Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೆಬ್ ಸೀರೀಸ್ ಆಗಿ ತೆರೆಗೆ ಬರುತ್ತಿದೆ 'ನಮ್ಮ ಊರಿನ ರಸಿಕರು'
''ಅವ್ರು
ಹೋಗ್ದೆ
ಇದ್ರೆ
ಕಷ್ಟ
ಆಗ
ದೇಶಕೆಲ್ಲ
ನಷ್ಟ
ನಮ್ಗೆಲ್ಲಾ
ಜಾತಿ
ಭ್ರಷ್ಟ
ನಾವ್
ಹೇಳೋ
ಮಾತೆಲ್ಲ
ಸ್ಪಷ್ಟ''
80-90 ರ ದಶಕದಲ್ಲಿ ಜನಿಸಿ ಕನ್ನಡ ಮಾಧ್ಯಮದಲ್ಲಿ ಕಲಿತರವರಿಗೆ ಮೇಲಿನ ಕಿರು ಪದ್ಯ ಚೆನ್ನಾಗಿ ನೆನಪಿರುತ್ತದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ 'ನಮ್ಮ ಊರಿನ ರಸಿಕರು' ನಲ್ಲಿನ ಪಾತ್ರ ನಾಣಿ ಹೇಳುವ ಸಾಲುಗಳವು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ನಮ್ಮ ಊರಿನ ರಸಿಕರು' ಕೃತಿಯಲ್ಲಿನ ನಾಣಿಯ ಕತೆ ಪಠ್ಯವಾಗಿತ್ತು. ನಾಣಿ ಹೆಸರಿನ ಆ ಪಾಠವನ್ನು ಮರೆತವರು ಕಡಿಮೆ. ನಾಣಿಯನ್ನು ಮೆಚ್ಚಿಕೊಂಡು ಹಲವರು 'ನಮ್ಮ ಊರಿನ ರಸಿಕರು' ಕೃತಿಯನ್ನು ಕೊಂಡು ಪೂರ್ಣ ಓದಿದ್ದು ಸಹ ಉಂಟು.
ಇದೀಗ 'ನಮ್ಮ ಊರಿನ ರಸಿಕರು' ಕೃತಿ ತೆರೆಗೆ ಬರುತ್ತಿದೆ. ಸಿನಿಮಾ ಆಗಿ ಅಲ್ಲ ಬದಲಿಗೆ ವೆಬ್ ಸರಣಿ ಆಗಿ. ಈ ವೆಬ್ ಸರಣಿ ನಿರ್ದೇಶಿಸುತ್ತಿರುವುದು ನಂದಿತಾ ಯಾದವ್. ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ನಟಿಸಿ, ಡಾಕ್ಯುಮೆಂಟರಿ, ಕಿರುಚಿತ್ರ, ವೆಬ್ ಸರಣಿ, ಸಿನಿಮಾ ನಿರ್ದೇಶಿಸಿ ಅನುಭವ ಹೊಂದಿರುವ ನಂದಿತಾ, ನಮ್ಮ ಊರಿನ ರಸಿಕರು ಕೃತಿಯನ್ನು ತೆರೆಗೆ ತರುತ್ತಿದ್ದಾರೆ.
ವೆಬ್ ಸರಣಿಯ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಸಾಗುತ್ತಿದೆ. ಈ ವೆಬ್ ಸರಣಿಯು 16 ಎಪಿಸೋಡ್ಗಳಲ್ಲಿ ಪ್ರದರ್ಶನಗೊಳ್ಳಲಿದೆ. ವೆಬ್ ಸರಣಿ ಸಿನಿಮಾಟೊಗ್ರಫಿಯನ್ನು ಅಶೋಕ್ ಕಶ್ಯಪ್ ಮಾಡುತ್ತಿದ್ದಾರೆ.
Recommended Video
ಮಂಡ್ಯ ರಮೇಶ್, ರಾಜೇಶ್ ನಟರಂಗ, ಪಿ.ಶೇಷಾದ್ರಿ, ಶೃಂಗ, ರಮೇಶ್ ಪಂಡಿತ್, ಸುನೇತ್ರ, ಸುಂದರ್ ರಾಜ್, ಮಂಗಳ, ಅಂಜನಾ ಭಾರಧ್ವಜ್, ರವಿಕುಮಾರ್ ಸೇರಿದಂತೆ ಹಲವು ಪ್ರತಿಭಾವಂತ ಹಿರಿಯ ನಟರು ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ.