Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೃಶ್ಯಂ' ರೀಮೇಕ್ ಗೆ ರಜನಿ NO ಅಂದಿದ್ಯಾಕೆ?
ಮಾಲಿವುಡ್ ಗಲ್ಲಪೆಟ್ಟಿಗೆಯನ್ನ ಲೂಟಿ ಹೊಡೆದ 'ದೃಶ್ಯಂ' ಸಿನಿಮಾ 'ಪಾಪನಾಸಂ' ಆಗಿ ಈ ವಾರ ತಮಿಳು ಸಿನಿ ಅಂಗಳದಲ್ಲಿ ರಿಲೀಸ್ ಆಗಿದೆ. ಕಮಲ್ ಹಾಸನ್ ಮತ್ತು ಗೌತಮಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಇದೀಗ ಕಾಲಿವುಡ್ಡಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ನಡುವೆ ನಿರ್ದೇಶಕ ಜೀತು ಜೋಸೆಫ್ 'ಪಾಪನಾಸಂ' ಮೇಕಿಂಗ್ ನ ಒಂದು ಇಂಟ್ರೆಸ್ಟಿಂಗ್ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಕಮಲ್ ಹಾಸನ್ ಬದಲು 'ಪಾಪನಾಸಂ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಬೇಕಾಗಿತ್ತು.
'ದೃಶ್ಯಂ' ಚಿತ್ರವನ್ನ ನೋಡಿ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ, ನಟಿಸುವುದಕ್ಕೆ ಒಪ್ಪಿಕೊಳ್ಳಲಿಲ್ಲ.! ಅದಕ್ಕೆ ಕಾರಣ ಎರಡು ದೃಶ್ಯಗಳು.!
ಹೌದು, 'ದೃಶ್ಯಂ' ಸಿನಿಮಾ ರಜನಿಕಾಂತ್ ಗೆ ಇಷ್ಟವಾಗಿದ್ದರೂ, ಸಿನಿಮಾದಲ್ಲಿ ಪೊಲೀಸ್ ರಿಂದ ಒದೆ ತಿನ್ನುವ ದೃಶ್ಯ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ನಿಂದಾಗಿ 'ಪಾಪನಾಸಂ'ನಲ್ಲಿ ನಟಿಸುವುದಕ್ಕೆ ರಜನಿ ಹಿಂದೇಟು ಹಾಕಿದರು. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...]
ರಜನಿಕಾಂತ್ ಮತ್ತೊಬ್ಬರಿಂದ ಹಿಗ್ಗಾಮುಗ್ಗಾ ಒದೆ ತಿನ್ನುವ ದೃಶ್ಯವನ್ನ ಅಭಿಮಾನಿಗಳು ಖಂಡಿತ ಒಪ್ಪಿಕೊಳ್ಳುವುದಿಲ್ಲ ಅಂತ 'ಪಾಪನಾಸಂ' ಚಿತ್ರವನ್ನ ರಜನಿಕಾಂತ್ ಕೈಬಿಟ್ಟರಂತೆ. ರಜನಿ ಬಿಟ್ಟ ಪಾತ್ರವನ್ನ ಇದೀಗ ಕಮಲ್ ಹಾಸನ್ ಸೊಗಸಾಗಿ ನಿರ್ವಹಿಸಿದ್ದಾರೆ.