Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Soojidaara Review : ಹರಿದ ಬದುಕಿಗೆ ಹೊಲಿಗೆ ಹಾಕುವ 'ಸೂಜಿದಾರ'
ಜೀವನ ಎಂಬ ನಾಟಕದಲ್ಲಿ ನಾವು ಕೆಲವೊಮ್ಮೆ ನಮ್ಮ ಪಾತ್ರದ ಬದಲಿಗೆ ಬೇರೆ ಪಾತ್ರವನ್ನೇ ಮಾಡುವ ಪರಿಸ್ಥಿತಿ ಬರುತ್ತದೆ. 'ಸೂಜಿದಾರ' ಸಿನಿಮಾ ಕೂಡ ಅಂತಹ ಪರಿಸ್ಥಿತಿಯಲ್ಲಿ ಇರುವ ಎರಡು ಪಾತ್ರಗಳ ಕಥೆಯಾಗಿದೆ. ಸೂಜಿದಾರವನ್ನು ಬಟ್ಟೆ ಹೊಲಿಯಲು ಮಾತ್ರವಲ್ಲದೆ, ಮೈ ಮನವನ್ನು ಹೋಲಿಯಲು ಬಳಸಿದ್ದಾರೆ. ಎರಡು ಪಾತ್ರಗಳ ಈ ಭಾವನಾತ್ಮಕ ಕಥೆ ಇಷ್ಟ ಆಗುತ್ತದೆ.
ಓಡುವ ಶಂಕರ, ನಿಂತಿರೋ ಪದ್ಮ
ಸಿನಿಮಾದ ಮೊದಲ ದೃಶ್ಯದಿಂದ ನಾಯಕ ಶಂಕರ (ಯಶವಂತ್ ಶೆಟ್ಟಿ) ಓಡುತ್ತಿರುತ್ತಾನೆ. ಪ್ರತಿ ಹಂತದಲ್ಲಿಯೂ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾನೆ. ಇತ್ತ ಪದ್ಮ ಒಂದೇ ಮನೆಯಲ್ಲಿ ಸೆರೆಯಾಗಿ ಇರುತ್ತಾಳೆ. ಇಬ್ಬರ ಈ ಪರಿಸ್ಥಿತಿಗೆ ಒಂದೇ ಘಟನೆ ಕಾರಣ ಆಗಿರುತ್ತದೆ. ಆ ಘಟನೆ ಏನು? ಇಬ್ಬರು ಹಿನ್ನಲೆ ಏನು? ಎನ್ನುವುದೇ ಈ ಸಿನಿಮಾ.
ಸಂದರ್ಶನ : 'ಯಾವತ್ತೂ ಹೀರೋ ಆಗಬಾರದು' ಎಂದಿದ್ದ ಯಶ್ ಶೆಟ್ಟಿ ನಿಯಮ ಮುರಿದರು
ಎರಡು ಪಾತ್ರಗಳು - ಒಂದು ಸೂಜಿ, ಮತ್ತೊಂದು ದಾರ
ಸಿನಿಮಾದಲ್ಲಿ ಎರಡು ಮುಖ್ಯ ಪಾತ್ರಗಳು ಬರುತ್ತದೆ. ಅದೇ ಶಂಕರ (ಯಶವಂತ್ ಶೆಟ್ಟಿ) ಮತ್ತು ಪದ್ಮಾ (ಹರಿಪ್ರಿಯಾ). ಈ ಎರಡು ಪಾತ್ರಗಳು ಸೂಜಿದಾರ ಇದ್ದ ಹಾಗೆ. ಒಬ್ಬರ ಹರಿದ ಜೀವನವನ್ನು ಮತ್ತೊಬ್ಬರು ಹೊಲಿಯುತ್ತಾರೆ. ಈ ಎರಡು ಪಾತ್ರಗಳ ಪ್ಲಾಶ್ ಬ್ಯಾಕ್ ಕಥೆಯ ಮೇಲೆ ಇಡೀ ಸಿನಿಮಾ ನಿಂತಿದ್ದೆ.
ಇಬ್ಬರ ಹಿನ್ನಲೆ ಕಥೆಗೆ ಆಧಾರ
ತಲೆ ಮರೆಸಿಕೊಂಡು ಓಡಾಡುತ್ತಿರುವ ಶಂಕರ ಕೊನೆಗೆ ಚಿತ್ರದುರ್ಗಕ್ಕೆ ಬರುತ್ತಾನೆ. ಅಲ್ಲಿಯೇ ಒಂದು ಕೆಲಸಕ್ಕೆ ಸೇರಿಕೊಂಡು, ಒಂದು ಮನೆ ಬಾಡಿಗೆ ತೆಗೆದುಕೊಳ್ಳುತ್ತಾನೆ. ಅದೇ ಮನೆಯ ಪಕ್ಕದಲ್ಲಿ ಪದ್ಮ ವಾಸ ಮಾಡುತ್ತಾ ಇರುತ್ತಾಳೆ. ಹೀಗೆ ಶುರುವಾಗುವ ಸಿನಿಮಾ ನಂತರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ನಟ, ನಟಿಯ ಮೌನವೇ ಮಾತು
ನಟಿ ಹರಿಪ್ರಿಯಾ ಹಾಗೂ ಯಶವಂತ್ ಶೆಟ್ಟಿ ಪಾತ್ರಗಳಿಗೆ ಜಾಸ್ತಿ ಡೈಲಾಗ್ ಇಲ್ಲ. ಅವರು ಮೌನದಲ್ಲಿಯೇ ಮಾತನಾಡುತ್ತಾರೆ. ನೂರಾರೂ ನೋವುಗಳ ಜೊತೆಗೆ ಅವರು ನಟಿಸಿದ್ದಾರೆ. ಸ್ಟಾರ್ ನಟಿಯಾಗಿ ಅವರ ಪಾತ್ರದ ಆಯ್ಕೆ ಮತ್ತು ಅದನ್ನು ನಿಭಾಯಿಸುವರು ರೀತಿಗೆ ಚಪ್ಪಾಳೆ ಹೊಡೆಯಬೇಕು. ಯಶವಂತ್ ಶೆಟ್ಟಿ ಕೂಡ ತಮ್ಮ ಹಿಂದಿನ ಸಿನಿಮಾಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಷ್ಟ ಆಗುತ್ತದೆ. ಅವರಿಗೂ ಇಲ್ಲಿ ಡೈಲಾಗ್ ಕಡಿಮೆ.
ಇಷ್ಟ ಆಗುವ ಪಾತ್ರಗಳು
ಸಿನಿಮಾದ ಕೆಲವು ಪಾತ್ರಗಳು ಬಹಳ ಮಜಾ ನೀಡುತ್ತವೆ. ಹೂ ಮಾರುವ ಹುಡುಗಿಯ ಪಾತ್ರದಲ್ಲಿ ಚೈತ್ರ ಕೊಟ್ಟುರು ಸೊಗಸಾಗಿ ನಟಿಸಿದ್ದಾರೆ. ಅವರ ಪಾತ್ರದಲ್ಲಿ ಲವಲವಿಕೆ ಇದೆ. ಅವರನ್ನು ಸಿನಿಮಾದ ಎರಡನೇ ನಾಯಕಿ ಎಂದು ಹೇಳಬಹುದು. ಸುಚ್ಚೇಂದ್ರ ಪ್ರಸಾದ್ ಎಂದಿನಂತೆ ಅಬ್ಬರಿಸಿದ್ದಾರೆ. ಉಳಿದಂತೆ, ಚೋಟು ಪಾತ್ರ ಸೇರಿದಂತೆ ಸಣ್ಣ ಸಣ್ಣ ಪಾತ್ರಗಳು ಇಷ್ಟ ಆಗುತ್ತವೆ.
ಸಂಗೀತ, ಕ್ಯಾಮರಾ, ನಿರ್ದೇಶನ
ಸಿನಿಮಾದ ಸಂಗೀತ ಚೆನ್ನಾಗಿದೆ. ಕಥೆಗೆ ತಕ್ಕ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಮೆಚ್ಚುಗೆ ಪಡೆಯುತ್ತದೆ. ಕ್ಯಾಮರಾ ವರ್ಕ್ ಸಹ ಅಡ್ಡಿ ಇಲ್ಲ. ನಿರ್ದೇಶಕ ಮೌನೇಶ್ ಬಡಿಗೇರ್ ಅನುಭವ ಸಿನಿಮಾಗೆ ಸಹಾಯ ಆಗಿದೆ. ಒಂದು ಘಟನೆಯನ್ನು ಇಟ್ಟುಕೊಂಡು ಒಂದೊಳ್ಳೆ ಕಥೆ ಮಾಡಿ, ಅದನ್ನು ಸಿನಿಮಾ ರೂಪಕ್ಕೆ ತಂದಿದ್ದರೆ.
ಈ ಅಂಶಗಳನ್ನು ತಡೆದುಕೊಳ್ಳಬೇಕು
ಸಿನಿಮಾದಲ್ಲಿ ಪದೇ ಪದೇ ಕೆಲವು ದೃಶ್ಯಗಳು ರಿಪೀಟ್ ಆಗುತ್ತವೆ. ಪ್ರೇಕ್ಷಕರು ಗೊಂದಲ ಆಗಲಿ ಎನ್ನುವ ಕಾರಣಕ್ಕೆನೇ ಕೆಲವು ದೃಶ್ಯಗಳನ್ನು ಹಿಂದು ಮುಂದಾಗಿ ಹೇಳಿದ್ದರೆ ಎನ್ನಿಸಿಬಿಡುತ್ತದೆ. ಈ ಅಂಶವನ್ನು ಬಿಟ್ಟು ನೋಡಿದರೆ, ಸಿನಿಮಾದ ಚೆನ್ನಾಗಿದೆ.
ಚಿತ್ರದ ವಿಷಯ ಚೆನ್ನಾಗಿದೆ
ಸಿನಿಮಾಗೆ ಆಯ್ಕೆ ಮಾಡಿರುವ ವಿಷಯ ಚೆನ್ನಾಗಿದೆ. ಅದನ್ನು ಮನರಂಜನೆಯ ಜೊತೆಗೆ ಚೆನ್ನಾಗಿ ಹೇಳಿದ್ದಾರೆ. ಕೆಲವು ಸಣ್ಣ ಪುಟ್ಟ ಕೊರತೆಗಳ ನಡುವೆಯೂ, ಇದೊಂದು ಒಳ್ಳೆಯ ಸಿನಿಮಾವಾಗಿ ನಿಲುತ್ತದೆ. ವಿಭಿನ್ನ ರೀತಿಯ ಚಿತ್ರಗಳನ್ನು ಹಾಗೂ ಕ್ಲಾಸ್ ಸಿನಿಮಾ ಇಷ್ಟ ಪಡುವವರು ಆರಾಮಾಗಿ ಚಿತ್ರವನ್ನು ನೋಡಬಹುದಾಗಿದೆ.