Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆದಿತ್ಯ ಜೊತೆಗೆ ಸಿನಿಮಾ ಘೋಷಿಸಿದ ಎಸ್.ನಾರಾಯಣ್: ನಾಯಕಿ ಯಾರು?
ಹಿರಿಯ ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಹೊಸ ಸಿನಿಮಾದ ಜೊತೆ ಮರಳಿ ಬಂದಿದ್ದಾರೆ. ಎಸ್.ನಾರಾಯಣ್ ನಿರ್ದೇಶನದ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಗಳಾಗಿವೆ.
ಎಸ್.ನಾರಾಯಣ್ ಸಿನಿಮಾಕ್ಕೆ ಆದಿತ್ಯ ಅನ್ನು ನಾಯಕರಾಗಿದ್ದು, ಅವರೂ ಸಹ ಸಿನಿಮಾದಲ್ಲಿ ನಟಿಸಿ ಬಹುಕಾಲವೇ ಆಗಿದೆ. ಇಬ್ಬರಿಗೂ ಈ ಸಿನಿಮಾ 'ಕಮ್ ಬ್ಯಾಕ್' ಸಿನಿಮಾ ಆಗಿರಲಿದೆ.
ಆದಿತ್ಯ ನಟಿಸಿದ್ದ 'ಚಕ್ರವರ್ತಿ' ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಕೆಲವು ಸಿನಿಮಾಗಳಲ್ಲಿ ಆದಿತ್ಯ ನಟಿಸಿದರಾದರೂ ಯಾವೊಂದು ಸಿನಿಮಾ ಸಹ ಇನ್ನೂ ಬಿಡುಗಡೆ ಆಗಿಲ್ಲ. ಹಾಗಾಗಿ ಎಸ್.ನಾರಾಯಣ್ ಹಾಗೂ ಆದಿತ್ಯ ಇಬ್ಬರಿಗೂ ಇದು ಕಮ್ ಬ್ಯಾಕ್ ಸಿನಿಮಾ ಎಂದೇ ಹೇಳಲಾಗುತ್ತಿದೆ.
ಸಿನಿಮಾಕ್ಕೆ ಅದಿತಿ ಪ್ರಭುದೇವಾ ಅನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯದ್ದು ರಫ್ ಆಂಡ್ ಟಫ್ ಆಗಿರುವ ಹುಡುಗಿಯ ಪಾತ್ರವಂತೆ. ಇದಕ್ಕೆ ಅದಿತಿ ಸೂಕ್ತ ಎನಿಸಿತಂತೆ ಎಸ್.ನಾರಾಯಣ್ ಗೆ.
ರವಿ ಎಂಬುವರು ಆದಿತ್ಯ ಅವರನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾದ ಕತೆ ಬರೆದಿದ್ದರಂತೆ. ಅದೇ ಕತೆಯ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ ಎಸ್.ನಾರಾಯಣ್. ಸಿನಿಮಾದ ಕತೆ ನನಗೆ, ಆದಿತ್ಯ ಗೆ ಹಾಗೂ ನಾಯಕಿ ಅದಿತಿಗೆ ಹೊಸತರಹದ್ದು. ಆದರೆ ಮೂವರಿಗೂ ಕತೆ ಇಷ್ಟವಾಗಿದೆ. ಹೊಸ ರೀತಿಯ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದಿದ್ದಾರೆ ಎಸ್.ನಾರಾಯಣ್.
Recommended Video
ಸಿನಿಮಾವು ಸಾಮಾನ್ಯ ವ್ಯಕ್ತಿಯೊಬ್ಬನ ಕತೆ ಆಗಿರಲಿದೆ. ಸಿನಿಮಾದಲ್ಲಿ ಆದಿತ್ಯ ಎರಡು ಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಗಂಭೀರವಾದ ಕಣ್ಣುಗಳುಳ್ಳ ಆದಿತ್ಯಗೆ ಈ ಪಾತ್ರ ಬಹಳ ಚೆನ್ನಾಗಿ ಒಪ್ಪುತ್ತದೆ ಎಂದಿದ್ದಾರೆ ಎಸ್.ನಾರಾಯಣ್. ಇದೇ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.