Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸೂರ್ಯ ಚಿತ್ರಕ್ಕೆ ಕನ್ನಡ ನಿರ್ದೇಶಕ ಆಕ್ಷನ್ ಕಟ್?
ಕಾಲಿವುಡ್ ನ ಜನಪ್ರಿಯ ನಟ ಸೂರ್ಯ ಅಭಿನಯದ 'ಮಾಸ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಕಲೆಕ್ಷನ್ ಮಾಡುತ್ತಿದೆ. ನಟ ಸೂರ್ಯ ಕೈಯಲ್ಲಿ ಇನ್ನೆರಡು ಚಿತ್ರಗಳಿವೆ. ಹೀಗಿರುವಾಗಲೇ, ಹೊಸ ಸಿನಿಮಾ ಮಾಡುವ ಬಗ್ಗೆ ನಟ ಸೂರ್ಯ ಯೋಚಿಸುತ್ತಿದ್ದಾರೆ.
ಹೊಸ ಚಿತ್ರಕ್ಕೆ ನಟ ಸೂರ್ಯ ಸೂಚಿಸಿರುವ ನಿರ್ದೇಶಕ ಕನ್ನಡಿಗ ಅನ್ನೋದು ಬ್ರೇಕಿಂಗ್ ನ್ಯೂಸ್. ಅಂದ್ಹಾಗೆ, ಆ ನಿರ್ದೇಶಕ ಯಾರು ಅಂದ್ರೆ, 'ರೋಮಿಯೋ' ಚಿತ್ರದ ಸೂತ್ರಧಾರಿ ಪಿ.ಸಿ.ಶೇಖರ್.
ಹೌದು, ಕನ್ನಡದಲ್ಲಿ 'ರೋಮಿಯೋ', 'ಚಡ್ಡಿದೋಸ್ತ್' ಗಳಂತಹ ಚಿತ್ರಗಳನ್ನ ಮಾಡಿ ಈಗ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ 'ಸ್ಟೈಲ್ ಕಿಂಗ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪಿ.ಸಿ.ಶೇಖರ್, ನಟ ಸೂರ್ಯರನ್ನ ಇಂಪ್ರೆಸ್ ಮಾಡಿದ್ದಾರೆ. [ಚಿತ್ರ ವಿಮರ್ಶೆ: 'ಚಡ್ಡಿದೋಸ್ತ್' ಸಿನಿಮಾ ಹೇಗಿದೆ?]
ಮೊಟ್ಟ ಮೊದಲ ಬಾರಿ ಗಣೇಶ್ ಗೆ ಅಂಡರ್ ವರ್ಲ್ಡ್ ಡಾನ್ ಪಾತ್ರಕೊಟ್ಟು, ಮೇಕ್ ಓವರ್ ಮಾಡಿಸಿರುವುದು ಇದೇ ಪಿ.ಸಿ.ಶೇಖರ್. ಈಗಾಗಲೇ ರಿಲೀಸ್ ಆಗಿರುವ 'ಸ್ಟೈಲ್ ಕಿಂಗ್' ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಟ್ರೈಲರ್ ನೋಡಿ, ಪಿ.ಸಿ.ಶೇಖರ್ ಮೇಕಿಂಗ್ ಶೈಲಿ ಕಂಡು, ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ನಟ ಸೂರ್ಯ ಆಸಕ್ತಿ ತೋರಿದ್ದಾರೆ.
ಇದು ಗಲ್ಲಿ ಗಾಸಿಪ್ ಅಂದುಕೊಳ್ಳಬೇಡಿ. ಈ ಸುದ್ದಿಯನ್ನ ಖುದ್ದು ತಮಿಳು ದಿನಪತ್ರಿಕೆಗಳು ವರದಿ ಮಾಡಿವೆ. ಅಸಲಿಗೆ, 'ಸ್ಟೈಲ್ ಕಿಂಗ್' ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿರುವುದು ಕ್ಯಾಮರಾ ಮೆನ್ ಪಾಂಡಿ. ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ಪಾಂಡಿ ಮುಖಾಂತರ 'ಸ್ಟೈಲ್ ಕಿಂಗ್' ಮತ್ತು ಪಿ.ಸಿ.ಶೇಖರ್ ಬಗ್ಗೆ ನಟ ಸೂರ್ಯ ತಿಳಿದುಕೊಂಡಿದ್ದಾರಂತೆ.
ಪರಭಾಷೆಯ ಮೇಕಿಂಗ್ ಶೈಲಿ, ಅಲ್ಲಿನ ನಿರ್ದೇಶಕರಿಗೆ ಇಲ್ಲಿನ ನಟರು ಮಾರುಹೋಗುವ ಸಂದರ್ಭದಲ್ಲಿ, ಕನ್ನಡದ ಪ್ರತಿಭೆಗೆ ಕಾಲಿವುಡ್ ನಟ ಕ್ಲೀನ್ ಬೌಲ್ಡ್ ಆಗಿರುವುದು ಕನ್ನಡಿಗರ ಹೆಮ್ಮೆ ಅಲ್ಲವೇ. (ಏಜೆನ್ಸೀಸ್)