Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋರ್ಟ್ ಮೆಟ್ಟಿಲೇರಿದ 'ಪ್ರೇಮ್ ಅಡ್ಡ' ಭಾರೀ ಕಿತ್ತಾಟ
ಕೆಎಫ್ ಸಿಸಿ ನಿಯಮದಂತೆ 'ಪ್ರೇಮ್ ಅಡ್ಡ' ಚಿತ್ರದ ಶೀರ್ಷಿಕೆಯನ್ನು ಒಂದೇ ಸೈಜಿನಲ್ಲಿ ಮುದ್ರಿಸಬೇಕಾಗಿತ್ತು. ಆದರೆ ಚಿತ್ರತಂಡ ಅವರ ಷರತ್ತಿಗೆ ವಿರುದ್ಧವಾಗಿ ಪ್ರೇಮ್ ಎಂಬುದನ್ನು ಚಿಕ್ಕದಾಗಿ ಹಾಗೂ ಅಡ್ಡ ಎಂಬುದನ್ನು ದೊಡ್ಡದಾಗಿ ಮುದ್ದಿಸಿತ್ತು. ಇದಕ್ಕೆ ಕೆ ಎಫ್ ಸಿಸಿ ಕ್ಯಾತೆ ತೆಗೆದಿತ್ತು. ಈ ಶೀರ್ಷಿಕೆಗೆ ತಡೆಯಾಜ್ಞೆ ಕೋರಿ ನೊಟೀಸ್ ನೀಡಿದ್ದಲ್ಲದೇ ಚಿತ್ರದ ಜಾಹೀರಾತುಗಳನ್ನು ಪ್ರಕಟಿಸದಂತೆ ಮುದ್ರಣ ಮಾಧ್ಯಮಕ್ಕೆ ಕರೆ ನೀಡಿತ್ತು.
ಪ್ರೇಮ್ ಅಡ್ಡ ಚಿತ್ರತಂಡವೀಗ ನೇರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೇ ಸಮರ ಸಾರಿ ಕೋರ್ಟ್ ಮೆಟ್ಟಿಲೇರಿದೆ. ಇದರ ವಿರುದ್ಧ ಈಗ 'ಪ್ರೇಮ್ ಅಡ್ಡ' ನಿರ್ಮಾಪಕ ಮೇಕಾ ಮುರಳಿಕೃಷ್ಣ ಕೋರ್ಟ್ ಮೊರೆ ಹೋಗಿದ್ದಾರೆ. ಅತ್ತ ಅಡ್ಡ ಚಿತ್ರದ ನಿರ್ಮಾಪಕ ಬಿಕೆ ಶ್ರೀನಿವಾಸ್ ಕೂಡ ಸುಮ್ಮನೆ ಕುಳಿತಿಲ್ಲ, ಅವರೂ 'ಪ್ರೇಮ್ ಅಡ್ಡ'ದ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಈ ಮೊದಲು, 'ಅಡ್ಡ' ಎಂಬ ಶೀರ್ಷಿಕೆ ಬಿ.ಕೆ. ಶ್ರೀನಿವಾಸ್ ಕೈಯಲ್ಲಿರುವುದರಿಂದ ಅದೇ ಶೀರ್ಷಿಕೆಯನ್ನು ಪ್ರೇಮ್ ನಾಯಕತ್ವದ ಚಿತ್ರಕ್ಕೆ ಕೊಡಲಾಗದು ಎಂದು ವಾಣಿಜ್ಯ ಮಂಡಳಿ ಹೇಳಿತ್ತು. ಆಗ ಓಕೆ ಎಂದಿದ್ದ ಪ್ರೇಮ್, 'ಪ್ರೇಮ್ ಅಡ್ಡ' ಎಂದು ತನ್ನ ಚಿತ್ರಕ್ಕೆ ಹೆಸರಿಟ್ಟಿದ್ದರು. ಇದನ್ನು ಚಲನ ಚಿತ್ರ ವಾಣಿಜ್ಯ ಮಂಡಳಿ ಒಪ್ಪಿರಲಿಲ್ಲ. ಪ್ರೇಮ್ ಮತ್ತು ಅಡ್ಡ ಇವುಗಳನ್ನು ಒಂದೇ ಗಾತ್ರದಲ್ಲಿ ಪ್ರಕಟಿಸಬೇಕು ಎಂದು ಷರತ್ತು ನೀಡಿತ್ತು.
ಇದೀಗ, ಶೀರ್ಷಿಕ ಸಮರ ಹೊಸ ಬೆಳವಣಿಗೆ ಕಂಡಿದೆ. ಇನ್ನೊಂದು ಮಜಲನ್ನು ತಲುಪಿದೆ. ಈ ಕುರಿತು ನಿರ್ದೇಶಕ ಹಾಗೂ ಪ್ರೇಮ್ ಅಡ್ಡ ನಾಯಕ ಪ್ರೇಮ್ "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಮಗೆ ಅನ್ಯಾಯವಾಗುತ್ತಿದೆ. ನಮ್ಮ ಚಿತ್ರದ ಜಾಹೀರಾತುಗಳನ್ನು ಪ್ರಕಟಿಸದಂತೆ ಮಂಡಳಿಯು ಪತ್ರಿಕೆಗಳಿಗೆ ನೋಟೀಸ್ ನೀಡಿದೆ. ಇದರಿಂದ ನಮಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಬೇಕು. ಅದಕ್ಕೆ ಕೋರ್ಟ್ ಮೊರೆ " ಎಂದಿದ್ದಾರೆ.
"ಕೆಎಫ್ ಸಿಸಿ ನನಗೆ ಆದೇಶ ನೀಡುವುದು ನನಗಿಷ್ಟವಿಲ್ಲ. ನಾನು ಒಬ್ಬ ನಿರ್ದೇಶಕ. ನಮ್ಮ ಕ್ರಿಯೇಟಿವಿಟಿಗೆ ಅವರ ನಿರ್ದೇಶನ ಬೇಡ. ಶೀರ್ಷಿಕೆ ಹೇಗೆ ಇಡಬೇಕು ಅನ್ನೋದು ನನಗೆ ಗೊತ್ತು. ಕೆಎಫ್ಸಿಸಿ ಮೇಲೆ ಗೌರವ ಇದೆ. ಆದ್ರೆ ಅವ್ರು ಹೇಳಿದಂತೆ ಕೇಳೋದಿಲ್ಲ. ಏನು ಮಾಡ್ಕೋತಾರೋ ಮಾಡ್ಕೊಳ್ಳಿ" ಎಂದು ಪ್ರೇಮಗ ಗುಡುಗಿದ್ದರು.
"ನಾನು ಪ್ರೇಮ್ ಅನ್ನೋದನ್ನು ಚಿಕ್ಕದಾಗಿಯೇ ಮುದ್ರಿಸುತ್ತೇನೆ. ಅಡ್ಡ ಅನ್ನೋದನ್ನೇ ದೊಡ್ಡದಾಗಿ ಹಾಕುತ್ತೇನೆ. ಅವರು (ಕೆಎಫ್ ಸಿಸಿ) ಏನು ಮಾಡ್ತಾರೋ ನೋಡ್ತೀನಿ. ನಮ್ಮ ಸಿನಿಮಾಗೆ ಯಾವ ಹೆಸ್ರು ಇಡ್ಬೇಕು ಅನ್ನೋದು ನಮ್ಮ ಹಕ್ಕು. ಅದನ್ನು ಬೇರೆ ಯಾರೂ ನಿರ್ಧರಿಸಬೇಕಾಗಿಲ್ಲ. ನಮ್ಗೆ ನಷ್ಟ ಆದ್ರೆ ಅದನ್ನು ಕೆಎಫ್ಸಿಸಿಯವರು ಕೊಡ್ತಾರಾ" ಎಂದು ಈ ಮದಲು ಕೆಂಡಾಮಂಡಲವಾಗಿದ್ದರು ಪ್ರೇಮ್.
ಮಹೇಶ್ ಬಾಬು ನಿರ್ದೇಶನದ 'ಪ್ರೇಮ್ ಅಡ್ಡ' ಚಿತ್ರವು ತಮಿಳಿನ 'ಸುಬ್ರಮಣ್ಯಪುರಂ' ರಿಮೇಕ್. ಇಲ್ಲಿ ಪ್ರೇಮ್ ಅವರಿಗೆ ಕೃತಿ ಕರಬಂದ ನಾಯಕಿ. ಒಟ್ಟಿನಲ್ಲಿ ಈ ಚಿತ್ರಕ್ಕೆ ಆರಂಭದಿಂದಲೂ ಏನಾದರೊಂದು ವಿಘ್ನಗಳು, ಪ್ರಚಾರ-ಅಪಪ್ರಚಾರಗಳು ಹಾಗೂ ವಾದ-ವಿವಾದಗಳು ಅಂಟಿಕೊಂಡೇ ಬಂದಿವೆ. ಮುಂದೇನಾಗುತ್ತೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)