Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂತ್ರಾಲಯಕ್ಕೆ ರಾಘವೇಂದ್ರ ವೈಭವ ನಿರ್ಮಾಪಕರು
ಇತ್ತೀಚೆಗೆ ಧಾರಾವಾಹಿಯ ನಿರ್ಮಾಪಕರಾದ ಅನಿತಾಪಟ್ಟಾಭಿರಾಮ್ ದಂಪತಿಗಳು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಗ್ರಾಮದೇವತೆ ಮಂಚಾಲಮ್ಮ, ಶ್ರೀರಾಘವೇಂದ್ರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮಠದ ದಿವಾನರಾದ ರಾಜಾ ಎಸ್ ಭಂಡಾಚಾರ್ ಅವರು ಮಠದ ಸಂಪ್ರದಾಯದಂತೆ ದಂಪತಿಗಳನ್ನು ಸನ್ಮಾನಿಸಿದರು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾಯದರ್ಶಿ ಸುಯಮೀಂದ್ರಾಚಾರ್ ಅವರು ಶ್ರೀಮಠದ ದಿನಚರಿ, ಕ್ಯಾಲೆಂಡರ್ ನೀಡಿ ದಂಪತಿಗಳನ್ನು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ನಿರ್ಮಾಪಕರು ಮಾತನಾಡುತ್ತಾ, ರಾಯರ ಆಶೀರ್ವಾದದಿಂದ ಈ ಧಾರಾವಾಹಿಯನ್ನು ಚಿತ್ರೀಕರಿಸುತ್ತಿದ್ದೇವೆ. ಇದುವರೆಗೂ 495 ಸಂಚಿಕೆಗಳನ್ನು ಪೂರೈಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಬೃಂದಾವನ ಪಟ್ಟಾಭಿಷೇಕವನ್ನು ಚಿತ್ರೀಕರಿಸುತ್ತಿರಬೇಕಾದರೆ ಒಂದು ಅಪೂರ್ವ ಘಟನೆ ನಡೆಯಿತು.
ಎರಡು ಗರುಡ ಪಕ್ಷಿಗಳು ಚಿತ್ರೀಕರಣ ಸ್ಥಳದಲ್ಲೇ ಸುದೀರ್ಘ ಸಮಯ ಕಳೆದದ್ದು ನಿಜಕ್ಕೂ ನಮ್ಮನ್ನು ಮಂತ್ರಮುಗ್ಧಗೊಳಿಸಿತು. ರಾಯರ ಮಹಿಮೆಗಳನ್ನು ಸಾರುವ ಇನ್ನೂ ನೂರು ಎಪಿಸೋಡುಗಳನ್ನು ಚಿತ್ರೀಕರಿಸಲಿದ್ದೇವೆ ಎಂದು ನಿರ್ಮಾಪಕರು ತಿಳಿಸಿದರು. (ಏಜೆನ್ಸೀಸ್)