Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರದಿಂದ ಶುರು 'ಮಾದ ಮತ್ತು ಮಾನಸಿ' ಪ್ರೇಮ ಪುರಾಣ
ಡೈನಾಮಿಕ್ ಹೀರೋ ಪ್ರಜ್ವಲ್ ದೇವರಾಜ್ ಮತ್ತು 'ಲೂಸಿಯಾ' ಬೆಡಗಿ ಶೃತಿ ಹರಿಹರನ್ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ, 'ಮಾದ ಮತ್ತು ಮಾನಸಿ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.
ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣ ಪತ್ರ ಪಡೆದುಕೊಂಡಿದ್ದ 'ಮಾದ ಮತ್ತು ಮಾನಸಿ' ಇದೇ ವಾರ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.[ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾದ 'ಮಾದ ಮತ್ತು ಮಾನಸಿ']
ಹೌದು, ನವೆಂಬರ್ 25 ರಂದು, ಕರ್ನಾಟಕ ರಾಜ್ಯಾದ್ಯಂತ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಮಾದ ಮತ್ತು ಮಾನಸಿ' ತೆರೆಕಾಣುತ್ತಿದೆ.
ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ಮೊದಲ ಬಾರಿ ಜೋಡಿಯಾಗಿರುವ ಈ ಚಿತ್ರವನ್ನ ಸತೀಶ್ ಪ್ರಧಾನ್ ನಿರ್ದೇಶನ ಮಾಡಿದ್ದಾರೆ. ಪೂಜಾ ಗಾಂಧಿ ಅಭಿನಯದ 'ಅಭಿನೇತ್ರಿ' ಚಿತ್ರದ ನಂತರ ಸತೀಶ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ಮಾದ ಮತ್ತು ಮಾನಸಿ'.
ಇನ್ನೂ ಚಿತ್ರದ ಹಾಡೊಂದಕ್ಕೆ ಅನುಶ್ರೀ ಸೂಪರ್ ಸ್ಟೆಪ್ಸ್ ಹಾಕಿದ್ದಾರೆ. ''ಮಾದ-ಮಾನಸಿಗೆ ಪ್ಯಾರ್ ಬಂತು...ಕಣ್ಣಿಗೆ ಲವ್ವು ಬಂತು...ಸುಮ್ ಸುಮ್ಗೆ ದಿಲ್ಗೆ ದುಖಾನ್ ಆದಂಗೆ...ಇವ್ರ್ ದುಕೆ ಅವ್ರ್ ಮ್ಯಾಲೆ ಪ್ಯಾರು...ಹಿಡ್ಕೊಂಡ್ರೆ ಪ್ರೀತಿ ತೇರು...ಎಲ್ಲಾರ್ದುಕೆ ಜಿಂದಗಿ ಜೋರು'' ಅನ್ನುವ ಇಂಟ್ರೋಡಕ್ಷನ್ ಹಾಡಿಗೆ ಅನುಶ್ರೀ ಸೊಂಟ ಬಳುಕಿಸಿದ್ದಾರೆ.[ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ]
ರಾಜೇಶ್ ಮತ್ತು ದೇವಿ ಫಿಲಂಸ್ ಲಾಂಛನದಲ್ಲಿ, ಮನೋಮೂರ್ತಿ ಅವರು ಸಂಗೀತ ನೀಡುವುದರ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈ ಚಳಕ ಈ ಚಿತ್ರಕ್ಕಿದ್ದು, ಇಮ್ರಾನ್ ಸರ್ದಾರಿಯಾ, ಕಲೈ, ಪ್ರಭು ಶ್ರೀನಿವಾಸ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರು ಪ್ರಮುಖವಾಗಿ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.