ಕಬ್ಬನ್ ಪಾರ್ಕ್ ನಲ್ಲಿ ದಿಢೀರ್ ಪ್ರತ್ಯಕ್ಷ ಆದ ನಾಗತಿಹಳ್ಳಿ

By Suneetha

ಖ್ಯಾತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಷ್ಟಕಾಮ್ಯ' ಚಿತ್ರದ ಶೂಟಿಂಗ್ ಭರ ಭರನೇ ನಡೆಯುತ್ತಿದ್ದು, ಸದ್ಯಕ್ಕೆ ಇಡೀ ಚಿತ್ರತಂಡ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿದೆ.

ಲಾಂಗ್ ಗ್ಯಾಪ್ ಪಡೆದುಕೊಂಡು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ವಿಶಿಷ್ಟ ಪ್ರೇಮ ಕತೆಯುಳ್ಳ 'ಇಷ್ಟಕಾಮ್ಯ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.[ಕಿಚ್ಚ ಸುದೀಪ್ ಒಬ್ಬ ಪರಿಪೂರ್ಣ ನಟ ಎಂದವರು ಯಾರು?]

Kannada Movie 'Ishtakamya' team at Cubbon Park

ಇದೀಗ ಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಬ್ಬನ್ ಪಾರ್ಕನ್ನು ಶೂಟಿಂಗ್ ಸೆಟ್ ಆಗಿ ಪರಿವರ್ತಿಸಿರುವ ಚಿತ್ರತಂಡ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಪಾರ್ಕ್ ನಲ್ಲಿ ಚಿತ್ರೀಕರಿಸುತ್ತಿದೆ.

ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ನಟ-ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳಿಕರ್ ಅವರು ಶನಿವಾರದಂದು (ಫೆಬ್ರವರಿ 6) ಬಿಡುಗಡೆ ಮಾಡಿದ್ದಾರೆ. ಜೊತೆಗೆ ಕನ್ನಡದ ಮೇರು ಕವಿ ಕುವೆಂಪು ಅವರ ಕವನವೊಂದನ್ನು ಕೂಡ ಸಿನಿಮಾದಲ್ಲಿ ಬಳಸಿಕೊಂಡಿರುವುದು ವಿಶೇಷ.[ಹೆಜ್ಜೇನು ದಾಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು]

'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ, 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ, ನಟಿ ಕಾವ್ಯ ಶೆಟ್ಟಿ ಸೇರಿದಂತೆ ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಹಿರಿಯ ನಟಿ ಬಿ.ಜಯಶ್ರೀ, ಮಂಡ್ಯ ರಮೇಶ್, ಚಿಕ್ಕಣ್ಣ ಮುಂತಾದ ದೊಡ್ಡ ತಾರಾಬಳಗ ಇರುವ ಚಿತ್ರಕ್ಕೆ ಶಂಕರೇ ಗೌಡ ಅವರು ಬಂಡವಾಳ ಹೂಡಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

More from Filmibeat

English summary
Kannada Movie 'Ishtakamya', directed by Nagatihalli Chandrashekhar, saw Cubbon Park turning into a film set on Sunday, where a few sequences where shot for the film with lead actors Vijay Suriya of Agnisaakshi fame, Mayuri and Kavya Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X