Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓಟು ಕೇಳಲು ಮನೆ ಮನೆಗೆ ಬರ್ತಾರೆ 'ಯೋಗರಾಜ್ ಭಟ್ರು'
Recommended Video
ಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ರಾಜಕೀಯ ಗಣ್ಯರು ತಮ್ಮ ಪಕ್ಷಗಳ ಪ್ರಚಾರ ಕಾರ್ಯಕ್ಕೆ ಹೊಸ ತಂತ್ರಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕೂ ಸಿನಿಮಾರಂಗಕ್ಕೂ ಬಿಡದ ನಂಟು, ಈ ಬಾರಿ ನಿಮ್ಮ ಮನೆಯಂಗಳಕ್ಕೆ ಓಟನ್ನ ಕೇಳಲು ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಯೋಗರಾಜ್ ಭಟ್ ಬರಲಿದ್ದಾರೆ.
ಹಾಗಾದರೆ ಯೋಗರಾಜ್ ಭಟ್ ಚುನಾವಣೆಯಲ್ಲಿ ಭಾಗಿ ಆಗುತ್ತಾರಾ? ಅನ್ನುವ ಪ್ರಶ್ನೆ ಈಗಾಗಲೇ ನಿಮಲ್ಲಿ ಮೂಡಿರುತ್ತೆ. ಭಟ್ರು ಮತಗಳನ್ನ ಕೇಳಲು ಬರ್ತಿದ್ದಾರೆ ಆದರೆ ಯಾವುದೇ ಪಕ್ಷದ ಪರವಾಗಿಯೂ ಅಲ್ಲ. ನಿಮ್ಮ ಮತ ಅಮೂಲ್ಯವಾದದ್ದು ಅದನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಲಿದ್ದಾರೆ.
ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಸಾ.ರಾ.ಗೋವಿಂದು.?
ಎಲೆಕ್ಷನ್ ಕಮೀಶನ್ ಪಂಚತಂತ್ರ ಚಿತ್ರತಂಡ ಹಾಗೂ ಯೋಗರಾಜ್ ಭಟ್ಟರನ್ನ ಈ ವರ್ಷದ ಅಸೆಂಬ್ಲಿ ಎಲೆಕ್ಷನ್ ಗೆ ಅದ್ಭುತವಾದ ಗೀತ ರಚನೆ ಮಾಡಲು ಹಾಗು ಹಾಡನ್ನು ಚಿತ್ರೀಕರಿಸಲು ಆಯ್ಕೆ ಮಾಡಿದೆ. ಅದಕ್ಕಾಗಿ ಈಗಾಗಲೇ ಭಟ್ಟರು ತಯಾರಿ ಮಾಡಿಕೊಂಡಿದ್ದು ಗೀತರಚನೆಯ ಕೆಲಸ ಶುರುವಾಗಿದೆಯಂತೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಚಿತ್ರೀಕರಣ ಮಾಡಲು ಚಿಂತನೆ ನಡೆಸಿದ್ದು ಶೂಟಿಂಗ್ ಗೂ ಚಾಲನೆ ಕೊಟ್ಟಿದ್ದಾರೆ. ಈ ಹಾಡಿಗೆ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.
ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮ ಎಂದು ತಿಳಿದಿರುವ ಎಲೆಕ್ಷನ್ ಕಮೀಶನ್ ಈ ವಿಶೇಷ ಪ್ರಯೋಗಕ್ಕೆ ಮುಂದಾಗಿದೆ. ಒಂದು ಹಾಡಿನ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಯೋಚನೆ ವಿಭಿನ್ನವಾಗಿದ್ದು ಈ ಬಾರಿ ಚುನಾವಣೆಯಲ್ಲಿ ಭಟ್ಟರ ಹಾಡು ಸೌಂಡು ಮಾಡಲಿದೆ.
ಚುನಾವಣೆಗೆ ಮುಂಚೆ ಯುವಕರಿಗೆ ಸಂದೇಶ ನೀಡಿದ ಕಿಚ್ಚ ಸುದೀಪ್