ಉಡುಪಿಯಲ್ಲಿ ಯೋಧರ ತ್ಯಾಗ ನೆನೆದ ನಟ ಪುನೀತ್

ಭಾರತದ 49 ಯೋಧರು ಪುಲ್ವಾಮಾ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ದಾಳಿಯಿಂದ ನಿಧನರಾದ ಯೋಧರು ಭಾರತಾಂಬೆಯ ಅಮರ ಮಕ್ಕಳಾಗಿದ್ದಾರೆ. ಈ ಪೈಕಿ ಕರ್ನಾಟಕದ ಯೋಧ ಗುರು ಪಾರ್ಥಿವ ಶರೀರ ಮಂಡ್ಯವನ್ನು ತಲುಪುತ್ತಿದೆ.

ನಟ ಪುನೀತ್ ರಾಜ್ ಕುಮಾರ್ ಇದೀಗ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ವೇಳೆ ಪುನೀತ್ ಈ ಬಗ್ಗೆ ಹೇಳಿಕೆ ನೀಡಿದರು.

ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?

''ನಮಗೋಸ್ಕರ ಅವರು ಗಡಿ ಭಾಗದಲ್ಲಿ ನಿಂತು ಕಷ್ಟ ಪಡುತ್ತಾರೆ. ಅಲ್ಲಿ ಭಾಗಿಯಾದ ಎಲ್ಲರೂ ಭಾರತೀಯರು. ನಾನು ಅವರ ಬಗ್ಗೆ ಏನು ಮಾತನಾಡಿದರು ಕಡಿಮೆ ಆಗುತ್ತದೆ. ನಾವು ಅವರಿಗೆ ಏನು ಮಾಡಿದರೂ ಅದು ಕಡಿಮೆಯೇ. ಇದು ನಮ್ಮ ಪಾಲಿಗೆ ಕರಾಳ ದಿನ'' ಎಂದು ಯೋಧರ ಕಾರ್ಯವನ್ನು ನೆನೆದಿದ್ದಾರೆ. ಇನ್ನು ದಾಳಿ ನಡೆದ ದಿನ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದರು.

puneeth rajkumar reaction about Pulwama terrorist attack

ಅಂದಹಾಗೆ, ಪುನೀತ್ ಸದ್ಯ ತಮ್ಮ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ಕೆಲಸಗಳ ನಡುವೆ ಉಡುಪಿಗೆ ಭೇಡಿ ನೀಡಿ ಕೃಷ್ಣನ ದರ್ಶನ ಪಡೆದುಕೊಂಡು ಹೋಗಿದ್ದಾರೆ.


ಇಂದು ನಟ ದರ್ಶನ್ ಹುಟ್ಟುಹಬ್ಬವಿದ್ದು, ಪುನೀತ್ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯ ತಿಳಿಸಿದ್ದಾರೆ.

More from Filmibeat

English summary
Kannada actor Puneeth Rajkumar's reaction about Pulwama terrorist attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X