Don't Miss!
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಧನ್ವೀರ್ ಗೆ ಮತ್ತೊಂದು ಸಂಕಷ್ಟ: ಆನೆ ಏರಿದ್ದಕ್ಕೆ ಎಫ್ಐಆರ್
ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ನಟ ಧನ್ವೀರ್ ಗೌಡ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
Recommended Video
ರಾತ್ರಿ ಸಫಾರಿ ಮಾಡಿದ ಪ್ರಕರಣದ ಬಗ್ಗೆ ವಿಚಾರಣೆ ಎದುರಿಸುತ್ತಿರುವ ನಟ ಧನ್ವೀರ್, ಆ ಪ್ರಕರಣ ಮುಗಿಯುವ ಮುನ್ನವೇ ಮತ್ತೊಂದು ಪ್ರಕರಣ ದಾಖಲಾಗಿದೆ.
ಬಂಡೀಪುರದಲ್ಲಿ ರಾತ್ರಿ ಸಫಾರಿ ವಿವಾದ: ವಿಚಾರಣೆಗೆ ಹಾಜರಾದ ನಟ ಧನ್ವೀರ್
ಕೆಲವು ತಿಂಗಳುಗಳ ಹಿಂದೆ ನಟ ಧನ್ವೀರ್ ಗೌಡ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಆಗ ಆನೆಯ ಮೇಲೆ ಏರಿದ್ದರು. ಆದರೆ ಮಾವುತ, ಕಾವಾಡಿಗಳನ್ನು ಬಿಟ್ಟರೆ ಬೇರೆಯವರು ಆನೆಯ ಮೇಲೆ ಏರುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಚಿತ್ರ ಹಂಚಿಕೊಂಡಿದ್ದ ನಟ ಧನ್ವೀರ್ ಗೌಡ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆನೆಯ ಮೇಲೆ ಏರಿ ಕುಳಿತಿರುವ ಇತ್ರವನ್ನು ಕೆಲ ತಿಂಗಳ ಹಿಂದೆ ಧನ್ವೀರ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಂಡಿಪುರ ರಾತ್ರಿ ಸಫಾರಿ ವಿಡಿಯೋ ವೈರಲ್ ಆದ ನಂತರ ಆನೆ ಮೇಲೆ ಏರಿರುವ ಚಿತ್ರ ವೈರಲ್ ಆಗಿತ್ತು.
ಆನೆ ಮೇಲೆ ಏರಿದ್ದಕ್ಕೆ ಪ್ರಕರಣ ದಾಖಲು
ಆನೆಯ ಮೇಲೆ ಏರಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಧನ್ವೀರ್ ಗೌಡ ಹಾಗೂ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಸತತವಾಗಿ ಅರಣ್ಯ ಕಾಯ್ದೆ ಉಲ್ಲಂಘಿಸಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಸಹ ಕಾರಣವಾಗಿದೆ.
ಬಂಡೀಪುರದಲ್ಲಿ ನಟ ಧನ್ವಿರ್ ನೈಟ್ ಸಫಾರಿ: ಅರಣ್ಯಾಧಿಕಾರಿ ಹೇಳಿದ್ದು ಏನು?
ಆರು ಮಂದಿ ವಿರುದ್ಧ ಪ್ರಕರಣ
ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಧನ್ವೀರ್ ವಿರುದ್ಧ ಅರಣ್ಯ ಮೊಕದ್ದಮ್ಮೆ ದಾಖಲಾಗಿದೆ. ಪ್ರಕರಣದಲ್ಲಿ ಧನ್ವೀರ್ ಪ್ರಮುಖ ಆರೋಪಿಯಾಗಿದ್ದಾರೆ. ಧನ್ವೀರ್ ಜೊತೆ 5 ಮಂದಿ ಸ್ನೇಹಿತರ ಮೇಲೂ ಎಫ್ಐಆರ್ ಆಗಿದೆ. A1 ಧನ್ವೀರ್, A2 ವಿಶ್ವಾಸ್ ಅಯ್ಯಾರ್, A3 ದರ್ಶನ್ ಬಿನ್ ನಂದಕುಮಾರ್ ಹಾಗೂ ಈ ಜೊತೆಗೆ ಹೆಸರು ಪತ್ತೆಯಾಗದ ಇನ್ನು ಮೂವರು ಆರೋಪಿಗಳ ಮೇಲೆ ಕೇಸ್ ದಾಖಲಾಗಿದೆ.
ವಿಚಾರಣೆಗೆ ಹಾಜರಾದ ನಟ ಧನ್ವೀರ್
ಇನ್ನು ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದಕ್ಕಾಗಿ ಧನ್ವೀರ್ ಗೌಡ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅದರಂತೆ ವಿಚಾರಣೆಗೆ ಹಾಜರಾಗಿದ್ದಾರೆ ನಟ ಧನ್ವೀರ್ ಗೌಡ.