twitter
    For Quick Alerts
    ALLOW NOTIFICATIONS  
    For Daily Alerts

    'ಪ್ರಜಾಕೀಯ'ದ ಮೂಲ ಉದ್ದೇಶ ಬಿಚ್ಚಿಟ್ಟ ಉಪೇಂದ್ರ

    By Bharath Kumar
    |

    Recommended Video

    ಉಪ್ಪಿ ಪ್ರಜಾಕೀಯದ ಉದ್ದೇಶ ಏನು ..?? | Filmibeat Kannada

    ರಿಯಲ್ ಸ್ಟಾರ್ ಉಪೇಂದ್ರ 'ಕೆಪಿಜೆಪಿ' ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿ, ನಂತರ ಪಕ್ಷದಲ್ಲಿ ಉಂಟಾದ ಆಂತರಿಕ ಬೆಳವಣಿಗೆಗಳಿಂದ ಬೇಸತ್ತು ಹೊರಗೆ ಬಂದಿದ್ದರು. 'ಕೆಪಿಜೆಪಿ' ತೊರೆದ ಮೇಲೆ 'ಉತ್ತಮ ಪ್ರಜಾ ಪಾರ್ಟಿ' ಎಂಬ ಹೆಸರಿನಲ್ಲಿ ಪಕ್ಷ ಸಂಘಟನೆ ಮುಂದುವರಿಸಿರುವ ಉಪ್ಪಿ ತಮ್ಮ ಪಕ್ಷದ ಮೂಲ ಉದ್ದೇಶವೇನು ಎಂಬುದನ್ನ ಹಂಚಿಕೊಂಡಿದ್ದಾರೆ.

    ಪ್ರಜೆಗಳಿಗೆ ಸಿಗಬೇಕಾದ ಸವಲತ್ತುಗಳು, ಯೋಜನೆಗಳು ನೇರವಾಗಿ ಅವರಿಗೆ ತಲುಪಿತ್ತಿಲ್ಲ ಎಂಬುದು ಗೊತ್ತಿರುವ ವಿಚಾರ. ಇದನ್ನ ನೇರವಾಗಿ ಜನರಿಗೆ ಸಿಗುವಂತೆ ಮಾಡುವುದು ಪ್ರಜಾಕೀಯದ ಉದ್ದೇಶವೆಂದು ತಿಳಿಸಿದ್ದಾರೆ.

    ''ಉತ್ತಮ ಪ್ರಜಾಕೀಯದ ಪಕ್ಷದ ಮೂಲ ಉದ್ದೇಶ. ಪ್ರಜೆಗಳ ತೆರಿಗೆ ಹಣವನ್ನು (ಬಜೆಟ್) ಭ್ರಷ್ಟ ವ್ಯವಸ್ಥೆಯ ಸರಪಣಿಯಿಂದ ಹೊರಗೆ ತಂದು ನೇರವಾಗಿ ಪ್ರಜೆಗಳಿಗೆ ಸಂಪೂರ್ಣ ಪಾರದರ್ಶಕತೆಯಿಂದ ತಲುಪಿಸುವ ವ್ಯವಸ್ಥೆ'' ಎಂದು ಟ್ವೀಟ್ ಮಾಡಿದ್ದಾರೆ.

    Upendra revels about basic purpose of prajakiya

    ರಿಯಲ್ ಸ್ಟಾರ್ ಉಪೇಂದ್ರಗೆ ಸುದೀಪ್ ಹಾಕಿದರು ಚಾಲೆಂಜ್ ರಿಯಲ್ ಸ್ಟಾರ್ ಉಪೇಂದ್ರಗೆ ಸುದೀಪ್ ಹಾಕಿದರು ಚಾಲೆಂಜ್

    ಸದ್ಯ, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಉಪ್ಪಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೋರಾಟ, ಕನಸು, ಭವಿಷ್ಯದ ದೇಶವನ್ನ ಕಟ್ಟಿಕೊಡುತ್ತಿದ್ದಾರೆ. ಪ್ರಜಾಕೀಯದ ಕೆಲಸ ಹೇಗಿರುತ್ತೆ, ಅದರ ತತ್ವಗಳೇನು.? ಆದರ್ಶವೇನು.? ಉದ್ದೇಶಗಳೇನು ಎಂಬುದನ್ನ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಇನ್ನುಳಿದಂತೆ ಆರ್.ಚಂದ್ರು ನಿರ್ದೇಶನ ಮಾಡುತ್ತಿರುವ 'ಐ ಲವ್ ಯು' ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಇದರ ಜೊತೆಗೆ 'ಡಾ ಮೋದಿ' ಸೇರಿದಂತೆ ಎರಡ್ಮೂರು ಚಿತ್ರಗಳಿಗೂ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಐ ಲವ್ ಯು' ಚಿತ್ರ ಮುಗಿದ ಬಳಿಕ 'ಅಧೀರ' ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. 'ಅಧೀರ' ಎಂಬ ಚಿತ್ರಕ್ಕೆ ಯುವ ನಿರ್ದೇಶಕ ಸಂತು ಆಕ್ಷನ್ ಕಟ್ ಹೇಳಲಿದ್ದಾರೆ.

    English summary
    Kannada actor, Uttama praja party leader real star upendra has revels about basic purpose of prajakeeya.
    Monday, June 18, 2018, 14:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X