ಚಿರು-ಮೇಘನಾ ಕಲ್ಯಾಣದಲ್ಲಿ ಕಾಣಿಸಿಲ್ಲ ಈ ನಟರು: ಎಲ್ಲೋಗಿದ್ದರು?
Recommended Video

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿದ್ದು, ನವ ವಧು-ವರರಿಗೆ ಶುಭ ಕೋರಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಮುಹೂರ್ತ ಮತ್ತು ಆರತಕ್ಷತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್, ರಾಧಿಕಾ ಕುಮಾರಸ್ವಾಮಿ, ಧನಂಜಯ್ ಹೀಗೆ ಅನೇಕ ಕಲಾವಿದರು ಮದುಗೆ ಹೋಗಿದ್ದರು.
ಆದ್ರೆ, ಕನ್ನಡದ ಕೆಲ ಖ್ಯಾತ ನಟರು ಚಿರು-ಮೇಘನಾ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವಿವಿಧ ಕಾರಣಗಳಿಂದ ಬೇರೆ ಬೇರೆ ಕಡೆ ಹೋಗಿರುವ ಈ ನಟರು ತಾರಾ ಜೋಡಿಯ ಮದುವೆಗೆ ಬಂದಿಲ್ಲ. ಹಾಗಿದ್ರೆ, ಯಾವೆಲ್ಲ ಸ್ಟಾರ್ ಗಳು ಚಿರು-ಮೇಘನಾ ಮದುವೆಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಮುಂದೆ ನೋಡಿ....

ಮಲೇಷಿಯಾದಲ್ಲಿ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮದುವೆ ಬರ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದ್ರೆ, ಫ್ಯಾಮಿಲಿ ಜೊತೆ ಸಮ್ಮರ್ ಹಾಲಿಡೇಗಾಗಿ ಮಲೇಷಿಯಾಗೆ ಹೋಗಿದ್ದ ಕಾರಣ ಚಿರು-ಮೇಘನಾ ಮದುವೆಯಲ್ಲಿ ಭಾಗವಹಿಸಿಲ್ಲ.

ಶಿವಣ್ಣ ಭಾಗಿಯಾಗಿಲ್ಲ
ದುಬೈ ಮತ್ತು ಮಸ್ಕತ್ ದೇಶಗಳಲ್ಲಿ ಟಗರು ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿದ್ದ ಕಾರಣ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಕೆಪಿ ಶ್ರೀಕಾಂತ್ ಎಲ್ಲರೂ ಹೋಗಿದ್ದರು. ಹೀಗಾಗಿ, ತಾರಾ ಜೋಡಿಯ ಮದುವೆಯನ್ನ ಶಿವಣ್ಣ ಫ್ಯಾಮಿಲಿ ಮಿಸ್ ಮಾಡಿಕೊಂಡಿದೆ.

ಪ್ರಚಾರದಲ್ಲಿ ಯಶ್ ಬ್ಯುಸಿ
ಇನ್ನು ರಾಕಿಂಗ್ ಸ್ಟಾರ್ ಯಶ್ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದಾಗಿ ಒಪ್ಪಿಗೆ ನೀಡಿರುವುದರಿಂದ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ, ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿರುವ ಯಶ್ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿಲ್ಲ.

ಸಾಂಗ್ ಶೂಟಿಂಗ್ ನಲ್ಲಿ ಉಪೇಂದ್ರ
ಇನ್ನು 'ಹೋಮ್ ಮಿನಿಸ್ಟರ್' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ''ಮಲೇಷಿಯಾದಲ್ಲಿ ಇದ್ದಾರೆ. ಹೀಗಾಗಿ, ಉಪ್ಪಿ ಫ್ಯಾಮಿಲಿ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿಲ್ಲ.


Click it and Unblock the Notifications











