Don't Miss!
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಯಾರಿಗುಂಟು ಯಾರಿಗಿಲ್ಲ
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ "ಯಾರಿಗುಂಟು ಯಾರಿಗಿಲ್ಲ" ಮಹಿಳೆಯರ ಮನರಂಜನಾ ಸ್ಪರ್ಧೆ, ಮತ್ತೊಮ್ಮೆ ಕಿರುತರೆಯ ಮೇಲೆ ಮೂಡಿಬರಲಿದೆ. ಖ್ಯಾತ ತಾರೆ ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕಿ ವರ್ಷ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ವಿಶೇಷವಾಗಿ ಮಹಿಳೆಯರಿಗೆ ರೂಪಿಸಿರುವ ಈ ಕಾರ್ಯಕ್ರಮವು ಜುಲೈ8 ರಿಂದ ಪ್ರತಿ ಬುಧವಾರ ಮತ್ತು ಗುರುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. 18 ರಿಂದ 35 ವರ್ಷದೊಳಗಿನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಈ ಬಾರಿಯ "ಯಾರಿಗುಂಟು ಯಾರಿಗಿಲ್ಲ" ಕಾರ್ಯಕ್ರಮ ಕಂತುಗಳಲ್ಲಿ ಪ್ರಸಾರವಾಗಲಿದೆ.
ಪ್ರತಿ ಕಂತಿನಲ್ಲಿ ನಾಲ್ಕು ಜನ ಸ್ಪರ್ಧಿಗಳಿದ್ದು ನಾಲ್ಕು ಸುತ್ತು ಹೊಂದಿರುತ್ತದೆ. ಪ್ರತಿ ಕಂತನ್ನು ಮನೋರಂಜಕವಾಗಿ ನಿರ್ಮಿಸಲಾಗಿದ್ದು ಪ್ರತಿ ಸುತ್ತಿನಲ್ಲಿ ಸದಸ್ಯರಿಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತೀ ದಿನದಲ್ಲಿ ನಡೆಯುವ ಸನ್ನಿವೇಶ ಆಧಾರಿತ ಸುಲಭದ ಪ್ರಶ್ನೆಗಳಿಗೆ ಉತ್ತರಿಸಿ ಹಣ ಮತ್ತು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಭಾಗವಹಿಸುವವರಿಗಿದೆ. ಸ್ಪರ್ಧಿಗಳ ಚುರುಕುತನ ಮತ್ತು ಅದೃಷ್ಟ, ಕಾರ್ಯಕ್ರಮದ ವಿಜೇತರನ್ನಾಗಿ ಮಾಡುವಲ್ಲಿ ಸಹಕರಿಸುತ್ತದೆ ಎಂದು ಜೀ ಕನ್ನಡದ ನಾನ್ ಫಿಕ್ಷನ್ ಮುಖ್ಯಸ್ಥೆ ವೈಷ್ಣವಿ ಹೇಳುತ್ತಾರೆ.
ನಾಲ್ಕು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಬೇರೆ ಬೇರೆ ಸನ್ನಿವೇಶ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. 'ಸೂಪರ್ 5' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಕೇಳಲಾದ ಪ್ರಶ್ನೆಗೆ ಉತ್ತರಗಳನ್ನು ನೀಡಬೇಕು. ಇನ್ನು ಎರಡನೇ ಸುತ್ತಿನ ಹೆಸರು "ಲಕ್ ಬೈ ಚಾನ್ಸ್" ಈ ಸುತ್ತಿನಲ್ಲಿ ಸ್ಪರ್ಧಿಗಳಿಗೆ ತಲಾ ಒಂದು ಪ್ರಶ್ನೆ ಕೇಳಲಾಗುವುದು. ಸರಿಯಾದ ಉತ್ತರ ನೀಡಿದವರಿಗೆ ಈ ರೌಂಡ್ನಲ್ಲಿ ಅದೃಷ್ಟ ಚಕ್ರವನ್ನು ನೀಡಲಾಗುತ್ತದೆ. "ಬಿಡ್ ಮಾಡಿ ದುಡ್ಡ್ ಮಾಡಿ" ಎಂದು. ಈ ಸುತ್ತಿನಲ್ಲಿ ಸ್ಫರ್ಧಿಗಳು ಅವರ ಇತರೆ ಸ್ಪರ್ಧಿಗಳ ಮೇಲೆ ಅವರು ಗೆದ್ದಿರುವ ಹಣದಲ್ಲಿ ಸ್ಪರ್ಧಿಗಳಿಗೆ ಇಷ್ಟವಾಗುವಷ್ಟು ದುಡ್ಡುನ್ನು ಬಿಡ್ ಮಾಡಬಹುದು. ಕೊನೆಯ ಸುತ್ತು "ಯಾರಿಗುಂಟು ಯಾರಿಗಿಲ್ಲ" ಈ ಸುತ್ತಿನಲ್ಲಿ ಉಳಿದಿರುವ ಇಬ್ಬರು ಸ್ಪರ್ಧಿಗಳ ನಡುವೆ ಯಾರು ಗೆಲ್ಲತ್ತಾರೆ ಎನ್ನುವ ನಿರ್ಣಾಯಕ ಸುತ್ತು. ಪ್ರತಿ ಕಂತಿನ ವಿಜೇತರಿಗೆ ಪ್ರಾಯೋಜಕರಿಂದ ಆಕರ್ಷಕ ಬಹುಮಾನ ಸಹ ಇದೆ.
ಜೀ ಕನ್ನಡ ವಾಹಿನಿಯು ಜನರಿಗೆ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನೇ ನೀಡುತ್ತಾ ಬಂದಿದೆ, ಜನರ ಅಭಿರುಚಿಯನ್ನು ಅರ್ಥ ಮಾಡಿಕೊಂಡಿರುವ ಜೀ ಕನ್ನಡ, ಮಹಿಳೆಯರಿಗಾಗಿ ಪೂರ್ತಿ ಪ್ರಮಾಣದಲ್ಲಿ ಮೀಸಲಿಟ್ಟ ಕಾರ್ಯಕ್ರಮದ ಅಗತ್ಯವನ್ನು ಗಮನಿಸಿ "ಯಾರಿಗುಂಟು ಯಾರಿಗಿಲ್ಲ" ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸುತ್ತಿದೆ" ಎಂದು ಜೀ ಕನ್ನಡದ ಮುಖ್ಯಸ್ಥ ಶೇಖರ್ ಹೇಳುತ್ತಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)