ನೀನಾಸಂ ಸತೀಶ್ 'ಟೈಗರ್ ಗಲ್ಲಿ' ಚಿತ್ರಕ್ಕೆ ಚಿತ್ರಮಂದಿರದ ಸಮಸ್ಯೆ
ನಟ ನೀನಾಸಂ ಸತೀಶ್ 'ಟೈಗರ್ ಗಲ್ಲಿ' ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಇದೀಗ ಈ ಸಿನಿಮಾಗೆ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ.

ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದೆ. ಜೊತೆಗೆ ಬುಕ್ ಮೈ ಶೋ ನಲ್ಲಿ ನೋಡಿದರೆ ಸಿನಿಮಾ ಬೆಂಗಳೂರಿನ ಒಂದೇ ಒಂದು ಚಿತ್ರಮಂದಿರದಲ್ಲಿ ಮಾತ್ರ ಇದೆ.

ಇನ್ನು 'ಟೈಗರ್ ಗಲ್ಲಿ' ಒಂದು ಪಕ್ಕಾ ಮಾಸ್ ಸಿನಿಮಾ ಆಗಿತ್ತು. ರವಿ ಶ್ರೀವತ್ಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರೌಡಿಸಂ, ಅಮಾಯಕ ಜನರ ಆರ್ತನಾದ, ತಾಯಿ-ಮಗನ ಬಾಂಧವ್ಯ, ಮೂರು ಬಿಟ್ಟಿರುವ ರಾಜಕಾರಣಿಗಳು, ಪೊಲೀಸರ ಅಸಹಾಯಕತೆ...ಹೀಗೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿ ಇದ್ದರೂ ಇದನ್ನ ನಿರ್ದೇಶಕರು ಅತಿರೇಕವಾಗಿ ಹೇಳಿರುವುದು ಪ್ರೇಕ್ಷಕರ ತಾಳ್ಮೆ ಕೆಡಿಸಿತ್ತು.
More from Filmibeat
English summary
Kannada Movie 'Tiger Galli' is facing theater problem. 'ಟೈಗರ್ ಗಲ್ಲಿ' ಚಿತ್ರವನ್ನು ಕೆಲ ಚಿತ್ರಮಂದಿರಗಳಿಂದ ತೆಗೆದುಹಾಕಲಾಗಿದೆ.


Click it and Unblock the Notifications











