Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹುಚ್ಚ ವೆಂಕಟ್' ಬಗ್ಗೆ ರಘು ದೀಕ್ಷಿತ್ ಹೇಳಿದ್ದೇನು?
ಗಲ್ಲಿಗಲ್ಲಿಗಳಲ್ಲೂ, ಸಾಮಾಜಿಕ ಜಾಲತಾಣಗಳ ಪ್ರತಿ ಅಕೌಂಟ್ ನಲ್ಲೂ ಕೇಳಿ ಬರುತ್ತಿರುವ ಹೆಸರು ಒಂದೇ...ಅದೇ ಹುಚ್ಚ ವೆಂಕಟ್.
ಯಾರ ಬಾಯಲ್ಲಿ ಕೇಳಿ, 'ನನ್ ಮಗಂದ್...' ಡೈಲಾಗ್ ಬಂದೇ ಬರುತ್ತೆ. ಇದು 'ಬಿಗ್ ಬಾಸ್' ಹವಾನೋ, ಇಲ್ಲಾ ಹುಚ್ಚ ವೆಂಕಟ್ ಮೇನಿಯಾನೋ, ಒಟ್ನಲ್ಲಿ ಕನ್ನಡ ಕಿರುತೆರೆ ಪ್ರಿಯರಿಗೆ ಸಖತ್ ಮನರಂಜನೆ ಸಿಕ್ತಿರೋದಂತೂ ಪಕ್ಕಾ.
ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಹುಚ್ಚ ವೆಂಕಟ್ ಎಂಟ್ರಿಕೊಟ್ಟರು. ಹುಚ್ಚ ವೆಂಕಟ್ ಹುಚ್ಚಾಟಗಳು ನಗು ತರಿಸಿದರೂ, ಕೆಲವೊಮ್ಮೆ ಅಧಿಕಪ್ರಸಂಗ ಅಂತ ಅನಿಸೋದು ಸಹಜ.
ಯಾರೂ ಏನೇ ಅನ್ನಲಿ, ಬಿಡಲಿ...ನಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ರವರಿಗೆ ಮಾತ್ರ ಹುಚ್ಚ ವೆಂಕಟ್ 'ಬಿಗ್ ಬಾಸ್-3' ವಿನ್ನರ್ ಆಗ್ಬೇಕಂತೆ. ಹಾಗಂತ ''ನಿನ್ನ ಪೂಜೆಗೆ ಬಂದೆ ಮಹದೇಶ್ವರ..'' ಖ್ಯಾತಿಯ ರಘು ದೀಕ್ಷಿತ್ ಟ್ವೀಟ್ ಮಾಡಿದ್ದಾರೆ.
I
totally
want
Huccha
Venkat
to
win
Big
Boss
3
Kannada.
Full
on
non-stop
entertainer.
God
bless
him.
—
Raghu
Dixit
(@Raghu_Dixit)
October
26,
2015
''ಬಿಗ್ ಬಾಸ್-3' ಕನ್ನಡ ಶೋನ ಹುಚ್ಚ ವೆಂಕಟ್ ಗೆಲ್ಲಬೇಕು ಅನ್ನೋದು ನನ್ನ ಆಸೆ. ಅವರು ನಾನ್ ಸ್ಟಾಪ್ ಎಂಟರ್ಟೇನರ್. ದೇವರ ಆಶೀರ್ವಾದ ಅವರ ಮೇಲೆ ಇರಲಿ'' ಅಂತ ರಘು ದೀಕ್ಷಿತ್ ಟ್ವೀಟ್ ಮಾಡಿದ್ದಾರೆ. ['ಬಿಗ್ ಬಾಸ್'ಗೆ ಹೋಗಲು ಹುಚ್ಚ ವೆಂಕಟ್ ಹಾಕಿದ ಕಂಡೀಷನ್ ಏನು?]
ಹುಚ್ಚ ವೆಂಕಟ್ ಗೆ ಇದುವರೆಗೂ ಪಾಕಿಸ್ತಾನ, ಅಮೆರಿಕದಲ್ಲಿ ಫ್ಯಾನ್ಸ್ ಇದ್ದಾರೆ ಅಂತ ಅಂದುಕೊಂಡಿದ್ವಿ (ಅವರೇ ಹೇಳಿದ ಪ್ರಕಾರ). ಆದ್ರೆ, ಹುಚ್ಚ ವೆಂಕಟ್ ಗೆ ರಘು ದೀಕ್ಷಿತ್ ಕೂಡ ಮನಸೋತಿದ್ದಾರೆ ಅಂದ್ರೆ ನೀವೇ ಊಹಿಸಿಕೊಳ್ಳಿ, ಹುಚ್ಚ ವೆಂಕಟ್ ಕಮಾಲ್ ಹೇಗಿದೆ ಅಂತ.