twitter
    For Quick Alerts
    ALLOW NOTIFICATIONS  
    For Daily Alerts

    ಟೋಪಿವಾಲ ವಿಮರ್ಶೆ; ಉಪೇಂದ್ರ ಮ್ಯಾಜಿಕ್ ಮಿಸ್

    By Rajendra
    |

    Rating:
    3.0/5
    ಹೆಸರಿಗೆ ತಕ್ಕಂತೆ ಇದು ಟೋಪಿ ಕಥೆ. ಆದರಿದು ಅಂತಿಂಥಾ ಟೋಪಿ ಅಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಗಾಂಧಿಟೋಪಿ ಹಾಕಿಕೊಂಡ ರಾಜಕಾರಣಿಗಳು ಪ್ರಜೆಗಳಿಗೆ ಹಾಕುತ್ತಿರುವ ಮಕ್ಮಲ್ ಟೋಪಿ ಕಥೆ ಇದು. ಇಲ್ಲಿ ಕೊಳ್ಳೆ ಹೊಡೆದ ದುಡ್ಡು ಸ್ವಿಸ್ ಬ್ಯಾಂಕ್ ಸೇರಿದ ಕಥೆ.

    ಆದರೆ ಆ ದುಡ್ಡು ತರಬೇಕಾದರೆ ಸೀಕ್ರೆಟ್ ಕೋಡ್ ಬೇಕಲ್ಲಾ. ಆ ಕೋಡಿನ ಹುಡುಕಾಟದಲ್ಲಿ ಉಪೇಂದ್ರ ಭ್ರಷ್ಟಾಚಾರದ ಹಲವು ಮುಖಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತಾರೆ. ಕೋಡು, ಸಬ್ ಕೋಡು, ಕೀ ಕೋಡ್ ಹುಡುಕುತ್ತಾ ಪ್ರೇಕ್ಷಕರಿಗೆ ಇನ್ನೇನೋ ಹೇಳುತ್ತಾರೋ ಎಂದು ಆಸೆ ಹುಟ್ಟಿಸುತ್ತಾ ಸಾಗುತ್ತಾರೆ.

    ಆದರೆ ಕಡೆಯವರೆಗೂ ಕಾದ ಪ್ರೇಕ್ಷಕನಿಗೆ ನಿರಾಸೆ ತಪ್ಪಿದ್ದಲ್ಲ. ಏಕೆಂದರೆ ಕಥೆ ಏನೋ ಚೆನ್ನಾಗಿದೆ. ಆದರೆ ಅದರ ನಿರೂಪಣೆಯಲ್ಲಿ ಎಡವಿದ್ದಾರೆ. ಸರಳವಾಗಿ ಹೇಳಬೇಕಾದದ್ದನ್ನು ಉಪೇಂದ್ರ ಡಿಫರೆಂಟ್ ಆಗಿ ಹೇಳಲು ಹೋಗಿ ಪ್ರೇಕ್ಷಕರ ಸಹನೆಗೆ ಸವಾಲೊಡ್ಡಿದ್ದಾರೆ.

    ಚಿತ್ರ: ಟೋಪಿವಾಲ
    ನಿರ್ಮಾಪಕ: ಕೆ.ಪಿ.ಶ್ರೀಕಾಂತ್
    ಸಂಭಾಷಣೆ, ನಿರ್ದೇಶನ: ಶ್ರೀನಿ
    ಸಂಗೀತ: ವಿ ಹರಿಕೃಷ್ಣ
    ಛಾಯಾಗ್ರಹಣ: ಶ್ರೀಶ ಕೂದುವಳ್ಳಿ
    ಕಥೆ, ಚಿತ್ರಕಥೆ: ಉಪೇಂದ್ರ
    ಪಾತ್ರವರ್ಗ: ರಂಗಾಯಣ ರಘು, ಭಾವನಾ, ಮೈತ್ರಿಯಾ, ಬಿರಾದಾರ್, ರವಿಶಂಕರ್, ಅಚ್ಯುತ ಕುಮಾರ್, ರಾಜು ತಾಳಿಕೋಟೆ ಮುಂತಾದವರು.

    ಕಥೆ, ಚಿತ್ರಕಥೆ ಓಕೆ, ನಿರ್ದೇಶನ?

    ಕಥೆ, ಚಿತ್ರಕಥೆ ಓಕೆ, ನಿರ್ದೇಶನ?

    ಕಥೆ, ಚಿತ್ರಕಥೆ ಉಪೇಂದ್ರ ಅವರದೇ ಆದರೂ ಅದನ್ನು ತೆರೆಗೆ ತರುವಲ್ಲಿ ನಿರ್ದೇಶಕ ಶ್ರೀನಿ ವಿಫಲವಾಗಿದ್ದಾರೆ. ಆದರೆ ನಿರ್ದೇಶಕರು ಉಪೇಂದ್ರ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ ಅಂಶ. ಇಲ್ಲದಿದ್ದರೆ ಇದು ಮತ್ತೊಂದು ಉಪ್ಪಿ ಚಿತ್ರವಾಗುತ್ತಿತ್ತು. ಅಷ್ಟರ ಮಟ್ಟಿಗೆ ಚಿತ್ರ ಓಕೆ.

    ಸಂಭಾಷಣೆಯಲ್ಲೂ ಕಿಕ್ ಮಿಸ್

    ಸಂಭಾಷಣೆಯಲ್ಲೂ ಕಿಕ್ ಮಿಸ್

    ಸಂಭಾಷಣೆಯಲ್ಲೂ ಏನು ಅಂತಹ ಕಿಕ್ ಇಲ್ಲ. ಚಿತ್ರದ ಮೊದಲರ್ಧ ಹಳಿತಪ್ಪಿದೆ. ದ್ವಿತೀಯಾರ್ಧದಲ್ಲಿ ಅದನ್ನು ಹಳಿಗೆ ತರುವ ಪ್ರಯತ್ನ ಮಾಡಲಾಗಿದೆ. ಕಥೆ ಕಡೆಗೆ ಟ್ರ್ಯಾಕ್ ಗೆ ಬರುತ್ತದಾದರೂ ಅಷ್ಟೊತ್ತಿಗೆ ಪ್ರೇಕ್ಷಕರ ತಾಳ್ಮೆ ತಳಕಚ್ಚಿರುತ್ತದೆ.

    ಹೊಸತನವಿಲ್ಲದ ಸಂಗೀತ, ಛಾಯಾಗ್ರಹಣ

    ಹೊಸತನವಿಲ್ಲದ ಸಂಗೀತ, ಛಾಯಾಗ್ರಹಣ

    ತಾಂತ್ರಿಕವಾಗಿ ಚಿತ್ರ ಸುಮಾರಾಗಿದೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹೊಸತನವಿಲ್ಲ. ಯೋಗರಾಜ್ ಭಟ್, ಉಪೇಂದ್ರ, ಎಂ.ಎಸ್. ಶ್ರೀನಿವಾಸ್ ಅವರ ಸಾಹಿತ್ಯ ಪರ್ವಾಗಿಲ್ಲ.

    ಉಪೇಂದ್ರ ಅಭಿನಯ ಬಸಕ್!

    ಉಪೇಂದ್ರ ಅಭಿನಯ ಬಸಕ್!

    ಉಪೇಂದ್ರ ಎಂದಿನಂತೆ 'ಬಸಕ್' (ಚಿತ್ರದಲ್ಲಿ ಅವರ ಹೆಸರು) ಅಭಿನಯ ನೀಡಿದ್ದಾರೆ. ಭಾವನಾ, ಮೈತ್ರಿಯಾ ಪೈಪೋಟಿಗೆ ಬಿದ್ದಂತೆ ಅಭಿನಯದಲ್ಲಿ ಹಿಂದಿಂದೆ ಸರಿದಿದ್ದಾರೆ. ಇದ್ದುದರಲ್ಲಿ ರಾಮಾಯಣ ರಘುವಾಗಿ ರಂಗಾಯಣ ರಘು ಗಮನಸೆಳೆಯುತ್ತಾರೆ.

    ಒಟ್ಟಾರೆಯಾಗಿ ಉಪೇಂದ್ರ ಮ್ಯಾಜಿಕ್ ಮಿಸ್

    ಒಟ್ಟಾರೆಯಾಗಿ ಉಪೇಂದ್ರ ಮ್ಯಾಜಿಕ್ ಮಿಸ್

    ಉಳಿದಂತೆ ರವಿಶಂಕರ್ (ಸರ್ಕಾರ್ ಪಾತ್ರ), ಬಿರಾದಾರ್, ಅಚ್ಯುತ ಕುಮಾರ್ (ಲೋಕಾಯುಕ್ತ ಲೋಕಿ), ರಾಜು ತಾಳಿಕೋಟೆ ಪಾತ್ರಗಳು ಸಾಂದರ್ಭಿಕವಾಗಿ ಮೂಡಿಬಂದಿವೆ. ಒಟ್ಟಾರೆಯಾಗಿ ಹೇಳಬೇಕು ಉಪೇಂದ್ರ ಮ್ಯಾಜಿಕ್ ಮಿಸ್ ಆಗಿದೆ.

    ಕಡೆಯತನಕ ಕಾದು ಕಾದು ಸುಸ್ತಾದ ಪ್ರೇಕ್ಷಕ

    ಕಡೆಯತನಕ ಕಾದು ಕಾದು ಸುಸ್ತಾದ ಪ್ರೇಕ್ಷಕ

    ಕಥೆ ಆಗ ಬದಲಾಗುತ್ತದೆ, ಈಗ ಟರ್ನ್ ತಗೊಳ್ಳುತ್ತದೆ, ಫಸ್ಟ್ ಆಫ್ ಹೀಗಾಯ್ತು, ಬಹುಶಃ ಸೆಕೆಂಡ್ ಆಫ್ ಕಥೆ ಬೇರೆನೇ ಇರುತ್ತದೆ ಎಂದು ಪ್ರೇಕ್ಷಕರ ನಿರೀಕ್ಷಿಸುತ್ತಾನೆ. ಆದರೆ ಕಡೆಗೂ ಅವನ ನಿರೀಕ್ಷೆ ನಿಜವಾಗಲ್ಲ. ಚಿತ್ರದಲ್ಲಿನ ಕಟ್ಟ ಕಡೆಯ ಸಂದೇಶ ಏನೆಂದರೆ "ತಲೆ ಇಲ್ಲದವರಿಗಲ್ಲ ಪ್ರಜಾಪ್ರಭುತ್ವ" ಎಂಬುದು.

    English summary
    Kannada film Topiwala review. Real Star Upendra, Bhavana and Maithreya lead film disappoints the audience. The film is written by Upendra and directed by debutant MG Srinivas.
    Friday, April 26, 2013, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X