು ಅಭಿಮಾನಿಗಳಿಗೂ ಇವರನ್ನು ಅನುಕರಣೆ ಮಾಡಿದರೆ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)

    English summary
    Mental Manja fame Kannada actor Arjun has been arrested for allegedly demanding dowry from his wife Lathasri and harassing her, Bangalore Peenya police said. Police in Bangalore Tuesday night acted on Lathashri's complaint that Arjun harassed her physically and mentally for money.
    Wednesday, August 29, 2012, 11:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X