Just In
- 36 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 37 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 2 hrs ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- News
ಇಷ್ಟಕ್ಕೂ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ ಗೊತ್ತಾ?
- Education
Indian Postal Circle Recruitment 2021: 3679 ಗ್ರಾಮೀಣ ದಖ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಸಂಸತ್ ಕ್ಯಾಂಟೀನ್ ಸಸ್ತಾ ಆಹಾರಗಳು ಇನ್ನು ಮುಂದೆ ದುಬಾರಿ
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಮಲತಾ ಗೆಲುವಿನ ಬಗ್ಗೆ ರಚಿತಾ ರಾಮ್ ಮಾತು
ಮಂಡ್ಯದ ನೂತನ ಎಂ ಪಿ ಯಾಗಿ ನಟಿ ಸುಮಲತಾ ಅಂಬರೀಶ್ ಆಯ್ಕೆ ಆಗಿದ್ದಾರೆ. ಇದು ಚಿತ್ರರಂಗದ ಅವರ ಸ್ನೇಹಿತರಿಗೆ, ಹಿತೈಷಿಗಳಿಗೆ ಸಂತಸ ನೀಡಿದೆ.
ನಟಿ ರಚಿತಾ ರಾಮ್ ಸುಮಲತಾರಿಗೆ ಶುಭ ಹಾರೈಸಿದ್ದಾರೆ. ಮಂಡ್ಯ ಜನರ ಕಷ್ಟವನ್ನು ಅವರು ನಿವಾರಿಸುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ರಚಿತಾ ರಾಮ್ 'ಐ ಲವ್ ಯೂ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳಿದ್ದಾರೆ.
ಈ ಫೋಟೋ ನೋಡಿ ಸುಮಲತಾ ಮಾಡಿದ ಕಾಮೆಂಟ್ ಏನು?
ಅಂಬರೀಶ್ ಕುಟುಂಬದ ಆಪ್ತರಲ್ಲಿ ರಚಿತಾ ರಾಮ್ ಸಹ ಒಬ್ಬರು. ಇನ್ನೊಂದು ಕಡೆ ರಚಿತಾ ರಾಮ್ ಕೆರಿಯರ್ ಶುರು ಆಗಿದ್ದು, ಕೂಡ ಅಂಬರೀಶ್ ಹಾಗೂ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ.
ಒಬ್ಬ ಹೆಣ್ಣು ಮಗಳಾಗಿ, ಅನೇಕ ಕಷ್ಟಗಳ ನಡುವೆ ಮಂಡ್ಯ ಚುನಾವಣೆ ಗೆದ್ದ ಸುಮಲತಾರ ಧೈರ್ಯವನ್ನು ರಚಿತಾ ರಾಮ್ ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ..

ಎಲ್ಲವನ್ನು ಗೆದ್ದು ಮಂಡ್ಯದ ಎಪಿ ಆಗಿದ್ದಾರೆ
''ಮೊದಲು ಸುಮ ಮೇಡಮ್ ಗೆ ಶುಭಕೋರಲು ಇಷ್ಟ ಪಡುತ್ತೇನೆ. ಒಬ್ಬ ಹೆಣ್ಣು ಮಗಳಾಗಿ ತುಂಬ ಧೈರ್ಯದಿಂದ, ತುಂಬ ತಾಳ್ಮೆ ಇಟ್ಟುಕೊಂಡು ಚುನಾವಣೆ ಗೆದ್ದಿದ್ದಾರೆ. ಒಂದು ಹೆಣ್ಣುಮಗಳು ಎಷ್ಟೇ ಕಷ್ಟ ಬಂದರೂ ಎಲ್ಲವನ್ನು ಗೆದ್ದು ಮಂಡ್ಯದ ಎಪಿ ಆಗಿದ್ದಾರೆ.'' ಎಂದು ಸುಮಲತಾರಿಗೆ ರಚಿತಾ ವಿಶ್ ಮಾಡಿದ್ದಾರೆ.

ಅವರು ಒಳ್ಳೆಯ ಕೆಲಸ ಮಾಡುತ್ತಾರೆ
''ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಮಂಡ್ಯ ಜನರ ಕಷ್ಟಗಳನ್ನು ಬಗೆಹರಿಸುತ್ತಾರೆ. ಅವರ ಆಸೆಗಳನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ಇದೆ. ಸುಮ ಮೇಡಮ್ ಗೆ ಒಳ್ಳೆದಾಗಲಿ, ದೇವರ ಆಶೀರ್ವಾದ ಅವರ ಮೇಲೆ ಇರಲಿ.'' ಎಂದು ಸುಮಲತಾ ಮೇಲೆ ಭರವಸೆಯ ಮಾತುಗಳನ್ನು ಆಡಿದ್ದಾರೆ.
ನಿಖಿಲ್ ಮತ್ತು ಅಭಿಷೇಕ್ ನಡೆಯ ಬಗ್ಗೆ ಸುಮಲತಾ ಹೇಳಿದ್ದೇನು?

'ಅಮರ್' ಚಿತ್ರದ ಚಿತ್ರೀಕರಣದ ಸೆಟ್
ಇದೇ ವೇಳೆ ಅಂಬರೀಶ್ ಅವರ ಬಗ್ಗೆ ಮಾತನಾಡಿದ ರಚಿತಾ ''ನಾನು ಅಂಬಿ ಸರ್ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ಎರಡು ಸಿನಿಮಾ ಮಾಡಿದ್ದೇನೆ. ನನ್ನ ಮೊದಲ ಚಿತ್ರ ಅವರ ಜೊತೆಗೆ ಮಾಡಿದ್ದೇನೆ. 'ಅಮರ್' ಚಿತ್ರದ ಚಿತ್ರೀಕರಣ ಸೆಟ್ ಹೋದಾಗ ಅವರ ಜೊತೆಗೆ ಕೊನೆಯ ಬಾರಿ ಮಾತನಾಡಿದ್ದೆ'' ಎಂದರು.

'ಅಮರ್' ಚಿತ್ರದ ಹಾಡಿನಲ್ಲಿ ರಚಿತಾ
ಅಭಿಷೇಕ್ ಅಂಬರೀಶ್ ನಟನೆಯ 'ಅಮರ್' ಸಿನಿಮಾಧ ಕೊಡವ ಹಾಡಿನಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಹಾಡಿನಲ್ಲಿ ಯಾಕೆ ಬರುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಸಿನಿಮಾ ನೋಡಿದ ಅನೇಕರಿಗೆ ಆ ಪ್ರಶ್ನೆ ಮೂಡುತ್ತದೆ. ಇನ್ನು 'ಅಮರ್' ಚಿತ್ರದ ಯಶಸ್ಸಿಗೆ ರಚಿತಾ ರಾಮ್ ಶುಭ ಕೋರಿದ್ದಾರೆ. ಅಭಿಷೇಕ್ ರನ್ನು ಹೊಗಳಿದ್ದಾರೆ.
''ಇದು ನೀವು ಸೃಷ್ಟಿಸಿದ ಇತಿಹಾಸ' : ಗೆಲುವನ್ನು ಜನರಿಗೆ ಅರ್ಪಿಸಿದ ಸುಮಲತಾ