ಟಿ.ಎಸ್ ನಾಗಾಭರಣ ಸಹೋದರ ಹೃದಯಾಘಾತದಿಂದ ನಿಧನ
ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಅವರ ಸಹೋದರ ಟಿ.ಎಸ್ ವಿಜಯ ರಾಘವ (47) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ವಿಜಯ ರಾಘವ ಅವರು ನಿನ್ನೆ (ಏಪ್ರಿಲ್ 8) ವಿಧಿವಶರಾಗಿದ್ದಾರೆ.
ಟಿ ಎಸ್ ನಾಗಾಭರಣ ಅವರ ರೀತಿಯಲ್ಲೇ ವಿಜಯ ರಾಘವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ತಂತ್ರಜ್ಞರಾಗಿ, ನಟನಾಗಿ ಗುರುತಿಸಿಕೊಂಡಿದ್ದವರು. 'ಬೆಟ್ಟದ ಹೂವು', 'ಆದಿ ಶಂಕರ' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರು.

ಮೊನ್ನೆಯಷ್ಟೇ ನಾಗಾಭರಣ ಅವರು ನಿರ್ದೇಶನದ 'ಅಲ್ಲಮ' ಚಿತ್ರಕ್ಕೆ ಎರಡೆರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ತಮ್ಮ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ ಸಂತಸದಲ್ಲಿದ್ದ ನಿರ್ದೇಶಕರಿಗೆ ಸಹೋದರನ ಸಾವು ಆಘಾತ ತಂದಿದೆ.
More from Filmibeat
English summary
TS Vijay Ragava (47) Borther of TS Nagabharana is No More. He is Actor and Technishine in Kannada Industry. He Acted in ''Bettda hoovu'' and ''Adi shankara''


Click it and Unblock the Notifications











