Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ 'ಶಿಷ್ಯ' ದೀಪಕ್ ಗೆ ಕಂಕಣ ಭಾಗ್ಯ ಕೂಡಿಬಂತು..!
ಮಂಡ್ಯದ ಹುಲಿ 'ಶಿಷ್ಯ' ಖ್ಯಾತಿಯ ನಟ ದೀಪಕ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಲ್ಲಿಯವರೆಗೂ ಬ್ಯಾಚುಲರ್ ಜೀವನವನ್ನು ಹಾಯಾಗಿ ಕಳೆಯುತ್ತಿದ್ದ ನಟ ದೀಪಕ್ ಗೌಡ ಅವರು ಇದೀಗ ಒಂಟಿ ಜೀವನಕ್ಕೆ ಬಾಯ್ ಬಾಯ್ ಹೇಳುತ್ತಿದ್ದಾರೆ.
ಹೌದು 'ಬೆಳ್ಳಿ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆ ಶಿವಣ್ಣ ಅವರ ಗೆಳೆಯನಾಗಿ ಅಭಿನಯಿಸಿದ್ದ ನಟ ದೀಪಕ್ ಅವರು ಸದ್ಯದಲ್ಲೇ ನಿಖಿತಾ ಎಂಬ ಹುಡುಗಿಯನ್ನು ಮದುವೆಯಾಗಲಿದ್ದಾರೆ.
ನಿಖಿತಾ ಅವರ ಜೊತೆ ನಟ ದೀಪಕ್ ಗೌಡ ಅವರ ನಿಶ್ಚಿತಾರ್ಥ ಗುರುವಾರ (ಡಿಸೆಂಬರ್ 3) ದಂದು ನೆರವೇರಿದೆ. ಇನ್ನೇನು ಸದ್ಯದಲ್ಲೇ ಮದುವೆ ದಿನಾಂಕವನ್ನು ನಟ ದೀಪಕ್ ಅವರು ಘೋಷಿಸಲಿದ್ದಾರೆ.
ಅಂದಹಾಗೆ ಈ ಮದುವೆಗೆ ಎರಡು ಮನೆಯವರ ಒಪ್ಪಿಗೆಯಿದ್ದು, ಪಕ್ಕಾ ಸಂಪ್ರದಾಯಬದ್ಧವಾಗಿ, ಎಲ್ಲರ ಸಮ್ಮುಖದಲ್ಲಿ ಈ ಮದುವೆ ನೆರವೇರಲಿದೆ.
ಅದೇನೇ ಇರಲಿ ಒಟ್ನಲ್ಲಿ ಈ ವರ್ಷ ಅನೇಕ ಸ್ಯಾಂಡಲ್ ವುಡ್ ಮಂದಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನೂತನ ಜೀವನಕ್ಕೆ ಕಾಲಿಟ್ಟವರು ಕೆಲವರಾದರೆ, ಇನ್ನು ಕೆಲವರು ಹೊಸ ಜೀವನಕ್ಕೆ ಕಾಲಿಡಲು ತಯಾರಾಗಿ ನಿಂತಿದ್ದಾರೆ. (ಚಿತ್ರಕೃಪೆ : ಚಿತ್ರಲೋಕ)