Don't Miss!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮೈಲ್ ಗುರು ; ಚಿತ್ರ ಚಿಕ್ಕದ್ದು, ಆಲೋಚನೆ ದೊಡ್ಡದ್ದು!
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಹೆಚ್ಚು ಹೆಚ್ಚು ಕಿರುಚಿತ್ರಗಳು ತಯಾರಾಗುತ್ತಿವೆ. ಕಡಿಮೆ ಖರ್ಚಿನಲ್ಲಿ ತಮಗೆ ಸಿಗುವ ಸೌಲಭ್ಯಗಳನ್ನೇ ಬಳಸಿಕೊಂಡು ಮಾಡಲ್ಪಡುವ ಈ ಚಿತ್ರಗಳು ಗುಣಮಟ್ಟದಲ್ಲಿ ಯಾವ ದೊಡ್ಡ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬರುತ್ತಿವೆ. ಹಾಗೂ ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಈಗ ಇದೇ ಸಾಲಿಗೆ ಸೇರಲು ಇನ್ನೊಂದು ಕಿರುಚಿತ್ರ ಅಣಿಯಾಗುತ್ತಿದ್ದು, ಅದರ ಹೆಸರು 'ಸ್ಮೈಲ್ ಗುರು'. ಇತ್ತೀಚೆಗಷ್ಟೆ ಈ ಚಿತ್ರ ರಾಜರಾಜೇಶ್ವರಿ ನಗರದ ಷಣ್ಮುಗಂ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಮುಹೂರ್ತ ಆಚರಿಸಿಕೊಂಡಿತು. ಈ ಕಿರುಚಿತ್ರಕ್ಕೆ ಹಾರೈಸಲು ನಿರ್ಮಾಪಕ ಸಾರಾ ಗೋವಿಂದು, ಚಿತ್ರ ನಿರ್ದೇಶಕ ಅಲೆಮಾರಿ ಸಂತು ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. [ಯೂಟ್ಯೂಬಲ್ಲಿ ಕನ್ನಡ ಕಿರುಚಿತ್ರಕ್ಕೆ ಸಿಕ್ಕಾಪಟ್ಟೆ ಹಿಟ್ಸ್]
'ಸ್ಮೈಲ್ ಗುರು' ಚಿತ್ರವನ್ನ ನವ ಪ್ರತಿಭೆ ಉಜ್ವಲ್ ಪ್ರಸಾದ್ ನಿರ್ದೇಶಿಸುತ್ತಿದ್ದು, ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇದೊಂದು ಉತ್ಸಾಹಿ ತಂಡವನ್ನು ಒಳಗೊಂಡಿದ್ದು ಅರ್ಜುನ್ ಕುಮಾರ್, ಆನಂದ್ ಸಾಲುಂಡಿ ಹಾಗೂ ಇನ್ನಿತರರ ಪ್ರತಿಭೆಗಳ ಸಂಗಮದಲ್ಲಿ ಕನ್ನಡಕ್ಕೊಂದು ಸದಭಿರುಚಿಯ ಕಿರುಚಿತ್ರ ಕೊಡುವ ತವಕದಲ್ಲಿದೆ. [ಬೈಟೂ ಕಾಫಿ ಕುಡಿದು ಒಂದು ಕಿರುಚಿತ್ರ ಕಳಿಸಿ ನೋಡೋಣ]
ಮನರಂಜನೆಯೇ ಮೂಲ ಉದ್ದೇಶ - ಕಿರುಚಿತ್ರ ಅಂದ ಕೂಡಲೆ ಏನೋ ಒಂದು ಮೆಸೇಜ್ ಒಳಗೊಂಡಿರುವುದು ಮಾಮೂಲಿ. ಆದರೆ, ಈ ಚಿತ್ರದಲ್ಲಿ ಅಂತಹ ಯಾವುದೇ ಸಂದೇಶ ಸಾರುವ ಉದ್ದೇಶ ಇಲ್ಲ. ಕೇವಲ ಮನರಂಜಿಸುವ ಉದ್ದೇಶದಿಂದ ಈ ಕಿರುಚಿತ್ರ ಮೂಡಿಬರುತ್ತಿದ್ದು, ಪಕ್ಕಾ ಕರ್ಮರ್ಶಿಯಲ್ ಫಾರ್ಮ್ಯಾಟ್ ನಲ್ಲಿ ತಯಾರಾಗುತ್ತಿದೆ.