ಚಿತ್ರೋದ್ಯಮ ಚಟುವಟಿಕೆಗೆ ಅನುಮತಿ: ಸಚಿವರಿಗೆ ಧನ್ಯವಾದ ಸಲ್ಲಿಸಿದ ಚಿತ್ರೋದ್ಯಮ
ಚಿತ್ರೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಕ್ಕಾಗಿ ಸಚಿವ ಆರ್. ಅಶೋಕ್ ಅವರಿಗೆ ಚಿತ್ರೋದ್ಯಮ ಕೃತಜ್ಞತೆ ಸಲ್ಲಿಸಿದೆ.
Recommended Video
ಅಮ್ಮನಿಗಾಗಿ ಅಡುಗೆಮನೆ ಸೇರಿಕೊಂಡ ನಿರ್ದೇಶಕ ರಘುರಾಮ್..! | Raghuram
ಸಾಮಾಜಿಕ ಅಂತರ ಕಾಯ್ದುಕೊಂಡು ಡಬ್ಬಿಂಗ್, ಎಡಿಟಿಂಗ್ನಂತಹ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಚಿತ್ರರಂಗಕ್ಕೆ ಅನುಮತಿ ನೀಡಿದೆ. ಲಾಕ್ ಡೌನ್ ಕಾರಣದಿಂದ ಚಿತ್ರೋದ್ಯಮದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿತ್ತು. ಇದರಿಂದ ಚಿತ್ರರಂಗ ತೀವ್ರ ನಷ್ಟ ಅನುಭವಿಸುತ್ತಿದೆ. ಈ ನಡುವೆ ಕೆಲವು ವಿಭಾಗಗಳ ಕೆಲಸಗಳಿಗೆ ಅನುಮತಿ ನೀಡಿರುವುದರಿಂದ ಚಿತ್ರರಂಗಕ್ಕೆ ಉತ್ಸಾಹ ಬಂದಿದೆ.

ಚಿತ್ರರಂಗಕ್ಕೆ ಸಹಕಾರ ನೀಡಿದ್ದಕ್ಕಾಗಿ ರಾಜ್ಯ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಶ್ರೀ ಡಿ.ಕೆ ರಾಮಕೃಷ್ಣ, ಕಾರ್ಯದರ್ಶಿ ಶ್ರೀ ಕೆ ಮಂಜು ಹಾಗೂ ಚಲನಚಿತ್ರ ಕಾರ್ಮಿಕರ ಒಕ್ಕೂಟ ಉಪಾಧ್ಯಕ್ಷ ಶ್ರೀ ರವಿಶಂಕರ್ ಭಾನುವಾರ ಸಚಿವ ಆರ್. ಅಶೋಕ್ ಅವರ ಮನೆಗೆ ತೆರಳಿ ಕೃತಜ್ಞತೆ ತಿಳಿಸಿದರು
More from Filmibeat
English summary
Kannada Film Industry producers and cine workers association on Sunday met minister R Ashok and greeted him for giving permission for film works.
sandalwood kfi film chamber producer kannada cinema ಸ್ಯಾಂಡಲ್ ವುಡ್ ಕೆಎಫ್ಐ ವಾಣಿಜ್ಯ ಮಂಡಳಿ ನಿರ್ಮಾಪಕ ಕನ್ನಡ ಸಿನಿಮಾ


Click it and Unblock the Notifications











