Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, ಹೋರಾಟಗಾರ ಆರ್.ನಾರಾಯಣಮೂರ್ತಿ ಬಂಧನ
ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ, ಸಂಗೀತ ನಿರ್ದೇಶಕ ಹಲವು ವಿಭಾಗಗಳಲ್ಲಿ ತಮ್ಮದೇ ಆದ ಗುರುತು ಹಾಗೂ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಹೊಂದಿರುವ ಆರ್.ನಾರಾಯಣಮೂರ್ತಿ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ಸೆಲೆಬ್ರಿಟಿ ಆಗಿರುವ ಜೊತೆಗೆ ಅಪ್ಪಟ ಹೋರಾಟಗಾರರೂ ಆಗಿರುವ ಆರ್.ನಾರಾಯಣಮೂರ್ತಿ ಹೊಸ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಬಳಿ ರೈತರು ನಡೆಸುತ್ತಿರುವ ಅವಿರತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜಭವನ ಛಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರೊಂದಿಗೆ ಸೇರಿ ಹೈದರಾಬಾದ್ನಲ್ಲಿನ ರಾಜಭವನಕ್ಕೆ ನುಗ್ಗಲು ಯತ್ನಿಸಿದರು. ಆ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಬಂಧನದ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಆರ್.ನಾರಾಯಣಮೂರ್ತಿ, ''2006ರಲ್ಲಿ ಬಿಹಾರದಲ್ಲಿ ಹೊಸ ಕೃಷಿ ಕಾಯ್ದೆ ತಂದ ನಂತರ ಅಲ್ಲಿ ರೈತರೇ ಇಲ್ಲದಂತೆ ಆಗಿಬಿಟ್ಟಿತು. ಈಗಲೂ ಸಹ ಈ ಹೊಸ ಕೃಷಿ ಕಾಯ್ದೆಗಳು ರೈತರನ್ನು ಕಾರ್ಮಿಕರನ್ನಾಗಿ ಮಾಡಲಿದೆ'' ಎಂದಿದ್ದಾರೆ.
ಹೋರಾಟದ ಮೂಲಕ ಹೆಚ್ಚು ಗುರುತು ಪಡೆದಿರುವ ಆರ್.ನಾರಾಯಣಮೂರ್ತಿ ಅವರನ್ನು 'ಎರ್ರಣ್ಣ' (ಕೆಂಪಣ್ಣ) ಎಂದೇ ಜನರು ಪ್ರೀತಿಯಿಂದ ಕರೆಯುತ್ತಾರೆ. ಅವರ ಸಿನಿಮಾಗಳು ಸಹ ಸದಾ ದಲಿತರು, ದಮನಿತರ ಪರವಾಗಿಯೇ ಇರುತ್ತವೆ. ಕಮ್ಯೂನಿಸ್ಟ್ ಪ್ರೀತಿಯುಳ್ಳ ಆರ್.ನಾರಾಯಣಮೂರ್ತಿ ಹಣಕ್ಕಾಗಿ ಅಲ್ಲದೆ ಜಾಗೃತಿಗಾಗಿ ಸಿನಿಮಾ ಮಾಡಲು ಅತ್ಯಂತ ವಿರಳ ಸಿನಿ ಕರ್ಮಿಗಳಲ್ಲಿ ಒಬ್ಬರು.
Recommended Video
30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆರ್.ನಾರಾಯಣಮೂರ್ತಿ ಅವರ 'ದಂಡೋರ', 'ಎರ್ರ ಸೈನ್ಯಂ', 'ಚೀಕಟಿ ಸೂರ್ಯುಲು', 'ಅಡವಿ ಬಿಡ್ಡಲು', 'ವೀರ ತೆಲಂಗಾಣ', 'ಪೋರು ತೆಲಂಗಾಣ', 'ಸಿಂಗಣ್ಣ', 'ಎರ್ರೋಡು', 'ತೆಲುಗೋಡು', 'ಭೀಮುಡು' ಇನ್ನೂ ಹಲವಾರು ಸಿನಿಮಾಗಳು ಮುಖ್ಯವಾದುವು.