Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಹುಡುಗನ ಜೊತೆ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ
ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಎರಡು ವರ್ಷಕ್ಕಿಂತಲೂ ಹೆಚ್ಚಾಗಿದೆ. ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ನೀಡುವ ಜೊತೆಗೆ ಇಡೀಯ ಬಾಲಿವುಡ್ ಅನ್ನು ಬೇರೆ-ಬೇರೆ ರೀತಿಯಲ್ಲಿ ಕಾಡಿತ್ತು.
2020ರ ಜೂನ್ 14 ರಂದು ಸುಶಾಂತ್ ಸಿಂಗ್ ತಮ್ಮ ಮುಂಬೈ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಕುರಿತಾಗಿ ಹಲವು ಅನುಮಾನಗಳು ಎದ್ದಿದ್ದವು. ಸುಶಾಂತ್ ಅವರನ್ನು ಕೊಲೆ ಮಾಡಲಾಗಿದೆ. ಅವರಿಗೆ ವಿಷ ಉಣಿಸಲಾಗಿದೆ. ಸುಶಾಂತ್ಗೆ ಬೇರೆ-ಬೇರೆ ಮದ್ದು ನೀಡಿ ಅವರನ್ನು ಖಿನ್ನತೆಗೆ ನೂಕಲಾಗಿದೆ ಎಂದು ಹಲವು ಆರೋಪಗಳು ಕೇಳಿಬಂದಿದ್ದವು.
ಸುಶಾಂತ್ರ ಸಾವಿನ ಪ್ರಕರಣದಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಆರೋಪಿಯನ್ನಾಗಿಸಲಾಗಿತ್ತು. ಆಕೆಯಿಂದಲೇ ಸುಶಾಂತ್ ನಿಧನ ಹೊಂದಿದ್ದಾರೆ ಎಂದು ಸುಶಾಂತ್ರ ಕುಟುಂಬದವರು ಆರೋಪಿಸಿದ್ದರು. ಸುಶಾಂತ್ರ ನಿಧನ ಬಳಿಕ ಬಿಚ್ಚಿಕೊಂಡ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸವನ್ನೂ ಅನುಭಿಸಿದ್ದರು.
ಸುಶಾಂತ್ ನಿಧನದಿಂದ ಆಘಾತ
ಸುಶಾಂತ್ರ ನಿಧನದಿಂದ ಆಘಾತಗೊಂಡಿದ್ದ ರಿಯಾ ಚಕ್ರವರ್ತಿ ಆ ನಂತರ ಆದ ಬೆಳವಣಿಗೆಗಳಿಂದ ಮತ್ತಷ್ಟು ಕುಸಿತಕ್ಕೊಳಗಾಗಿದ್ದರು. ಇದೀಗ ಹಳೆಯ ನೆನಪುಗಳಿಂದ ಹೊರಬಂದಂತಿರುವ ರಿಯಾ ಚಕ್ರವರ್ತಿ ಹೊಸ ಹುಡುಗನ ಪ್ರೇಮಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಯಾರು ಈ ಬಂಟಿ ಸಜ್ದೇಹ್?
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ನಿಂದ ಬಹುತೇಕ ದೂರವೇ ಆಗಿರುವ ರಿಯಾ ಚಕ್ರವರ್ತಿ ಇದೀಗ ಬಂಟಿ ಸಜ್ದೇಹ್ ಎಂಬಾತನೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಬಂಟಿ ಸಜ್ದೇಹ್ ಸಾಮಾನ್ಯನೇನಲ್ಲ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ 'ಫ್ಯಾಬ್ಯುಲಸ್ ಲೈಫ್ ಆಫ್ ಬಾಲಿವುಡ್ ವೈವ್ಸ್' ಸರಣಿಯಲ್ಲಿ ಕಾಣಿಸಿಕೊಳ್ಳುವ ಸೀಮಾ ಸಜ್ದೇಹ್ ಅವರ ಸಹೋದರ ಹಾಗೂ ಕಾರ್ನರ್ಸ್ಟೋನ್ ಸ್ಟೋರ್ಟ್ಸ್ ಆಂಡ್ ಎಂಟರ್ಟೈನರ್ ಹೆಸರಿನ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಿಇಓ ಸಹ. ಇದು ಭಾರತದ ಅತಿ ದೊಡ್ಡ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ.
ಮೊದಲೇ ಗೆಳೆತನ ಇತ್ತು
ಅಸಲಿಗೆ ರಿಯಾ ಚಕ್ರವರ್ತಿ, ಇದೇ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಗ್ರಾಹಕಿಯಾಗಿದ್ದರು. ಇದೇ ಸಂಸ್ಥೆಯ ನೆರವಿನೊಂದಿಗೆ ರಿಯಾ ಬಾಲಿವುಡ್ ಪ್ರವೇಶ ಮಾಡಿದ್ದರಂತೆ. ಇದೇ ಕಾರಣಕ್ಕೆ ಬಂಟಿ ಜೊತೆ ರಿಯಾಗೆ ಮುಂಚಿನಿಂದಲೂ ಗೆಳೆತನವಿತ್ತು. ರಿಯಾ, ಸಂಕಷ್ಟದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗುವ ಹಂತದಲ್ಲಿದ್ದಾಗ ಬಂಟಿ ನೆರವು ನೀಡಿದರು ಎನ್ನಲಾಗುತ್ತಿದೆ. ಇದೀಗ ರಿಯಾ ಹಾಗೂ ಬಂಟಿ ಜೊತೆಯಾಗಿ ಓಡಾಡುತ್ತಿದ್ದಾರೆ.
ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದ ರಿಯಾ
ಅಕ್ಟೋಬರ್ ತಿಂಗಳಲ್ಲಿ ನಡೆದ ಬಂಟಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಿಯಾ ಪಾಲ್ಗೊಂಡಿದ್ದರು. ಅಲ್ಲಿ ಕರಣ್ ಜೋಹರ್ ಹಾಗೂ ಇನ್ನಿತರೆ ಗೆಳತಿಯರೊಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಆಗ ರಿಯಾರ ವರ್ತನೆ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಬಂಟಿ ಹಾಗೂ ರಿಯಾ ಒಟ್ಟಿಗೆ ಕಾರಿನಲ್ಲಿ ಸುತ್ತಾಡುತ್ತಿರುವ ಚಿತ್ರಗಳು ಹರಿದಾಡುತ್ತಿವೆ. ಸಿನಿಮಾ ವಿಷಯಕ್ಕೆ ಬರುವುದಾದರೆ 'ಸುಶಾಂತ್' ಸಾವಿಗೆ ಮುಂಚೆ ಒಪ್ಪಿಕೊಂಡಿದ್ದ 'ಚೆಹರೆ' ಸಿನಿಮಾದ ಬಳಿಕ ರಿಯಾ ಚಕ್ರವರ್ತಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅವರು ಸಿನಿಮಾಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.