Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿಲ್ ಕುಮಾರಸ್ವಾಮಿಯ ಮೆಚ್ಚಿನ ನಟ ಯಾರು ಗೊತ್ತೆ?
ರಾಜಕೀಯ-ಸಿನಿಮಾ ಎರಡರಲ್ಲೂ ಸಕ್ರಿಯರಾಗಿದ್ದಾರೆ ನಿಖಿಲ್ ಕುಮಾರಸ್ವಾಮಿ. ರಾಜಕೀಯದಿಂದ ತುಸು ಬಿಡುವು ಪಡೆದು ಸಿನಿಮಾದಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಕತೆ ಕೇಳುವ ಕಾರ್ಯದಲ್ಲಿ ನಿರತರಾಗಿದ್ದ ನಿಖಿಲ್ ಕೆಲವಾರು ಕತೆಗಳನ್ನನು ಓಕೆ ಸಹ ಮಾಡಿದ್ದಾರಂತೆ. ಎರಡು ಸಿನಿಮಾದ ಚಿತ್ರೀಕರಣ ಸಹ ನಡೆಯುತ್ತಿದೆ.
ಪತ್ನಿ ರೇವತಿಯನ್ನು ಹೊಗಳಿ ಕಾಲೆಳೆದ ನಿಖಿಲ್ ಕುಮಾರಸ್ವಾಮಿ
ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಏರಬೇಕೆನ್ನುವ ಇರಾದೆ ಇಟ್ಟುಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಹಿರಿಯ ನಟರೊಬ್ಬರನ್ನು ಮನಸಾರೆ ಇಷ್ಟಪಡುತ್ತಾರೆ ಅವರೇ ಡಾ.ರಾಜ್ಕುಮಾರ್. ಈ ವಿಷಯವನ್ನು ಅನುಶ್ರೀ ಅವರೊಂದಿಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಆದರೆ ತಮ್ಮ ಸಮಕಾಲೀನ ನಟರಲ್ಲಿ ಯಾರು ಇಷ್ಟ ಎಂದಾಗ ನಿಖಿಲ್ ಹೆಸರಿಸಿದ್ದು ಪುನೀತ್ ರಾಜ್ಕುಮಾರ್ ಅನ್ನು.
ಯುವ ನಟ ನಿಖಿಲ್ ಕುಮಾರಸ್ವಾಮಿ ಮೆಚ್ಚಿನ ನಟ
ಹೌದು, ಯುವ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊದಲಿಗೆ ಡಾ.ರಾಜ್ಕುಮಾರ್ ಬಹಳ ಇಷ್ಟವಂತೆ. ಈಗಿನ ಕಾಲದ ನಾಯಕ ನಟರಲ್ಲಿ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ಕುಮಾರ್. ಇದಕ್ಕೆ ಕಾರಣವನ್ನೂ ನೀಡಿದ್ದಾರೆ ನಿಖಿಲ್.
ಪುನೀತ್ ಒಬ್ಬ ನಿಜವಾದ ಸೂಪರ್ ಸ್ಟಾರ್: ನಿಖಿಲ್
'ನನ್ನ ಪ್ರಕಾರ ಪುನೀತ್ ಅವರು ಒಬ್ಬ ಸೂಪರ್ ಸ್ಟಾರ್. ಆದರೆ ಅವರು ಎಂದೂ ತಾವೊಬ್ಬ ಸೂಪರ್ ಸ್ಟಾರ್ ಎಂದು ಹೇಳಿಕೊಳ್ಳುವುದಿಲ್ಲ. ಬಹಳ ಸರಳವಾಗಿ, ವಿನಯವಂತರಾಗಿ ಇರುತ್ತಾರೆ. ಅವರ ಆ ಗುಣ ನನಗೆ ಬಹಳ ಇಷ್ಟ. ಅವರೊಬ್ಬ ಅದ್ಭುತ ನಟ' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
'ಪೈಲ್ವಾನ್' ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ನಿರ್ದೇಶಕ ಕೃಷ್ಣ, ಹೀರೋ ಯಾರು?
ಪುನೀತ್ಗೆ ಹಣಕಾಸು ಸಚಿವ ಸ್ಥಾನ ಕೊಟ್ಟ ನಿಖಿಲ್!
ಯಾವ ನಟರಿಗೆ ಯಾವ ಸಚಿವ ಸ್ಥಾನಕೊಡುತ್ತೀರಿ ಎಂಬ ಅನುಶ್ರೀಯ ತರ್ಲೆ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಹಣಕಾಸು ಖಾತೆಯನ್ನು ಪುನೀತ್ಗೆ, ವಿದೇಶಾಂಗ ವ್ಯವಹಾರ ಖಾತೆಯನ್ನು ಯಶ್ಗೆ, ವಿದೇಶಾಂಗ ಸಚಿವ ಸುದೀಪ್ಗೆ, ರಕ್ಷಣಾ ಸಚಿವ ದರ್ಶನ್ಗೆ ಹಾಗೂ ಕೊನೆಗೆ ಪ್ರಧಾನಿ ಸ್ಥಾನವನ್ನು ಶಿವಣ್ಣಗೆ ಕೊಡುತ್ತಾರಂತೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ರಚಿತಾ ರಾಮ್ ಗೆ ಕೊಡ್ತಾರಂತೆ ನಿಖಿಲ್.
Recommended Video
ಅಭಿಷೇಕ್ ಅಂಬರೀಶ್ ಬಗ್ಗೆ ನಿಖಿಲ್ ಮಾತು
ಬಿಯರ್ ಅಥವಾ ವೈನ್ ಯಾವುದು ಇಷ್ಟ ಎಂದು ಅನುಶ್ರೀ ಕೇಳಿದ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ನಿಖಿಲ್, 'ನಾನು ಕುಡಿಯುವುದು ಬಿಟ್ಟು ಒಂಬತ್ತು ವರ್ಷವಾಯಿತು ಎಂದರು. ಇದರ ಹೊರತಾಗಿ ಅಭಿಷೇಕ್ ಅಂಬರೀಶ್ ಬಗ್ಗೆಯೂ ಮಾತನಾಡಿದ ಅವರು, ನಾನೂ ಅಭಿಷೇಕ್ ಮೊದಲಿನಿಂದಲೂ ಸ್ನೇಹಿತರೇನೂ ಆಗಿರಲಿಲ್ಲ. ಪರಸ್ಪರ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸೂಕ್ತವಲ್ಲ ಎನಿಸುತ್ತದೆ ಎಂದು ಸುಮ್ಮನಾದರು ನಿಖಿಲ್.