Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಕಲ್ಯಾಣ ಕುಮಾರ್ ಪತ್ನಿ ರೇವತಿ ಕಲ್ಯಾಣ್ ಕುಮಾರ್ ಇನಿಲ್ಲ
ಕನ್ನಡ ಸಿನಿಮಾರಂಗ ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ ಕಲಾವಿದ ಕಲ್ಯಾಣ್ ಕುಮಾರ್ ಅವರ ಹಿಂದಿನ ಶಕ್ತಿ ಪತ್ನಿ 'ರೇವತಿ ಕಲ್ಯಾಣ್ ಕುಮಾರ್' ಇಂದು(ಡಿ.24) ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ ಬೆಳಗಿನ ಜಾವ ಎರಡು ಗಂಟೆಗೆ ಹಿರಿಯ ನಟಿ ರೇವತಿ ಕಲ್ಯಾಣಕುಮಾರ್ ಇಹಲೋಕ ತ್ಯಜಿಸಿದ್ದಾರೆ.
ವಿಠಲಾಚಾರ್ಯರು ನಿರ್ಮಿಸಿದ 'ರಾಜಲಕ್ಷ್ಮಿ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣಿ ಮಾಡಿದ್ದರು 'ರೇವತಿ ಕಲ್ಯಾಣ್ ಕುಮಾರ್'. ರೇವತಿ ಅವರ ತಾಯಿ ಸರೋಜಮ್ಮ ಕೂಡ ಕಲಾವಿದೆಯಾಗಿದ್ದರು. ಹೀಗಾಗಿ ರೇವತಿ ಅವರಿಗೂ ಚಿಕ್ಕದಿಂದಲೇ ಬಣ್ಣದ ನಂಟು ಸೆಳೆದುಕೊಂಡು ಬಂದಿತ್ತು. ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ 'ಮನೆಗೆ ಬಂದ ಮಹಾಲಕ್ಷ್ಮಿ' ಚಿತ್ರವನ್ನ 1959ರಲ್ಲಿ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು 'ರೇವತಿ ಕಲ್ಯಾಣ್ ಕುಮಾರ್'.
ಕಲ್ಯಾಣ್ ಕುಮಾರ್ ಅವರನ್ನ ವಿವಾಹವಾದ ನಂತದ ಅವರ ವೃತ್ತಿಜೀವನಕ್ಕೆ ಬೆಂಬಲವಾಗಿದ್ದರು ರೇವತಿ ಕಲ್ಯಾಣ್ ಕುಮಾರ್. ಉತ್ತಮ ಬರಹಗಾರ್ತಿಯಾಗಿದ್ದ ಗುರುತಿಸಿಕೊಂಡಿದ್ದ ರೇವತಿ, ಕಥೆ-ಕಾದಂಬರಿಗಳನ್ನೂ ಬರೆದಿದ್ದಾರೆ. 'ಎಂದೂ ನಿನ್ನವನೆ', 'ಕಲ್ಲು ಸಕ್ಕರೆ', 'ಪ್ರವಾಸಿ ಮಂದಿರ' ಚಿತ್ರಗಳನ್ನ ಪತಿಯ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ.
ಸಾಕಷ್ಟು ಚಿತ್ರಗಳಿಗೆ ಸಂಭಾಷಣೆಯನ್ನ ಬರೆಯುವುದ ಜೊತೆಯಲ್ಲಿ 'ಪ್ರವಾಸಿ ಮಂದಿರ'ಕ್ಕೆ ಚಿತ್ರಗೀತೆಯೊಂದನ್ನೂ ಕೂಡ ರಚಿಸಿ ಗೀತರಚನೆಯನ್ನೂ ಮಾಡಿದ್ದಾರೆ. 'ನಾಟಕ ಅಕಾಡಮಿ', 'ರಾಜ್ಯೋತ್ಸವ' ಪ್ರಶಸ್ತಿಗಳನ್ನು ಪಡಿದಿದ್ದ ರೇವತಿ ಕಲ್ಯಾಣ್ ಕುಮಾರ್ ಇಂದು ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋಗಿದ್ದಾರೆ. ನಾಳೆ (ಡಿ.25)ಬೆಳಿಗ್ಗೆ ಚೆನ್ನೈನ ವಿಜಯ ಚಿತಾಗಾರದಲ್ಲಿ ಅಂತಿಮ ವಿಧಿಗಳು ನಡೆಯಲಿದೆ.