Just In
- 22 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 23 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- News
ಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟು
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ 18ರ ಮುಂಜಾನೆಯಿಂದ ಜನಶ್ರೀ ನ್ಯೂಸ್
ಕಳೆದ ಕೆಲವು ತಿಂಗಳಿಂದ ಜನಶ್ರೀ ವಾಹಿನಿ ದೀಪಾವಳಿಗೆ ಆರಂಭವಾಗುತ್ತದೆ, ಇಲ್ಲ ಇಲ್ಲ ರಾಜ್ಯೋತ್ಸವಕ್ಕಂತೆ, ಹೊಸ ವರ್ಷಕ್ಕೆ ಗ್ಯಾರಂಟಿ, ಸಂಕ್ರಾಂತಿ ಹಬ್ಬಕ್ಕೆ ಎಳ್ಳುಬೆಲ್ಲ ಬೀರಲಿದೆ...ಹೀಗೆ ಪುಂಕಾನು ಪುಂಕ ಸುದ್ದಿಗಳು ಮಾಧ್ಯಮ ವಲಯದಲ್ಲಿ ಕಿವಿಯಿಂದ ಕಿವಿಗೆ ಹರಿದಾಡಿದ್ದವು. ಜನಶ್ರೀ ವಾಹಿನಿ ಆರಂಭವಾಗುತ್ತದೋ ಇಲ್ಲವೋ ಎಂಬ ಗುಮಾನಿಯೂ ಸಣ್ಣಗೆ ಸುಳಿದಾಡಿತ್ತು.
"ಇದೇ ಫೆಬ್ರವರಿ 18ರ ಮುಂಜಾನೆ.... ಕನ್ನಡ ಟಿವಿ ಜಗತ್ತಿನಲ್ಲಿ ಒಂದು ಹೊಸ ಕಿರಣ... ಜನಶ್ರೀ ನ್ಯೂಸ್.... ಜನಮನ ದನಿ... ಜನರ ಬಳಿಗೆ ಜನಶ್ರೀ ಬಳಗ" ಎಂಬ ಬಣ್ಣದ ಜಾಹೀರಾತು ಇಂದಿನ (ಫೆ.5) 'ವಿಜಯ ಕರ್ನಾಟಕ' ಮುಖಪುಟದಲ್ಲಿ ಲಕಲಕ ಎಂದು ಹೊಳೆಯುತ್ತಿದೆ.
ಇಷ್ಟಕ್ಕೂ ಫೆಬ್ರವರಿ 18ರಂದು ಅಂತಹ ವಿಶೇಷ ಏನಿದೆ ಎಂದು ಕ್ಯಾಲೆಂಡರ್ ತಿರುವಿದರೆ ಅಂದು 'ಭರತ ಹುಣ್ಣೆಮೆ' ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನಶ್ರೀ ವಾಹಿನಿಗೆ ಒಳ್ಳೆಯ ಮುಹೂರ್ತವನ್ನೇ ರೆಡ್ಡಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ಕೋರಮಂಗಲ ಬಿಗ್ ಬಜಾರ್ನ ನಾಲ್ಕನೆ ಮಹಡಿಯಲ್ಲೀಗ ಸಂಭ್ರಮದ ವಾತಾವರಣ ಮನೆಮಾಡಿದೆ.
ಸುಮಾರು ಹತ್ತು ವರ್ಷಗಳಿಂದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅನಂತ ಚಿನಿವಾರ ಅವರ ಸಂಪಾದಕತ್ವದಲ್ಲಿ ಜನಶ್ರೀ ವಾಹಿನಿ ಪ್ರಸಾರ ಆರಂಭಿಸಲಿದೆ. ಅಭಿಮಾನ ಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಚಿನಿವಾರ ಬಳಿಕ ಸ್ಟಾರ್ ಆಫ್ ಮೈಸೂರು, ಟಿವಿ ಟುಡೆ, ಇಂಡಿಯನ್ ಎಕ್ಸ್ಪ್ರೆಸ್, ದಿನತಂತಿ, ಉದಯ ಟಿವಿ, ಸುವರ್ಣ ಮತ್ತು ಓ ಮನಸೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಅವರು 'ಬ್ರೇಕ್ಫಾಸ್ಟ್' ಎಂಬ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.