ರಜನಿಕಾಂತ್ ಅವರನ್ನ ಭೇಟಿ ಮಾಡಿದ ಸಾರಾ ಗೋವಿಂದು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಭೇಟಿ ಮಾಡಿದ್ದಾರೆ. ಸಾರಾ ಗೋವಿಂದು ಅವರು ರಜನಿಯನ್ನ ಯಾಕೆ ಭೇಟಿ ಮಾಡಿದರು ಎಂಬುದು ಕಾಡುವ ಪ್ರಶ್ನೆ. ಸಾರಾ ಗೋವಿಂದು ಮಗನ ಮದುವೆಗೆ ರಜನಿಯನ್ನ ಆಹ್ವಾನಿಸಲು ಚೆನ್ನೈನಲ್ಲಿರುವ ರಜನಿ ನಿವಾಸಕ್ಕೆ ಸಾರಾ ಗೋವಿಂದು ಮಂಗಳವಾರ ಹೋಗಿದ್ದರು.
ಸಾರಾ ಗೋವಿಂದು ಅವರ ಮಗ ಅನೂಪ್ ಸಾರಾ ಗೋವಿಂದು ಹಾಗೂ ಮೇಘನಾ ಅವರ ಮದುವೆ ಇದೇ ಫೆಬ್ರವರಿ 19 ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆಯಲಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗಿನ ಹಲವು ಸಿನಿಮಾ ಕಲಾವಿದರು ಮದುವೆಗೆ ಭಾಗಿಯಾಗಲಿದ್ದಾರೆ.
ಸಾರಾ ಗೋವಿಂದು ಅವರ ಆಹ್ವಾನವನ್ನ ಸ್ವೀಕರಿಸಿರುವ ರಜನಿಕಾಂತ್, ಮದುವೆಗೆ ಖಂಡಿತಾ ಬರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ.

ರಜನಿಕಾಂತ್ ಮಾತ್ರವಲ್ಲದೇ, ತಮಿಳು ನಟ ಶರತ್ ಕುಮಾರ್, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಸೋನಿಯಾ ಅಗರ್ ವಾಲ್ ಸೇರಿದಂತೆ ಹಲವು ಹಿರಿಯ ನಟರನ್ನ ಮದುವೆಗೆ ಆಹ್ವಾನಿಸಲಾಗಿದೆ.
More from Filmibeat
English summary
Karnataka Film Chamber President sa ra govindu has meet super star rajinikanth at chennai and he invites rajinikanth to his son's marriage


Click it and Unblock the Notifications











